ಮೋದಿ ನಿರಶನ ಮಾಡುತ್ತಾರಂತೆ!! ಅಸಮಾಧಾನ ವ್ಯಕ್ತಪಡಿಸಿದ ಮೋದಿ ಕಾರಣ ಏನೆಂದು ತಿಳಿಯಿರಿ

ಮೋದಿ ನಿರಶನ ಮಾಡುತ್ತಾರಂತೆ!! ಅಸಮಾಧಾನ ವ್ಯಕ್ತಪಡಿಸಿದ ಮೋದಿ ಕಾರಣ ಏನೆಂದು ತಿಳಿಯಿರಿ

0

ಪ್ರತಿಪಕ್ಷಗಳು ಸಂಸತ್‌ನಿಂದ ಗಲ್ಲಿವರೆಗೂ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಉಂಟುಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಚಂಪಾರಣ್ಯ ಸತ್ಯಾಗ್ರಹದ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ 20 ಸಾವಿರ ಸ್ವಚ್ಛಗ್ರಾಹಿಗಳನ್ನು (ಸ್ವಚ್ಛತಾ ಸ್ವಯಂ ಸೇವಕರು) ಉದ್ದೇಶಿಸಿ ಮಾತನಾಡಿದ ಮೋದಿ ಅವರು, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಧ್ಯೇಯದೊಂದಿಗೆ ನಮ್ಮ ಸರಕಾರ ಎಲ್ಲ ವರ್ಗದವರ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಹತಾಶ ಮನಸ್ಥಿತಿಯ ಪ್ರತಿಪಕ್ಷಗಳು ಅದಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಅಡ್ಡಿಪಡಿಸುತ್ತಿವೆ. ಸಂಸತ್ತಿನ ಒಳಗೆ ಹಾಗೂ ಹೊರಗೆ ಇದೇ ಚಾಳಿ ತೋರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರಕಾರ ಎಲ್ಲ ವರ್ಗದವರನ್ನು ಒಟ್ಟುಗೂಡಿಸಿ ಏಕತೆಯೊಂದಿಗೆ ದೇಶದ ಪ್ರಗತಿಗೆ ದೂರದೃಷ್ಟಿಯ ಯೋಜನೆಗಳನ್ನು ಕೈಗೊಳ್ಳುತ್ತಿದ್ದರೆ, ಪ್ರತಿಪಕ್ಷಗಳು ಸಮುದಾಯಗಳ ಮಧ್ಯೆ ಒಡಕು ಮೂಡಿಸುವ ಕೆಲಸ ಮಾಡುತ್ತಿವೆ. ಅವರಿಗೆ ಅಭಿವೃದ್ಧಿ ಯೋಜನೆಗಳು ಬೇಕಿಲ್ಲ. ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ವಿನಾಕಾರಣ ದಲಿತರನ್ನು ಸರಕಾರದ ವಿರುದ್ಧ ಎತ್ತಿಕಟ್ಟುತ್ತಿವೆ’ ಎಂದು ಆಪಾದಿಸಿದರು. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಖಂಡಿಸಿ ಭಾರತ್‌ ಬಂದ್‌ ನಡೆದ ವೇಳೆ ಘಟಿಸಿದ ಹಿಂಸಾಚಾರ ಹಾಗೂ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲವನ್ನು ಪ್ರಧಾನಿ ನೇರವಾಗಿ ಪ್ರಸ್ತಾಪ ಮಾಡದಿದ್ದರೂ, ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಮಾತನಾಡಿದ್ದು ಸ್ಪಷ್ಟ.

ಇದೇ ವೇಳೆ ಸ್ವಚ್ಛತೆ ಹಾಗೂ ಆಡಳಿತದ ವಿಚಾರದಲ್ಲಿ ಬಿಹಾರ ಗಮನಾರ್ಹ ಸುಧಾರಣೆ ಕಂಡಿದೆ. ಭ್ರಷ್ಟರ ಹಾಗೂ ಸಮಾಜ ವಿರೋಧಿ ಶಕ್ತಿಗಳ ದಮನಕ್ಕೆ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುವ ಮೂಲಕ ಸಿಎಂ ನಿತೀಶ್‌ ಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇದಿಕೆಯನ್ನು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡರು.

ಕೇಂದ್ರ ಸಚಿವರ ದಂಡೇ ಹಾಜರಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ವಿವಿಧ ರಾಜ್ಯಗಳ ಆರು ಮಹಿಳೆಯರು ಸೇರಿ ಒಟ್ಟು 10 ಸ್ವಚ್ಛಗ್ರಾಹಿಗಳಿಗೆ ತಲಾ 51 ಸಾವಿರ ರೂ. ನಗದು, ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಅಧಿಕ ಅಶ್ವಶಕ್ತಿ ಎಂಜಿನ್‌

ಬಿಹಾರದ ಮಾಧೇಪುರದಲ್ಲಿ ದೇಶದ ಮೊದಲ 12,000 ಅಶ್ವಶಕ್ತಿ ಸಾಮರ್ಥ್ಯ‌ದ ವಿದ್ಯುತ್‌ ಚಾಲಿತ ರೈಲು ಎಂಜಿನ್‌ ತಯಾರಿಸುವ ಕಾರ್ಖಾನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇಲ್ಲಿ ಮುಂದಿನ 11 ವರ್ಷಗಳಲ್ಲಿ 800 ಎಂಜಿನ್‌ ತಯಾರಿಸುವ ಗುರಿ ಹೊಂದಲಾಗಿದೆ. ಆ ಮೂಲಕ 12,000 ಅಶ್ವಶಕ್ತಿ ಸಾಮರ್ಥ್ಯ‌ದ ಎಂಜಿನ್‌ ಹೊಂದಿರುವ ದೇಶಗಳ ಸಾಲಿನಲ್ಲಿ ರಷ್ಯಾ, ಚೀನಾ, ಜರ್ಮನಿ, ಸ್ವೀಡನ್‌ ಜತೆ ಭಾರತವೂ ಸೇರ್ಪಡೆಯಾಗಲಿದೆ

ನಾಳೆ ಇಡೀದಿನ ಪ್ರಧಾನಿ ಉಪವಾಸ.

ಹೊಸದಿಲ್ಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ದ್ವಿತೀಯಾರ್ಧದ ಕಲಾಪಗಳಿಗೆ ಪದೇಪದೆ ಅಡ್ಡಿಪಡಿಸುವ ಮೂಲಕ ಅಮೂಲ್ಯ ಸಮಯವನ್ನು ಹಾಳುಗೆಡವಿದ ಪ್ರತಿಪಕ್ಷಗಳ ಧೋರಣೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದರು ಏಪ್ರಿಲ್‌ 12ರಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಚುನಾವಣಾ ಪ್ರಚಾರ ನಿಮಿತ್ತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಅದೇ ದಿನ ಹುಬ್ಬಳ್ಳಿಯಲ್ಲಿ ನಿರಶನ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಕುರಿತ ಸುಪ್ರೀಂ ತೀರ್ಪು, ಪಿಎನ್‌ಬಿ ವಂಚನೆ ಹಗರಣ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಹೀಗೆ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸಂಸತ್‌ ಅಧಿವೇಶನದುದ್ದಕ್ಕೂ ಕೋಲಾಹಲ ನಡೆಸಿಕೊಂಡು ಬಂದಿದ್ದವು. ಬಹುತೇಕ ಕಲಾಪದ ಅವಧಿ ಚರ್ಚೆ ಇಲ್ಲದೇ ವ್ಯರ್ಥವಾಗಿತ್ತು. ಪ್ರತಿಪಕ್ಷಗಳ ಈ ವರ್ತನೆ ಖಂಡಿಸಿ ಬಿಜೆಪಿ ಸಂಸದರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

ಗುರುವಾರದ ನಿರಶನದ ವೇಳೆ ಮೋದಿ ಅವರ ಆಡಳಿತಾತ್ಮಕ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಉಪವಾಸ ಕುಳಿತ ಸ್ಥಳದಿಂದಲೇ ಅವರು ಕಡತಗಳ ವಿಲೇವಾರಿ ಹಾಗೂ ಅಧಿಕಾರಿಗಳೊಂದಿಗೆ ದೈನಂದಿನ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದಕ್ಕೂ ಮುನ್ನಾ ದಿನವಾದ ಬುಧವಾರ (ಏ.11) ಬಿಜೆಪಿ, ಸಮಾಜ ಸುಧಾರಕ ಜ್ಯೋತಿಬಾ ಪುಲೆ ಅವರ ಜನ್ಮದಿನವನ್ನು ‘ಸಮತಾ ದಿವಸ’ವಾಗಿ ಆಚರಿಸಲಿದೆ.

ಅಭಿವೃದ್ಧಿಗಾಗಿ ಉಪವಾಸ ಮಾಡುವ ಪ್ರಧಾನಿ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ನಿಜ ಅನಿಸಿದರೆ ಶೇರ್ ಮಾಡಿ.

ಓದಿ:

  1. ಸ್ಪೋಟಕ ಮಾಹಿತಿ:ಮೋದಿ ಕುಟುಂಬದ ಆಸ್ತಿ ಕೊನೆಗೂ ಬಹಿರಂಗ ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!
  2. “ನೀವು ನರೇಂದ್ರ ಮೋದಿಯನ್ನು ಒಂದೇ ವಾಕ್ಯದಲ್ಲಿ ಹೇಗೆ ವರ್ಣಿಸುತ್ತೀರಿ?” ಎಂದು ಕೇಳಿದಾಗ!! DRDO ವಿಜ್ಞಾನಿಯ ಅಧ್ಬುತ ಉತ್ತರ…. ಓದಿ ಗರ್ವದಿಂದ ಶೇರ್ ಮಾಡಿ.
  3. ಮೋದಿಜಿ ಕರೆಗೆ ಓಗೊಟ್ಟು ತಮ್ಮ ವಿಮಾನಕ್ಕೆ ತಾವೇ ಪೈಲಟ್ ಆಗಿ ಭಾರತಕ್ಕೆ ಬಂದಿದ್ದರು ಆ ಸುಲ್ತಾನ್..!ಅವರು ನಿಮಿಷದಲ್ಲಿ 6 ದೇಶಗಳನ್ನು ಖರೀದಿಸುವಷ್ಟು ಶ್ರೀಮಂತರಂತೆ..!!