ಹಾಡಿನಿಂದಲೇ ಚಂದನ್ ಶೆಟ್ಟಿ ಮೇಲೆ ಬಿತ್ತು ಕೇಸ್- ಸಿಸಿಬಿ ಪೊಲೀಸರಿಂದ ತನಿಖೆ

0

ಚಂದನ್ ಶೆಟ್ಟಿ ರವರು ಕನ್ನಡದ ಮೊದಲ ರಾಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರ ಹಾಡಿಗೆ  ಮನಸೋಲದವರು ಯಾರು ಇಲ್ಲ. ಬಿಗ್ ಬಾಸ್ ನಲ್ಲಿ ಇವರ ಹಾಡು ಬರೆಯುವ ಕಲೆಗಾರಿಕೆಯನ್ನು ಜನ ಬಹಳ ಮೆಚ್ಚಿಕೊಂಡಿದ್ದರು. ನಿಂತಲ್ಲೇ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಮೇಲೆ ಹಾಡು ಬರೆಯುವುದು ಇವರಿಗೆ ನೀರು ಕುಡಿದಷ್ಟೇ ಸುಲಭ.

ಆದರೆ ಚಂದನ್ ಶೆಟ್ಟಿ ರವರಿಗೆ ಈಗ ಸಂಕಷ್ಟ ಎದುರಾಗಿದೆ, ವಿಷಾದಕರ ಸಂಗತಿ ಏನೆಂದರೆ ಇವರ ಹಾಡಿನಿಂದಲೇ ಇವರ ಮೇಲೆ ಕೇಸ್ ಒಂದು ದಾಖಲಾಗಿದೆ.  ಚಂದನ್ ಶೆಟ್ಟಿ ರವರು ಇದಕ್ಕೆ ಇನ್ನೂ ಸ್ಪಷ್ಟೀಕರಣ ನೀಡಿಲ್ಲ, ಇದಕ್ಕೆ ಸಿಸಿಬಿ ಪೊಲೀಸರಿಂದ ತನಿಖೆ ಯಾಗುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಅಂತ್ಯ ಎಂಬ ಶೀರ್ಷಿಕೆಯಡಿಯಲ್ಲಿ ಚಂದನ್ ಶೆಟ್ಟಿ ಯವರು ಒಂದು ಹಾಡನ್ನು ಬಿಡುಗಡೆಗೊಳಿಸಿದ್ದರು.  ಆ ಹಾಡಿನಲ್ಲಿ ಕೇವಲ ಮನರಂಜನೆಗಾಗಿ  ಗಾಂಜಾ ಕುಡಿದು ಮತ್ತಿನಲ್ಲಿ ನಗುತಿರುವ ಎಂಬ ಸಾಲು ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ರವರನ್ನು  ಕೋರ್ಟಿಗೆ ಹಾಜರಾಗುವಂತೆ  ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಸಾಲುಗಳು ಮಾದಕ ವಸ್ತುಗಳ ವಸ್ತುಗಳನ್ನು ಬಳಸಲು ಪ್ರಚೋದನೆ ನೀಡಿದಂತಿದೆ, ಸಾಮಾಜಿಕ ಕಳಕಳಿಯಿಂದ ಇಂತಹ ಸಾಲುಗಳು ಯಾವುದೇ ಹಾಡುಗಳಲ್ಲಿ  ಇರಬಾರದು ಆದ್ದರಿಂದ ಚಂದನ್ ಶೆಟ್ಟಿ ರವರ ಮೇಲೆ ಸಿಸಿಬಿ ಪೊಲೀಸರು ಕೇಸ್ ಜಡಿದಿದ್ದಾರೆ.