ಪ್ರವಾಸ ಹೊರಟ ಕುಮಾರಸ್ವಾಮಿ – ಈ ಪ್ರಶ್ನೆಗಳಿಗೆ ಉತ್ತರಿಸಿ ಹೊರಡಿ !!

ಪ್ರವಾಸ ಹೊರಟ ಕುಮಾರಸ್ವಾಮಿ – ಈ ಪ್ರಶ್ನೆಗಳಿಗೆ ಉತ್ತರಿಸಿ ಹೊರಡಿ !!

0

ನಿಮಗೆಲ್ಲ ಗೊತ್ತಿರುವ ಹಾಗೆ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಮೇಲೆ ದೇವಾಲಯಗಳಿಗೆ ಭೇಟಿ ನೀಡಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಎಂಬತ್ತು ದಿನಗಳಲ್ಲಿ 42 ದೇವಸ್ಥಾನಗಳಿಗೆ ಭೇಟಿ ಮಾಡಿ ದಾಖಲೆ ಮಾಡಿ ಯಾರಾದರೂ ಪ್ರಶ್ನಿಸಿದರೆ ರಾಜ್ಯ ಆರ್ಥಿಕ ಸಂಕಷ್ಟದಲ್ಲಿದೆ  ಆದ್ದರಿಂದ ನಾನು ಖರ್ಚು ಕಡಿಮೆ ಮಾಡುತ್ತಿದ್ದೇನೆ ಎಂದು ಬೀಗಿ ಕೊಳ್ಳುವ ಕುಮಾರಸ್ವಾಮಿ ರವರು ಈಗ ಮತ್ತೊಮ್ಮೆ ಪ್ರವಾಸ ಹೊರಟಿದ್ದಾರೆ.

ಅಷ್ಟಕ್ಕೂ ಎಲ್ಲಿಗೆ ಪ್ರವಾಸ ಏನದು ವಿವರ?

ವಿಶೇಷ ವಿಮಾನದಲ್ಲಿ ನಾಳೆ ಬೆಳಗ್ಗೆ ರಾಜಸ್ಥಾನ ತೆರಳಲಿದ್ದು. ಅಜ್ಮೀರ್ ಜಿಲ್ಲೆಯ ಪುಷ್ಕರ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿರುವ ಬ್ರಹ್ಮ ದೇವಾಲಯಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ ನಂತರ ಅಜ್ಮೀರ್ ದರ್ಗಾಗೆ ಭೇಟಿ ನೀಡಲಿದ್ದಾರೆ. ಪ್ರವಾಸ ಮುಗಿಸಿ ನಾಳೆ ಸಂಜೆಯೇ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ರವರೇ ಈ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಪ್ರವಾಸಕ್ಕೆ ಹೊರಡಿ !

ದೇವಾಲಯ ಗೆ ಭೇಟಿ ನೀಡುವಾಗ ನಿಮ್ಮ ಖರ್ಚುಗಳು ನಿಮಗೆ ಕಾಣಿಸುವುದಿಲ್ಲವೇ? ಅಥವಾ ನೀವು ನಿಮ್ಮ ಸ್ವಂತ ದುಡ್ಡಿನಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೀರಾ?

ಕೊಡಗು ಜಿಲ್ಲೆಯಲ್ಲಿ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ, ದೇವಾಲಯಕ್ಕೆ ಇಲ್ಲಿಂದಲೇ ನಮಿಸಿ ನೀವು ಹಣವನ್ನು ಕೊಡಗಿನ ಮರು ನಿರ್ಮಾಣಕ್ಕೆ ಯಾಕೆ ಬಳಸಬಾರದು?

ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದೆ,  ನೀವು ವಿಶೇಷ ವಿಮಾನದ ಬದಲು ಸಾಮಾನ್ಯದ ವಿಮಾನ ಯಾಕೆ ಬಳಸಬಾರದು?

ನೀವು ಮುಖ್ಯಮಂತ್ರಿಯಾಗಿ ರಜೆ ತೆಗೆದುಕೊಂಡು ಪ್ರವಾಸಕ್ಕೆ ಹೋಗುತ್ತಿದ್ದೀರಾ? ಅಥವಾ ಮುಖ್ಯಮಂತ್ರಿಯಾಗಿ ರಾಜ್ಯದ ಸಕಲ ಸವಲತ್ತುಗಳಲ್ಲಿ  ಪ್ರವಾಸಕ್ಕೆ  ಹೊರಟಿದ್ದೀರಾ?

ಹೀಗೆ ಹೇಳುತ್ತಾ ಹೊರಟರೆ ನಮಗೆ ಸಾವಿರ ಪ್ರಶ್ನೆಗಳು ಉದ್ಬವಿಸುತ್ತವೆ. ನೀವು ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತದೆ ದಯವಿಟ್ಟು ಇಷ್ಟು ಪ್ರಶ್ನೆಗಳಿಗೆ ಉತ್ತರಿಸಿ ಸಾಕು.

ನಾವು ಪ್ರಶ್ನಿಸಲು ಯಾರು ಎಂದು ಕೇಳಬೇಡಿ? ನೆನಪಿರಲಿ ಇದು ಪ್ರಜಾಪ್ರಭುತ್ವ ಪ್ರತಿಯೊಬ್ಬ ಪ್ರಜೆಯೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಈ ಮಾತನ್ನು ಯಾಕೆ ಹೇಳಿದೆ ಎಂದರೆ ಕೊಪ್ಪಳದಲ್ಲಿ ನನಗೆ ಮತ ನೀಡದ ಜನರು ನನ್ನನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ನೀವೇ ಹೇಳಿದ್ದೀರಿ ಅದಕ್ಕಾಗಿ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಯಲಿ ಎಂದು ಹೇಳುತ್ತಿದ್ದೇನೆ.

– ರವಿ