ತನ್ನ ನಾಡಿನ ಜನರ ನೆರವಿಗೆ ಪಯಣ ಬೆಳೆಸಿದ ಮುದ್ದು ಮುಖದ ಹುಡುಗಿ

ತನ್ನ ನಾಡಿನ ಜನರ ನೆರವಿಗೆ ಪಯಣ ಬೆಳೆಸಿದ ಮುದ್ದು ಮುಖದ ಹುಡುಗಿ

0

ಹರ್ಷಿಕ ಪೂಣಚ್ಚ ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಸ್ಯಾಂಡಲ್ ವುಡ್ ನಲ್ಲಿ ತಮ್ಮ ನಟನೆಯಿಂದ  ತಮ್ಮದೇ ಆದ ಛಾಪು ಮೂಡಿಸಿರುವ ಹರ್ಷಿಕ ಪೂಣಚ್ಚ ರವರು ಕೊಡಗಿನ ತಮ್ಮ ಜನರಿಗೆ ಸಹಾಯದ ಹಸ್ತವನ್ನು ಚಾಚುತ್ತಿದ್ದಾರೆ.

ಹಲವಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕೊಡಗಿನ ಜನರು ಅಕ್ಷರಶಃ  ನಲುಗಿ ಹೋಗಿದ್ದಾರೆ. ಹಲವರು ಜನ ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡರೆ ಇನ್ನು ಕೆಲವು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇತ್ತ ಒಂದು ಕಡೆ ಸೇನೆಯು ಪ್ರಾಣವನ್ನು ಪಣಕ್ಕಿಟ್ಟು ಜನರ ರಕ್ಷಣೆಯಲ್ಲಿ ತೊಡಗಿದ್ದರೆ ಇನ್ನು ಕೆಲವರು ತಮ್ಮ ಉದಾರ ಮನಸ್ಸಿನಿಂದ ಕೊಡಗಿನ ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.  ಅದರಂತೆಯೇ ಹರ್ಷಿಕ ಪೂಣಚ್ಚ ರವರು ಕೊಡಗಿನ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ಎರಡು ವಾಹನಗಳಲ್ಲಿ ತುಂಬಿಕೊಂಡು ಕೊಡಗಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಹರ್ಷಿಕ ಪೂಣಚ್ಚ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ದಯವಿಟ್ಟು ನೀವು ನಿಮ್ಮ ಕೈಲಾದ ಸಹಾಯವನ್ನು ಮಾಡಿ. ಧನ್ಯವಾದಗಳು