ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರು ಚಿನ್ನದ ಉಂಗುರ ಕೈಗೆ ಹಾಕಬೇಡಿ, ಯಾಕೆ ಮತ್ತು ಯಾರ್ಯಾರು ಗೊತ್ತೇ??

ಅಪ್ಪಿ ತಪ್ಪಿಯೂ ಕೂಡ ಈ ಮೂರು ರಾಶಿಯವರು ಚಿನ್ನದ ಉಂಗುರ ಕೈಗೆ ಹಾಕಬೇಡಿ, ಯಾಕೆ ಮತ್ತು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮನುಷ್ಯ ಅಂದ ಮೇಲೆ ಆಸೆ ಇದ್ದಿರಲೇಬೇಕು. ಅದರಲ್ಲಿ ಕೂಡ ಮನುಷ್ಯನಿಗೆ ಹಣ ಆಸ್ತಿ ಆಭರಣ ಮಾಡುವ ಆಸೆಗಳು ಪ್ರಬುದ್ಧರಾದ ಮೇಲೆ ಬಂದೇ ಬರುತ್ತದೆ. ಇನ್ನು ಆಭರಣದ ವಿಷಯಕ್ಕೆ ಬಂದರೆ ಆಭರಣವನ್ನು ಹೆಚ್ಚಾಗಿ ಇಷ್ಟಪಡುವುದು ಹೆಣ್ಣುಮಕ್ಕಳು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಇಂದು ನಾವು ಹೇಳಹೊರಟಿರುವ ವಿಚಾರಕ್ಕೆ ಆಭರಣದ ಸಂಬಂಧ ನೇರವಾಗಿ ಇದೆ.

ನಿಮಗೆ ಗೊತ್ತಾ ಸ್ನೇಹಿತರೆ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಆಭರಣಗಳು ಅಂದರೆ ಚಿನ್ನ ಮಾರಾಟವಾಗುವುದು ನಮ್ಮ ಭಾರತ ದೇಶದಲ್ಲಿ. ಚಿನ್ನ ಎಂದರೆ ಸಾಕು ನಮ್ಮ ಭಾರತ ದೇಶದ ಮಹಿಳೆಯರಿಗೆ ವಿಶೇಷವಾದ ಪ್ರೀತಿ ಹಾಗೂ ಮಾಮತೆ ಎಂದರೆ ತಪ್ಪಾಗಲಾರದು. ಅದಕ್ಕಾಗಿಯೇ ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಚಿನ್ನವನ್ನು ಕೊಳ್ಳುವ ದೇಶವೆಂದರೆ ನಮ್ಮ ಭಾರತ ಆಗಿಬಿಟ್ಟಿದೆ. ಅದರಲ್ಲೂ ಮಹಿಳೆಯರು ಅಕ್ಷಯ ತೃತೀಯ ಬಂದರೆ ಸಾಕು ಆಭರಣಗಳನ್ನು ಖಂಡಿತವಾಗಿಯೂ ಸಾಲ ಮಾಡಿಯಾದರೂ ಕೂಡ ತೆಗೆದುಕೊಳ್ಳುತ್ತಾರೆ

ಇನ್ನು ಕೆಲವೊಮ್ಮೆ ಒಳ್ಳೆಯ ದಿನ ನೋಡಿ ಆಭರಣ ತೆಗೆದುಕೊಂಡರೆ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಕೂಡ ಇದೆ. ನೀವು ನಂಬುತ್ತೀರೋ ಬಿಡುತ್ತೀರೋ ಸಂತಾನವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಏನಾದರೂ ಸಮಸ್ಯೆಗಳು ನಡೆಯುತ್ತಿದ್ದರೆ ಅದು ಕೂಡ ಪರಿಹಾರವಾಗುವ ಸಾಧ್ಯತೆಗಳು ಕೂಡ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಇನ್ನು ಆಭರಣ ಎಂದು ಬಂದಾಗ ಚಿನ್ನದಲ್ಲಿ ಉಂಗುರಗಳು ಸಾಕಷ್ಟು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತವೆ ಸ್ನೇಹಿತರೇ.

ಉಂಗುರ ಗಳಲ್ಲಿ ಕೂಡ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಲವಾರು ಹರಳುಗಳನ್ನು ಹಾಗೂ ರತ್ನಗಳನ್ನು ಹಾಕಿಕೊಳ್ಳುವುದು ಜ್ಯೋತಿಷ್ಯದ ಪ್ರಕಾರ ಒಳ್ಳೆಯದಾಗಿರುತ್ತದೆ. ಆದರೆ ಉಂಗುರ ಎನ್ನುವುದು ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರಿಗೆ ಸಾಕಷ್ಟು ಕೆಟ್ಟದಾಗಿರುತ್ತದೆ. ಹೌದು ಸ್ನೇಹಿತರೆ ಅದರಲ್ಲಂತೂ ಈ 3 ರಾಶಿಯವರು ಚಿನ್ನದ ಉಂಗುರವನ್ನು ಹಾಕಿಕೊಂಡರೆ ಖಂಡಿತವಾಗಿ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

ರಾಶಿಗಳು ಇನ್ಯಾವುವು ಅಲ್ಲ ಮೇಷ ಕನ್ಯಾ ಹಾಗೂ ಧನು ರಾಶಿ. ಹೌದು ಸ್ನೇಹಿತರೆ ಇವರು ಮರೆತು ಕೂಡ ತಮ್ಮ ಕೈಬೆರಳಿಗೆ ಚಿನ್ನದ ಉಂಗುರಗಳನ್ನು ಹಾಕಲೇಬಾರದು. ಇದರಿಂದಾಗಿ ಇವರ ಆರ್ಥಿಕ ಸಂಕಷ್ಟಗಳು ಇನ್ನಷ್ಟು ಹೆಚ್ಚಾಗಬಹುದಾದಂತಹ ಎಲ್ಲ ಸಾಧ್ಯತೆಗಳಿವೆ. ಈ ಮೂರು ರಾಶಿಯವರ ಜಾತಕದ ಪ್ರಕಾರ ಇವರು ಚಿನ್ನದ ಉಂಗುರವನ್ನು ತಮ್ಮ ಕೈ ಬೆರಳಿಗೆ ಹಾಕಿಕೊಂಡರೆ ಅವರು ಯಾವುದೇ ಕ್ಷೇತ್ರದಲ್ಲಿ ಕೂಡ ಏನು ಕೆಲಸಕ್ಕೆ ಕೈಹಾಕಿದರು ಅದರಲ್ಲಿ ಕೇವಲ ನಷ್ಟವನ್ನು ಮಾತ್ರ ಅನುಭವಿಸುತ್ತಾರೆ ಎಂಬ ಉಲ್ಲೇಖ ಕೂಡ ಇದೆ.

ಹೀಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 3 ರಾಶಿಯವರು ಚಿನ್ನದ ಉಂಗುರವನ್ನು ಹಾಕಿಕೊಳ್ಳದಿದ್ದರೆ ಮಾತ್ರ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದಾದಂತಹ ಸಾಧ್ಯತೆಗಳಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ನೀವು ಜ್ಯೋತಿಷ್ಯವನ್ನು ನಂಬುತ್ತೀರಿ ಎಂದಾದರೆ ಈ 3 ರಾಶಿಯವರು ತಪ್ಪದೆ ತಮ್ಮ ಜೀವನದಲ್ಲಿಯೂ ಕೂಡ ಕನಸಿನಲ್ಲಿಯೂ ಉಂಗುರವನ್ನು ಕೈಗೆ ಹಾಕಿಕೊಳ್ಳುವ ಯೋಚನೆ ಮಾಡಿಕೊಳ್ಳಬಾರದು. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಇಂತಹ ಚಿಕ್ಕ ವಿಷಯಗಳನ್ನು ಜಾಗ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.