Kannada Astrology: ಅದಾನಿ ಸಾಮ್ರಾಜ್ಯ ಮುಳುಗಲು, ಶನಿ ದೇವನ ಕಾಟ ಕಾರಣ. ಮುಂದೇನಾಗುತ್ತದೆ ಗೊತ್ತೇ? ಜ್ಯೋತಿಷಿಗಳು ಹೇಳುವುದು ಗೊತ್ತೇ??

Kannada Astrology: ಅದಾನಿ ಸಾಮ್ರಾಜ್ಯ ಮುಳುಗಲು, ಶನಿ ದೇವನ ಕಾಟ ಕಾರಣ. ಮುಂದೇನಾಗುತ್ತದೆ ಗೊತ್ತೇ? ಜ್ಯೋತಿಷಿಗಳು ಹೇಳುವುದು ಗೊತ್ತೇ??

Kannada Astrology: ಪ್ರಪಂಚದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅವರು ಈಗ ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅದಾನಿ ಅವರು ಕಳೆದ ವರ್ಷ ಏಷ್ಯಾ ಖಂಡದ ಅತಿದೊಡ್ಡ ಶ್ರೀಮಂತರು ಹಾಗೆಯೇ ಪ್ರಪಂಚದ ಎರಡನೇ ಅತಿದೊಡ್ಡ ಶ್ರೀಮಂತರಾಗಿದ್ದರು. ಆದರೆ ಈಗ ಅವರು ತಮ್ಮ ಶೇರ್ ಗಳಲ್ಲಿ ಭಾರಿ ಕುಸಿತ ಕಾಣುತ್ತಿದ್ದಾರೆ. ಹಿಂದಿನ 6 ತಿಂಗಳುಗಳ ಸಮಯದಲ್ಲಿ ಅದಾನಿ ಅವರ ಶೇರ್ ಬರೋಬ್ಬರಿ $91ಬಿಲಿಯನ್ ಅಷ್ಟು ಕುಸಿದಿದೆ, ಪ್ರಸ್ತುತ ಅದಾನಿ ಅವರ ಆಸ್ತಿ $59 ಬಿಲಿಯನ್. ಇದ್ದಕ್ಕಿದ್ದ ಹಾಗೆ ಈ ರೀತಿ ಕಾರಣ ಏನು ಎಂದು ನೋಡುವುದಾದರೆ, ಅದಾನಿ ಅವರ ಕುಂಡಲಿಯ ಪ್ರಕಾರ ಅವರಿಗೆ ಈಗ ಶನಿದೇವರ ಸಾಡೇಸಾತಿ ಶುರುವಾಗಿದೆ. ಇದರ ಬಗ್ಗೆ ಪೂರ್ತಿ ತಿಳಿಸುತ್ತೇವೆ ನೋಡಿ..

ಇವರಿಗೆ ಸಾಡೇಸಾತಿ ಶುರುವಾಗಿರುವುದು ಜನವರಿ 17ರಿಂದ, ಆ ದಿನದಿಂದ ಮುಂದಿನ 18 ದಿನಗಳು ಬಹಳ ನಷ್ಟ ಕಂಡು ಕಷ್ಟ ಅನುಭವಿಸಿದ್ದಾರೆ. ಇಲ್ಲಿವರೆಗೂ ಬರೋಬ್ಬರಿ 150 ಬಿಲಿಯನ್ ನಷ್ಟ ಅನುಭವಿಸಿದ್ದಾರೆ. ಶನಿದೇವರ ಸಾಡೇಸಾತಿ ಶುರು ಆದಾಗಿನಿಂದ ರಾಹು ಗ್ರಹದ ಕೃಪೆ ಮತ್ತು ಲಾಭ ಸಿಗುವುದು ನಿಂತಿದೆ ಎಂದು ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಎರಡೂವರೆ ವರ್ಷಗಳ ಕಾಲ ಅದಾನಿ ಅವರಿಗೆ ಹೀಗೆ ಕಷ್ಟದ ಸಮಯ ಇರುತ್ತದೆ. ಇವರ ಕುಂಡಲಿಯನ್ನು ನೋಡಿದರೆ, ಅಶುಭ ಪಾಪಕರ್ತರಿ ಯೋಗ ಕೂಡ ಶುರುವಾಗಿದೆ, ಈ ವೇಳೆ ಅವರಿಗೆ ಶುಕ್ರದೇವನ ಮಹಾದೆಸೆ, ರಾಹುದೇವನ ಅಂತರ ಹಾಗೂ ಪ್ರತ್ಯಂತದ ದೆಸೆ ಕೂಡ ನಡೆಯುತ್ತಿದೆ. ಇವರಿಗೆ ನಷ್ಟ ಆಗಿರುವುದು ಅದೇ ಕಾರಣಕ್ಕೆ ಎನ್ನುವುದು ಜ್ಯೋತಿಷಿಗಳು ಹೇಳಿರುವ ವಿಚಾರ. ಈ ವರ್ಷ ಜೂನ್ ತಿಂಗಳ ಬಳಿಕ ಶುಕ್ರ, ರಾಹು ಮತ್ತು ಬುಧ ಗ್ರಹಗಳಿಂದ ಕೃಪೆಯಿಂದ ಅವರಿಗೆ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಕೂಡ ಹೇಳಿದ್ದಾರೆ. ಇದನ್ನು ಓದಿ..Kannada News: ಜೆಡಿಎಸ್ ಗೆ ಬಿಗ್ ಶಾಕ್: ಭದ್ರಕೋಟೆಯಾಗುತ್ತಿದೆ ಛಿದ್ರ ಛಿದ್ರ: ಮಂಡ್ಯದಲ್ಲಿ ಏನಾಗುತ್ತಿದೆ ಗೊತ್ತೇ?? ಒಮ್ಮೆಲೇ ಮೂರು ಶಾಕ್.

ಗೌತಮ್ ಅದಾನಿ ಅವರ ಕುಂಡಲಿಯ ವಿಶ್ಲೇಷಣೆ ನೋಡುವುದಾದರೆ, ಅವರು 1962ರ ಜೂನ್ 24ರಂದು ಬೆಳಗ್ಗೆ 5:15ಕ್ಕೆ ಜನಿಸಿದರು. ಇವರು ವೃಷಭ ರಾಶಿಯವರಾಗಿದ್ದು, ಐಶ್ವರ್ಯ ಮತ್ತು ಬುದ್ಧಿಶಕ್ತಿಯು ಇವರ ಜಾತಕದಲ್ಲಿ ಅಧಿಪತಿಯಾಗಿ ಕುಳಿತಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಇವರಿಗೆ ಬುಧ ಗ್ರಹದ ಕೃಪೆ ಶುರುವಾದ ನಂತರ ಇಷ್ಟು ಎತ್ತರಕ್ಕೆ ಏರಿದರು. ಅದಾನಿ ಅವರ ಜಾತಕದ 10ನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದೆ. ಇತ್ತ ಶನಿದೇವರು ತನ್ನದೇ ರಾಶಿಯಲ್ಲಿ, ಶುಭ ಸ್ಥಾನದಲ್ಲಿ ಕೇತುಗ್ರಹದ ಜೊತೆಯಲ್ಲಿ ಇದ್ದಾರೆ. ಹಾಗೆಯೇ ಇವರ ಜಾತಕದಲ್ಲಿ ಕಾಳಸರ್ಪ ದೋಷ ಇರುವುದರಿಂದ, ಜೀವನದಲ್ಲಿ ಏಳು ಬೀಳು ಉಂಟಾಗುತ್ತದೆ..

ಹಾಗೆಯೇ ಐಶ್ವರ್ಯ ಸೂಚಿಸುವ ಶುಕ್ರಗ್ರಹದ ಶುಕ್ರದೆಸೆ ನಡೆಯುತ್ತಿದೆ, ಹಾಗೆಯೇ ರಾಹುಗ್ರಹದ ಅಂತರ್ದೆಸೆ ಸಹ ನಡೆಯುತ್ತಿದೆ. ಇದೆ ಕಾರಣದಿಂದ ಅವರು ಯಶಸ್ಸಿನ ಉತ್ತುಂಗಕ್ಕೆ ಇರುತ್ತಿದ್ದರು. ಈಗ ಈ ಎರಡು ಗ್ರಹಗಳ ಸಂಚಾರ ಇವರ ರಾಶಿಯ 3ನೇ ಮನೆಯಲ್ಲಿ ನಡೆಯುತ್ತಿದೆ. ಇವುಗಳ ಸ್ಥಾನ ಇಲ್ಲಿ ಪ್ರಾಮುಖ್ಯವಾಗಿದೆ. ಹಾಗೆಯೇ, ನವಾಂಶ ಕುಂಡಲಿಯಲ್ಲಿ ಕಾಕ್ರಾಂಕ್ಷ ಯೋಗ ರೂಪುಗೊಳ್ಳುತ್ತಿದೆ. ಇದು ಅವರಿಗೆ ಹೆಚ್ಚು ಐಶ್ವರ್ಯ ಇರುತ್ತದೆ. ಗುರು ಮತ್ತು ಬುಧ ತಮ್ಮದೇ ರಾಶಿಯಲ್ಲಿದ್ದಾರೆ, ಈ ಕಾರಣಕ್ಕೆ ಪಂಚಮಹಾಪುರುಷ ರಾಜಯೋಗಳು ಕೂಡ ರೂಪುಗೊಂಡಿದೆ, ಅವರ ಬಳಿ ಇಷ್ಟು ಹಣ ಐಷಾರಾಮಿ ಜೀವನ ಇರುವುದು ಇದೇ ಕಾರಣಕ್ಕೆ. ಆದರೆ ಈಗ ಶನಿದೇವರ ಸಾಡೇಸಾತಿ ನಡೆಯುತ್ತಿರುವುದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇದನ್ನು ಓದಿ..Kannada News: ಕೇವಲ ಮೂರು ಸಾವಿರ ಖರ್ಚು ಮಾಡಿ 5 ಲಕ್ಷ ಗಳಿಸುತ್ತಿರುವ ರೈತ: ನೌಕರಿ ಬಿಟ್ಟು ಹೇಗೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಗೊತ್ತೇ??