ಕನ್ನಡಕ್ಕೆ ಸಿಕ್ಕಿದ್ದಾರೆ ಒಬ್ಬರು ಕೀರ್ತಿ ಸುರೇಶ್, ಮಾಡಿದ್ದು ಕಡಿಮೆ ಸಿನಿಮಾ ಆದರೂ ಕದ್ದದ್ದು ಹೆಚ್ಚು ಹೃದಯಗಳನ್ನು

ಕನ್ನಡಕ್ಕೆ ಸಿಕ್ಕಿದ್ದಾರೆ ಒಬ್ಬರು ಕೀರ್ತಿ ಸುರೇಶ್, ಮಾಡಿದ್ದು ಕಡಿಮೆ ಸಿನಿಮಾ ಆದರೂ ಕದ್ದದ್ದು ಹೆಚ್ಚು ಹೃದಯಗಳನ್ನು

ನಮಸ್ಕಾರ ಸ್ನೇಹಿತರೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಮುದ್ದಾದ ಮುಖದ ಮೂಲಕ ಹಾಗೂ ಅದ್ಭುತ ನಟನೆಯ ಮೂಲಕ ಯುವಕರಿಂದ ಹಿಡಿದು ಹಿರಿಯರವರೆಗೆ ಇಷ್ಟಪಡುವ ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕೀರ್ತಿ ಸುರೇಶ್ ರವರ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ. ಈಗಾಗಲೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ಕೀರ್ತಿ ಸುರೇಶ್ ರವರು ಹಲವಾರು ಬಾರಿ ಕನ್ನಡ ಚಿತ್ರರಂಗಕ್ಕೆ ಯಾವಾಗ ಕಾಲಿಡುತ್ತಾರೆ ಎಂಬ ಪ್ರಶ್ನೆಗಳು ಸದಾ ಚರ್ಚೆಯಲ್ಲಿ ಇರುತ್ತವೆ.

ಈ ಕುರಿತು ಕೀರ್ತಿ ಸುರೇಶ್ ರವರನ್ನು ಪ್ರಶ್ನೆ ಮಾಡಿದರೇ ಅವರು ಕೂಡ ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕೀರ್ತಿ ಸುರೇಶ್ ರವರು ಕನ್ನಡಕ್ಕೆ ಬರುತ್ತಾರೋ ಇಲ್ಲವೋ ತಿಳಿದಿಲ್ಲ, ಆದರೆ ಕನ್ನಡ ಚಿತ್ರರಂಗಕ್ಕೆ ಕನ್ನಡತಿಯೇ ಆಗಿರುವ ಒಬ್ಬರು ಕೀರ್ತಿ ಸುರೇಶ್ ರವರಂತಹ ನಟಿ ಸಿಕ್ಕಿದ್ದಾರೆ. ಇವರು ಮಾಡಿದ್ದು ಕೇವಲ ಬೆರಳೆಣಿಕೆ ಚಿತ್ರಗಳಾದರೂ, ತಮ್ಮ ಕ್ಯೂಟ ನಟನೆಯ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಸ್ನೇಹಿತರೇ ನಿಮಗೆ ಈಗಾಗಲೇ ತಿಳಿದಿರಬಹುದು ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು, ಕನ್ನಡದ ಕೀರ್ತಿ ಸುರೇಶ್ ಎಂದು ಜನರು ಕರೆಯುತ್ತಿರುವುದು ಮತ್ಯಾರನ್ನು ಅಲ್ಲ ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಇದೀಗ ಮಿಂಚು ಹರಿಸುತ್ತಿರುವ ಸಂಜನಾ ಆನಂದ್ ರವರ ಬಗ್ಗೆ. ಹೌದು ಸ್ನೇಹಿತರೇ ಇವರು ನಟನೆ ಮಾಡಿರುವ ಬೆರಳೆಣಿಕೆಯ ಚಿತ್ರಗಳು ಮಾತ್ರ ರಿಲೀಸ್ ಆಗಿದೆ. ಇನ್ನು ಐದು ಚಿತ್ರಗಳಲ್ಲಿ ಇವರು ನಟನೆ ಮಾಡುತ್ತಿದ್ದು, ಎರಡು ಚಿತ್ರಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಮೂರು ಚಿತ್ರಗಳ ಚಿತ್ರೀಕರಣ ಆರಂಭವಾಗಬೇಕಿದೆ. ಅಷ್ಟರಲ್ಲಾಗಲೇ ತೆಲುಗಿನ ಹನಿಮೂನ್ ವೆಬ್ ಸೀರಿಸ್ ನಲ್ಲಿ ನಟನೆ ಮಾಡಿರುವ ಸಂಜನಾ ಆನಂದ್ ರವರು ಇದೀಗ ತೆಲುಗಿನಲ್ಲಿಯೂ ಕೂಡ ಮೋಡಿ ಮಾಡಿದ್ದಾರೆ, ಇವರನ್ನು ನೋಡಿ ಪ್ರತಿಯೊಬ್ಬರೂ ಕೀರ್ತಿ ಸುರೇಶ್ ರವರಂತೆ ಕಾಣುತ್ತಾರೆ ಎಂದಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಇವರು ಮತ್ತಷ್ಟು ಯಶಸ್ಸನ್ನು ಗಳಿಸಲು ಎಂದು ಆಶಿಸುತ್ತೇವೆ ಧನ್ಯವಾದಗಳು.