ಯೋಗಿ ಗಿಂತ ಒಂದು ಹೆಜ್ಜೆ ಮುಂದಿಟ್ಟ ಬಿ.ಸ್.ವೈ ! ಶಾಂತಿ ದೂ’ತರಿಗೆ ಬಿಗ್ ಶಾಕ್ ! ಭೇಷ್ ಎಂದ ನೆಟ್ಟಿಗರು
ಯೋಗಿ ಗಿಂತ ಒಂದು ಹೆಜ್ಜೆ ಮುಂದಿಟ್ಟ ಬಿ.ಸ್.ವೈ ! ಶಾಂತಿ ದೂ’ತರಿಗೆ ಬಿಗ್ ಶಾಕ್ ! ಭೇಷ್ ಎಂದ ನೆಟ್ಟಿಗರು
ನಮಸ್ಕಾರ ಸ್ನೇಹಿತರೇ, ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಸದ್ದು ಮಾಡತೊಡಗಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಸಾರ್ವಜನಿಕ ಆಸ್ತಿಯ ಜೊತೆ ಖಾಸಗಿ ಆಸ್ತಿಗೆ ಕೂಡ ಭಾರಿ ನ’ಷ್ಟ ಉಂಟಾಗಿದೆ. ಮೊದಲಿನಿಂದಲೂ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿರುವ ನ’ಷ್ಟವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥ್ ರವರ ಸರ್ಕಾರದ ರೀತಿಯಲ್ಲಿ ಕೆಲಸ ಮಾಡಿ, ಘಟನೆಯಲ್ಲಿ ಭಾಗಿಯಾದವರ ಪ್ರತಿಯೊಬ್ಬರ ಆಸ್ತಿಗಳನ್ನು ಮುಟ್ಟು’ಗೋಲು ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಉಂಟಾಗಿರುವ ನ’ಷ್ಟವನ್ನು ಭರಿಸುತ್ತೇವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಬಸವರಾಜ್ ಬೊಮ್ಮಾಯಿ ಅವರು ಕೂಡ ಮಾತನಾಡಿ ಹೌದು ನಾವು ಘಟನೆಯಲ್ಲಿ ಭಾಗಿಯಾದವರಿಂದ ಸಂಪೂರ್ಣ ವಸೂಲಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ ಇಲ್ಲಿ ಯಾರು ಖಾಸಗಿ ಆಸ್ತಿಯ ಕುರಿತು ಮಾತನಾಡಿರಲಿಲ್ಲ, ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಸಾರ್ವಜನಿಕ ಆಸ್ತಿಯ ಜೊತೆ ಖಾಸಗಿ ಜನರ ಆಸ್ತಿಯೂ ಸಾಕಷ್ಟು ನ’ಷ್ಟವಾಗಿದೆ. ಅಷ್ಟೇ ಅಲ್ಲದೇ ಈ ಕುರಿತು ಯಾವ ರೀತಿಯಲ್ಲಿ ತನಿಖೆ ಆಗಬೇಕು ಎಂಬುದರ ಬಗ್ಗೆ ಯಾರೂ ಮಾತನಾಡಿರಲಿಲ್ಲ. ಕೆಲವರು ಸಿಬಿಐಗೆ ಒಪ್ಪಿಸಿ ಎಂದರು, ಇನ್ನು ಕೆಲವು ನಾಯಕರು ಜಿಲ್ಲಾಧಿಕಾರಿ ತನಿಖೆ ನಡೆಸಲಿದ್ದಾರೆ ಎಂಬ ಸುಳಿವನ್ನು ಬಿಟ್ಟು ಕೊಟ್ಟಿದ್ದರು. ಇಂದು ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಸಮಗ್ರ ಮಾಹಿತಿ ಪಡೆದು ಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು ಕ’ಠಿಣ ಹೆಜ್ಜೆಯನ್ನು ಇಟ್ಟಿದ್ದಾರೆ. ಘಟನೆಯ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ನಡೆದ ಘಟನೆಗೆ ತಮ್ಮ ಆ’ಕ್ರೋ’ಶವನ್ನು ವ್ಯಕ್ತಪಡಿಸಿ ಕೇವಲ ಸಾರ್ವಜನಿಕ ಆಸ್ತಿಗಳ ಕುರಿತು ಗಮನ ಹರಿಸುವುದಷ್ಟೇ ಖಾಸಗಿ ಆಸ್ತಿಗಳಿಗೆ ಉಂಟಾಗಿರುವ ನ’ಷ್ಟದ ವೆಚ್ಚವನ್ನು ಕೂಡ ನಾವು ಘಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಂದ ವಸೂಲಿ ಮಾಡುತ್ತೇವೆ.
Our Govt has decided to assess the damages caused to public & private property in the violent incidents in KG Halli & DG Halli & recover the costs from the culprits. We will approach Hon’ble High Court for appointment of Claim Commissioner as per Hon’ble Supreme Court order (1/3)
— B.S. Yediyurappa (@BSYBJP) August 17, 2020
ಕಾ’ನೂನು ಬಾ’ಹಿರ ಚಟುವಟಿಕೆ ತಡೆ ಕಾಯ್ದೆಯ(UAPA) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ಪ್ರತಿಯೊಬ್ಬರ ವಿರುದ್ಧವೂ ಕ’ಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ನು ತನಿಖೆಯ ಬಗ್ಗೆ ಮಾತನಾಡಿ, ಈಗಾಗಲೇ ವಿಶೇಷ ತಂಡವನ್ನು ರಚಿಸಿ ಸಂಪೂರ್ಣ ಹಾಗೂ ಸಮಗ್ರ ತನಿಖೆ ನಡೆಸಲು ಆದೇಶ ನೀಡಲಾಗಿದೆ ಹಾಗೂ ಮೂರು ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ, ಈ ಕೇಸಿಗೆ ಸಂಬಂಧ ಪಟ್ಟಂತೆ ವಿಚಾರಣೆ ನಡೆಸಿ ಕುರಿತ ತೀರ್ಪು ನೀಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ಒಂದು ವೇಳೆ ಅಗತ್ಯವಿದ್ದರೇ ಎಸ್ಐಟಿ ತಂಡವು ಗೂಂ – ಡಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ. ಎಂದು ತಿಳಿಸಿದ್ದಾರೆ. ಬಿ.ಸ್.ವೈ ರವರ ಈ ಆದೇಶಕ್ಕೆ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ, ಇನ್ನು ಕೆಲವರು ರಾಜಕೀಯ ನಡೆ ಇದು, ಅಸಂವಿಧಾನಿಕ ಎಂದು ಅಭಿಪ್ರಾಯ ಮಂಡಿಸಿದ್ದಾರೆ.