ಅನಿತಾ ರವರಿಗೆ ಕ್ಲಾಸ್ ತೆಗೆದುಕೊಂಡು ಶಾಕ್ ನೀಡಿದ ರಾಮನಗರ ಜನತೆ

ಅನಿತಾ ರವರಿಗೆ ಕ್ಲಾಸ್ ತೆಗೆದುಕೊಂಡು ಶಾಕ್ ನೀಡಿದ ರಾಮನಗರ ಜನತೆ

0

ಉಪಚುನಾವಣೆಯ ಕಾವು ಏರತೊಡಗಿದಂತೆ ಪ್ರತಿಯೊಂದು ಪಕ್ಷಗಳು ಪ್ರಚಾರದಲ್ಲಿ ಮಗ್ನರಾಗಿದ್ದಾರೆ ಅದೇ ರೀತಿ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ರವರು ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದರು ಆದರೆ ರಾಮನಗರ ಜನತೆಯು ಪ್ರಚಾರದ ವೇಳೆ ಅನಿತಾ ಕುಮಾರಸ್ವಾಮಿ ರವರ ವಿರುದ್ಧ ತಿರುಗಿಬಿದ್ದಿದ್ದಾರೆ.

[do_widget id=et_ads-2]

ಅನಿತಾ ಕುಮಾರಸ್ವಾಮಿ ಅವರಿಗೆ ಕ್ಲಾಸ್ ತೆಗೆದುಕೊಂಡಿರುವ ರಾಮನಗರದ ಜನತೆ ಮತ ಕೇಳಲು ಬರಬೇಡಿ ಎಂದು ಬಹಿಷ್ಕಾರ ಹಾಕಿದ್ದಾರೆ. ನೀವು ಕೇವಲ ಮಾತನಾಡಲು ಬರುತ್ತೀರಾ ನಿಮ್ಮಿಂದ ಯಾವುದೇ ಕೆಲಸಗಳು ನೆರವೇರಿಲ್ಲ ಎಂದು ಮೊಟ್ಟಮೊದಲ ಬಾರಿಗೆ ರಾಮನಗರದಲ್ಲಿ ಜನತೆಯು ಕುಮಾರಸ್ವಾಮಿ ರವರ ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದಾರೆ.

[do_widget id=et_ads-3]

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಪ್ರಚಾರಕ್ಕಾಗಿ ಆಗಮಿಸಿದ ಕುಮಾರಸ್ವಾಮಿ ರವರು ಗೀತಾ ಮಂದಿರ ಬಡಾವಣೆಯ ದರ್ಗಾ ಬಳಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು ಇದೇ ವೇಳೆ ಆಗಮಿಸಿದ ಸ್ಥಳೀಯರ ಗುಂಪು ಚುನಾವಣೆ ಬಂದಾಗ ಮಾತ್ರ ನೀವು ಈಕಡೆ ಬರುತ್ತೀರಿ ಆಮೇಲೆ ಒಂದು ದಿವಸ ಕೂಡ ನೀವು ಬಂದದ್ದನ್ನು ನಾವು ಕಂಡಿಲ್ಲ ನಮ್ಮ ಪ್ರದೇಶಕ್ಕೆ ಬಂದಿರುವ ಸಮಸ್ಯೆಗಳನ್ನು ಮೊದಲು ನೀವು ಬಗೆಹರಿಸಿ ನಂತರ ವೋಟ್ ಕೇಳಿ ಎಂದು ಖಡಕ್ಕಾಗಿ ಹೇಳಿದರು.

[do_widget id=et_ads-4]

ಇದರಿಂದ ಅನಿತಾ ಕುಮಾರಸ್ವಾಮಿ ರವರಿಗೆ ಭಾರಿ ಮುಜುಗರ ಉಂಟಾಗಿ ಪ್ರಚಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗಿದ್ದರು. ಈ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಪಕ್ಷದವರು ರಾಮನಗರ ವನ್ನು ವಶಪಡಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

[do_widget id=et_ads-5]