ರಾಮನಗರ: ಅನಿತಾ ಕುಮಾರಸ್ವಾಮಿ ರವರಿಗೆ ಕೈಕೊಟ್ಟ ಡಿಕೆ ಬ್ರದರ್ಸ್

ರಾಮನಗರ: ಅನಿತಾ ಕುಮಾರಸ್ವಾಮಿ ರವರಿಗೆ ಕೈಕೊಟ್ಟ ಡಿಕೆ ಬ್ರದರ್ಸ್

0

ರಾಮನಗರದಲ್ಲಿ ಕ್ಷಣಕ್ಷಣವು ಉಪ ಚುನಾವಣೆಯ ಕಾವು ಏರುತ್ತಿದೆ ಒಂದು ಕಡೆ ಬಂಡಾಯ ಅಭ್ಯರ್ಥಿಗಳು ಟಿಕೆಟ್ ಗಾಗಿ ಹೊಡೆದಾಡಿ ತಣ್ಣಗಾಗಿದ್ದಾರೆ. ಮತ್ತೊಂದು ಕಡೆ ದೇವೇಗೌಡರ ಆದೇಶದ ಮೇರೆಗೆ ಅನಿತಾ ಕುಮಾರಸ್ವಾಮಿ ರವರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

[do_widget id=et_ads-2]

ಕಾಂಗ್ರೆಸ್ ನಲ್ಲಿ ಎದ್ದಿದ್ದ ಶಮನವನ್ನು ಡಿಕೆ ಶಿವಕುಮಾರ್ ಮತ್ತು ಅವರ ಸಹೋದರರಾದ ಡಿ ಕೆ ಸುರೇಶ್ ರವರು ಶಮನ ಮಾಡುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದರೂ ಇನ್ನೂ ಹಲವಾರು ಕಾರ್ಯಕರ್ತರು ಮುನಿಸಿಕೊಂಡಿದ್ದು ಕೆಲವರಂತೂ ಆಗಲೇ ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿದ್ದು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

[do_widget id=et_ads-3]

ಪ್ರತಿಯೊಂದು ಬಂಡಾಯದಲ್ಲಿ ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರರಾದ ಸುರೇಶ್ ಅವರು ಇದ್ದಕ್ಕಿದ್ದ ಹಾಗೆ ಅನಿತಾ ಕುಮಾರಸ್ವಾಮಿ ಅವರಿಗೆ ಕೈ ನೀಡಿದ್ದು ಮೈತ್ರಿ ಸರ್ಕಾರದ ನಾಯಕರಿಗೆ ಶಾಕ್ ಆಗಿದೆ.

[do_widget id=et_ads-4]

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ರವರಿಗೆ ಬೆಂಬಲಿಸುತ್ತೇವೆ ಎಂದು ಘೋಷಿಸಿದ ಕಾಂಗ್ರೆಸ್ ನಾಯಕರು ಮತ್ತು ಡಿ ಕೆ ಶಿವಕುಮಾರ್ ರವರು ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಮತ್ತು ಬಹಿರಂಗ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತಯಾಚಿಸಿದ ಕುಮಾರಸ್ವಾಮಿ ಮತ್ತು ಅವರ ಪತ್ನಿಯಾದ ಅನಿತಾ ಕುಮಾರಸ್ವಾಮಿ ಅವರ ಬೆಂಬಲಕ್ಕೆ ಡಿಕೆ ಶಿವಕುಮಾರ್ ಅವರು ಇಂದು ನಿಲ್ಲಲಿಲ್ಲ.

[do_widget id=et_ads-5]

ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ ಕೆಲವು ಆಪ್ತರು ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಶಾಕ್ ಗಿರುವ ಅನಿತಾಕುಮಾರಸ್ವಾಮಿ ಅವರು ಹೇಗಾದರೂ ಮಾಡಿ ಡಿಕೆ ಶಿವಕುಮಾರ್ ಅವರನ್ನು ಪ್ರಚಾರಕ್ಕೆ ಕರೆ ತರಬೇಕು ಎಂದು ತಮ್ಮ ಕಾರ್ಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

[do_widget id=et_ads-6]