‘ಶನಿ’ ಧಾರಾವಾಹಿಯ ಅಭಿಮಾನಿಯಾಗಿದ್ರೆ ಓದಿ ಈ ಸುದ್ದಿ

‘ಶನಿ’ ಧಾರಾವಾಹಿಯ ಅಭಿಮಾನಿಯಾಗಿದ್ರೆ ಓದಿ ಈ ಸುದ್ದಿ

0

ವಿಭಿನ್ನ ರೀತಿಯ ಕತೆಯ ಮೂಲಕ ಜನರ ಮನತಟ್ಟಿದ ಪೌರಾಣಿಕ ಧಾರಾವಾಹಿ ಎಂದರೆ ‘ಶನಿ’. ಹೌದು, ಮಕ್ಕಳಿಂದ ಹಿಡಿದು ವೃದ್ಧರ ಬಾಯಲ್ಲೂ ಈ ಧಾರಾವಾಹಿಯದ್ದೇ ಮಾತು. ಇದರಲ್ಲಿ ಯಾವ ಪಾತ್ರಧಾರಿಯೂ ಬದಲಾದರೂ ನೋಡುವುದಕ್ಕೆ ಮನಸ್ಸು ಒಪ್ಪಲ್ಲ ಅನ್ನುವ ಹಾಗೇ ಈ ಧಾರಾವಾಹಿ ಎಲ್ಲರೊಳಗೆ ಹೊಕ್ಕಿತ್ತು. ಈಗ ಒಂದು ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ ಶನಿ ಧಾರಾವಾಹಿಯ ಸೂರ್ಯದೇವ ಪಾತ್ರಧಾರಿ ಇನ್ನು ಮುಂದೆ ಕಾಣಿಸಿಕೊಳ್ಳಲ್ವಂತೆ.

[do_widget id=et_ads-2]

ಶನಿ ಧಾರಾವಾಹಿಯಲ್ಲಿ ಸೂರ್ಯದೇವನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟನ ಹೆಸರು ರಂಜಿತ್ ಕುಮಾರ್. ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೇ ಇದ್ದರು. ಇಷ್ಟು ಒಳ್ಳೆಯ ನಟ ಈ ಧಾರಾವಾಹಿಯಿಂದ ಹೊರಗೆ ಹೋಗುವುದಕ್ಕೆ ಕಾರಣವಾದರೂ ಏನು ಗೊತ್ತಾ.? ಅವರಿಗೆ ಸರಿಯಾಗಿ ಸಂಭಾವನೆ ಕೊಡದೇ ಇರುವುದೇ ಇದಕ್ಕೆ ಮುಖ್ಯ ಕಾರಣವಂತೆ.

[do_widget id=et_ads-3]

ಕಳೆದ ಮೂರು ತಿಂಗಳಿಂದ ರಂಜಿತ್ ಗೆ ಸಂಭಾವನೆಯನ್ನೇ ಕೊಟ್ಟಿಲ್ಲವಂತೆ. 3,60,000 ರೂ. ಸಂಭಾವನೆ ಸೂರ್ಯ ಪಾತ್ರಧಾರಿ ರಂಜಿತ್ ಗೆ ಬರಬೇಕಾಗಿತ್ತು. ರಂಜಿತ್ ಜುಲೈಯಲ್ಲಿ ಶೂಟಿಂಗ್ ಮುಗಿಸಿ ರಜೆಯ ನಿಮಿತ್ತ ಬೆಂಗಳೂರಿಗೆ ಬಂದಿದ್ದಾಗ ಅವರ ಬದಲಿಗೆ ಮಧುಸಾಗರ್ ಎಂಬುವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆಯಂತೆ. ಎರಡು ಮೂರು ತಿಂಗಳಿಗಾಗುವಷ್ಟು ಎಪಿಸೋಡ್ ಅನ್ನು ರಂಜಿತ್ ಅವರಿಂದ ಜುಲೈ ತಿಂಗಳಿನಲ್ಲಿಯೇ ಚಿತ್ರೀಕರಣ ಮಾಡಿಸಿಕೊಳ್ಳಲಾಗಿದೆಯಂತೆ.

ಕರ್ಮ ಫಲದ ಬಗ್ಗೆ ಎಲ್ಲರಿಗೂ ಬೋಧಿಸುತ್ತಿದ್ದ ಶನಿ ಧಾರಾವಾಹಿ ಈಗ ಈ ಕಾರಣದಿಂದ ಸುದ್ದಿಯಲ್ಲಿದೆ.

[do_widget id=et_ads-4]