ಎಚ್ ಡಿ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಸುಪ್ರೀಂ

ಎಚ್ ಡಿ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಸುಪ್ರೀಂ

0

ಜಂತಕಲ್ ಮೈನಿಂಗ್ ಕೇಸ್‌ನಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಎಚ್.ಡಿ,ಕುಮಾರಸ್ವಾಮಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.ಜಂತಕಲ್ ಮೈನಿಂಗ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೊಂದು ತಿಂಗಳು ಮುಂದೂಡಿದೆ. ಇದ್ರಿಂದ ಕುಮಾರಸ್ವಾಮಿ ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.

[do_widget id=et_ads-2]

ಈಗಾಗಲೇ ಜಂತಕಲ್ ಮೈನಿಂಗ್ ಪ್ರಕರಣದ ತನಿಖಾ ವರದಿಯನ್ನು ಎಸ್‌ಐಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದರು. ಅದರಂತೆ ನಾಳೆ [ಗುರುವಾರ] ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಿಗದಿಯಾಗಿತ್ತು.

[do_widget id=et_ads-3]

ವಿಚಾರಣೆಗೆ ಬರುವ ಒಂದು ದಿನ ಮುನ್ನವೇ ಒಂದು ತಿಂಗಳ ಕಾಲ ವಿಚಾರಣೆ ಮುಂದೂಡಿಕೆಯಾಗಿದೆ. ನವೆಂಬರ್ 14ಕ್ಕೆ ವಿಚಾರಣೆ ಮುಂದೂಡಿಕೆಯಾಗಿರುವುದಾಗಿ ಸುಪ್ರಿಂ ಕೋರ್ಟ್ ವೆಬ್ ಸೈಟ್ ನಲ್ಲಿ ಅಪ್ಡೇಟ್ ಆಗಿದೆ.

[do_widget id=et_ads-4]

ಜಂತಕಲ್ ಮೈನಿಂಗ್ ಕೇಸ್ ನಲ್ಲಿ ಸಿಎಂ ಕುಮಾರಸ್ವಾಮಿ ಸೇರಿ 13 ಮಂದಿ ಆರೋಪಿಗಳಾಗಿದ್ದಾರೆ. ಸದ್ಯದ ತನಿಖಾ ವರದಿಯನ್ನು ಎಸ್‌ಐಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

[do_widget id=et_ads-5]

ಎಚ್’ಡಿಕೆಗೆ ಹೇಗೆ ಲಿಂಕ್?
2006ರಲ್ಲಿ ಎಚ್’ಡಿಕೆ ಸಿಎಂ ಆಗಿದ್ದ ಅವಧಿಯಲ್ಲೇ ಜಂತಕಲ್ ಮೈನಿಂಗ್ ಕಂಪನಿಯ ಗಣಿ ಲೈಸೆನ್ಸ್ ನವೀಕರಣದಲ್ಲಿ ಅಕ್ರಮ ನಡೆದಿದೆ. ಸಿಎಂ ಕಚೇರಿ ಸೂಚನೆ ಮೇರೆಗೆ ಗಣಿ ಲೈಸೆನ್ಸ್ ನವೀಕರಣ ಮಾಡಿದೆ ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಹೇಳಿದ್ದರು.

[do_widget id=et_ads-6]