ಬಿಎಸ್ ವೈ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಚಾಣಕ್ಯನ ಎಂಟ್ರಿ

ಬಿಎಸ್ ವೈ ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಚಾಣಕ್ಯನ ಎಂಟ್ರಿ

0

ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿದೆ. ಆದರೆ ಪಕ್ಷದಲ್ಲಿ ಒಳಜಗಳ ಹೆಚ್ಚಾಗಿದೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಕೆಲವರು ಬಿಎಸ್ ವೈ ರವರ ವರ್ಚಸ್ಸನ್ನು ಅರ್ಥ ಮಾಡಿಕೊಳ್ಳದೆ ಅವರ ವಿರುದ್ಧ ಕತ್ತಿಮಸೆಯುತ್ತಿದ್ದಾರೆ.

ಇದನ್ನು ಚೆನ್ನಾಗಿ ಅರಿತುಕೊಂಡಿರುವ ಅಮಿತ್ ಶಾ ರವರು ಬಿಎಸ್ ವೈ ವಿರೋಧಿಗಳಿಗೆ ಬಿಸಿ ಮುಟ್ಟಿಸಲು  ಇಡೀ ಲೋಕಸಭಾ ಚುನಾವಣೆಯ ಪ್ರತಿ ಜವಾಬ್ದಾರಿಯನ್ನು ಮತ್ತು ರಾಜ್ಯಾಧ್ಯಕ್ಷ ಹುದ್ದೆಯನ್ನು ಯಡಿಯೂರಪ್ಪನವರಿಗೆ ನೀಡಿ ಪರೋಕ್ಷವಾಗಿ ಬಿಎಸ್ ವೈ ರವರ ವರ್ಚಸ್ಸು ಏನೆಂಬುದನ್ನು ತಿಳಿಸಿಕೊಟ್ಟಿದ್ದರು.

ಲೋಕಸಭಾ ಚುನಾವಣೆಯ ಟಿಕೆಟ್ ಗಳನ್ನು ಸಹ ಬಿಎಸ್ ವೈ ರವರೇ ನಿರ್ಧರಿಸಲಿ ಎಂದು ಆದೇಶ ಜಾರಿಯಾಗಿತ್ತು. ಆದರೆ ಇದನ್ನು ಅರ್ಥಮಾಡಿಕೊಳ್ಳದ ವಿರೋಧಿಗಳು ಮತ್ತೆ ಬಿ ಎಸ್ ಪೈ ರವರ ವಿರುದ್ಧ ಕತ್ತಿ ಮಸೆಯಲು ಪ್ರಾರಂಭಿಸಿದ್ದಾರೆ. ಇದನ್ನು ಹೀಗೇ ಬಿಟ್ಟರೆ ಸರಿ ಇರುವುದಿಲ್ಲ ಎಂದು ಅರಿತ ಚಾಣಕ್ಯ ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ ವೈ ರವರ ವರ್ಚಸ್ಸನ್ನು ಬಳಸಿಕೊಳ್ಳಲು ಸರ್ವ ತಯಾರಿ ನಡೆಸಲು ಸ್ವತಹ ಅಮಿತ್ ಶಾ ರವರೆ ಕಣಕ್ಕೆ ಇಳಿದಿದ್ದಾರೆ.

ಇದೇ ತಿಂಗಳ 25 ಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ ರವರು ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಬಿಜೆಪಿಯ ಪ್ರಮುಖ ಮುಖಂಡರೊಂದಿಗೆ ದಿನಪೂರ್ತಿ ಚರ್ಚೆ ನಡೆಸಲು ನಿರ್ಧರಿಸಿದ್ದಾರೆ. ಈ ಸಮಯದಲ್ಲಿ ಬಿಎಸ್ ವೈ ರವರಿಗೆ ಹೆಚ್ಚಿನ ಅಧಿಕಾರ ನೀಡಲು ಮತ್ತು ಕುತಂತ್ರಿಗಳ ಬಾಯಿ ಮುಚ್ಚಿ ಸಲಿದ್ದಾರೆ.