ಗೆದ್ದು ಬೀಗಿದ ಹುಟ್ಟು ಹೋರಾಟಗಾರ – ನಡೆಯಲಿಲ್ಲ ದ್ವೇಷ ರಾಜಕಾರಣ

ಗೆದ್ದು ಬೀಗಿದ ಹುಟ್ಟು ಹೋರಾಟಗಾರ – ನಡೆಯಲಿಲ್ಲ ದ್ವೇಷ ರಾಜಕಾರಣ

0

ಬಿಎಸ್ ಯಡಿಯೂರಪ್ಪ ನವರು ಹುಟ್ಟು ಹೋರಾಟಗಾರರು ಮತ್ತು ಜನಪರ ನಾಯಕರು.  ಇಷ್ಟು ಹೇಳಿದ ಮೇಲೆ ಯಡಿಯೂರಪ್ಪನವರಿಗೆ ವಿರೋಧಿಗಳು ಸಹ ಇದ್ದಾರೆ  ಎಂದು  ನಿಮಗೆ ಅರ್ಥವಾಗಿರುತ್ತದೆ.   ಯಾಕೆಂದರೆ ನಮ್ಮ ಸಮಾಜವೇ ಹಾಗೆ ನೀವು ಜನಪರ ನಾಯಕರಾದ ಲ್ಲಿ ನಿಮಗೆ ವಿರೋಧಿಗಳು ಜಾಸ್ತಿ.

ಆದರೆ ಯಾರು ಎಷ್ಟೇ ಕುತಂತ್ರಗಳನ್ನು ಮಾಡಿದರು ಯಡಿಯೂರಪ್ಪನವರು ಗೆ ಏನು ಮಾಡಲು ಸಾಧ್ಯವಾಗಲಿಲ್ಲ. ಹುಟ್ಟು ಹೋರಾಟಗಾರರಾದ ಇವರಿಗೆ ಈಗ ಮತ್ತೊಂದು ಜಯ ಲಭಿಸಿದೆ. ಇದನ್ನು ನೋಡಿ ವಿರೋಧಪಕ್ಷಗಳು ಬಾಯಿಮುಚ್ಚಿಕೊಂಡು ಕುಳಿತು ಕೊಳ್ಳುವುದು ಒಳಿತು.

ಅಷ್ಟಕ್ಕೂ ವಿಷಯದ ಮೂಲವೇನು?

ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ವೇಳೆ ಡಿನೋಟಿಫಿಕೇಶನ್ ಪ್ರಕರಣಗಳು ನಡೆದಿವೆ ಎಂದು ಬರೋಬರಿ ಹದಿನೈದು ಪ್ರಕರಣಗಳು ದಾಖಲಾಗಿದ್ದವು.  15 ಪ್ರಕರಣಗಳಲ್ಲಿ 10 ಪ್ರಕರಣಗಳಲ್ಲಿ ಯಡಿಯೂರಪ್ಪನವರು ನಿರಪರಾಧಿ ಎಂದು ಈ ಹಿಂದೆಯೇ ಘೋಷಣೆಯಾಗಿತ್ತು.

ಇನ್ನುಳಿದ ಐದು ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳನ್ನು ಕೆಲವು ದಿನಗಳ ಹಿಂದಷ್ಟೇ ಯಡಿಯೂರಪ್ಪನವರು ಜಯಿಸಿದ್ದರು.  ಅದರಲ್ಲಿ ಒಂದು ಪ್ರಕರಣವನ್ನು ಸಿಬಿಐ ಸಹ ತನಿಖೆ ಮಾಡಿತ್ತು. ಆದರೆ ಸಿಬಿಐ ಕೂಡ ಇವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಗಮನಿಸಬೇಕಾದ ವಿಷಯ.

ಈಗ ಇನ್ನುಳಿದ ಒಂದು ಪ್ರಕರಣದಲ್ಲಿಯೂ ಸಹ ಯಡಿಯೂರಪ್ಪನವರು ನಿರಪರಾಧಿ ಎಂದು ನ್ಯಾಯಾಲಯವು ಘೋಷಿಸಿ ಎಲ್ಲಾ ಪ್ರಕರಣಗಳಿಂದ ಯಡಿಯೂರಪ್ಪನವರನ್ನು ಮುಕ್ತಗೊಳಿಸಿ ದಂತಾಗಿದೆ.