ಚುನಾವಣೆಗೂ ಮೊದಲೇ ಶುರುವಾಯಿತು ವಿಪಕ್ಷಗಳ ಕಾಗಕ್ಕ-ಗುಬ್ಬಕ್ಕ ಕಥೆಗಳು
ಚುನಾವಣೆಗೂ ಮೊದಲೇ ಶುರುವಾಯಿತು ವಿಪಕ್ಷಗಳ ಕಾಗಕ್ಕ-ಗುಬ್ಬಕ್ಕ ಕಥೆಗಳು
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷವು ಪ್ರಾಬಲ್ಯವನ್ನು ಮೆರೆಯುತ್ತಾ ಬಂದಿದೆ. ಕೆಲವು ಕಡೆ ಸೋತರು ಕೆಲವು ಕಡೆ ಅಧಿಕಾರದ ಗದ್ದುಗೆ ಏರುವಲ್ಲಿ ವಿಫಲವಾದರೂ ಯಾವುದೇ ಒಂದು ಸ್ವತಂತ್ರ ಪಕ್ಷ ಬಿಜೆಪಿ ಪಕ್ಷವನ್ನು ಮಣಿಸಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ ವಿಷಯ.
ಪ್ರತಿಯೊಂದು ಚುನಾವಣೆಯಲ್ಲಿ ಸೋತ ನಂತರ ವಿಪಕ್ಷಗಳು ಮೊದಲ ನೀಡುವ ಕಾರಣವೇನೆಂದರೆ ಚುನಾವಣಾ EVM ಮಿಷಿನ್. ಚುನಾವಣಾ ಮಿಷಿನ್ EVM ಮಿಷನ್ ಅನ್ನು ಹ್ಯಾಕ್ ಮಾಡಿದ್ದಾರೆ ಅದಕ್ಕಾಗಿಯೇ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಗೆದ್ದು ಬೀಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಈ ಬಾರಿ ಇದನ್ನೇ ಅಸ್ತ್ರವಾಗಿಟ್ಟುಕೊಂಡು ವಿಪಕ್ಷಗಳು ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಪ್ರಾರಂಭಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ಪಿ, ಎನ್ಸಿಪಿ, ಆರ್ಜೆಡಿ ಸೇರಿದಂತೆ 17 ಪಕ್ಷಗಳು ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಬೇಕು ಎಂದು ಅರ್ಥವಿಲ್ಲದ ಕೋರಿಕೆಯನ್ನು ಸಲ್ಲಿಸಲು ಸಿದ್ಧವಾಗಿವೆ.
ಈ ವಿಪಕ್ಷಗಳಿಗೆ ಸೋಲು ಒಂದು ವರ್ಷವಿದ್ದಾಗಲೇ ತಿಳಿದು ಬಂದಂತೆ ಕಾಣುತ್ತಿದೆ, ಹೇಗಿದ್ದರೂ ಚುನಾವಣಾ ಆಯೋಗವು ಈ ಕೋರಿಕೆಯನ್ನು ಸ್ವೀಕರಿಸುವುದಿಲ್ಲ ನಾವು ಹೇಗೂ ಸೋಲುತ್ತೇವೆ ಸೋತ ಮೇಲೆ ಮತ್ತದೇ ಕಾರಣವನ್ನು ಮುಂದೆ ಇಟ್ಟುಕೊಳ್ಳದೆ ನಾವು ಸಲ್ಲಿಸಿದ ಅರ್ಜಿಯ ಪ್ರಕಾರ ಚುನಾವಣೆ ನಡೆದಿಲ್ಲ ಇದರಲ್ಲಿ ಮೋದಿಯ ಕುತಂತ್ರವಿದೆ ಎಂದು ಮತ್ತೊಮ್ಮೆ ಬೊಬ್ಬೆ ಹೊಡೆಯಲು ಬರೋಬ್ಬರಿ 17 ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಈ ಬ್ಯಾಲೆಟ್ ಪೇಪರ್ ನಲ್ಲಿ ನಡೆಸುವ ಚುನಾವಣೆಯು ಒಂದು ಅರ್ಥವಿಲ್ಲದ ಕೋರಿಕೆ ಯಾಗಿದ್ದು ಚುನಾವಣಾ ಆಯೋಗವು ತಿರಸ್ಕರಿಸುತ್ತದೆ ಎಂದು ನಂಬಿದ್ದೇವೆ. 2019 ರ ಲೋಕಸಭಾ ಚುನಾವಣೆಯು EVM ಮಿಷನ್ ಆಧಾರಿತವಾಗಿರಬೇಕು ಎಂಬವರು ಶೇರ್ ಮಾಡಿ ಬೆಂಬಲಿಸಿ