ಮೋದಿ ಬಗ್ಗೆ ಅವರ ಪತ್ನಿ ಯಶೋಧ ಬೇನ್ ಹೇಳಿದ್ದೇನು? ಅದನ್ನು ಕೇಳಿ ಜನರು ಚಪ್ಪಾಳೆ ತಟ್ಟಿದ್ದು ಏಕೆ?

ಮೋದಿ ಬಗ್ಗೆ ಅವರ ಪತ್ನಿ ಯಶೋಧ ಬೇನ್ ಹೇಳಿದ್ದೇನು? ಅದನ್ನು ಕೇಳಿ ಜನರು ಚಪ್ಪಾಳೆ ತಟ್ಟಿದ್ದು ಏಕೆ?

0

ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ನಿರಂತರ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಹದಿನೈದಕ್ಕೂ ಅಧಿಕ ಸಮಯ ಕೆಲಸ ಮಾಡುತ್ತಾರೆ. ಬಹಳಷ್ಟು ಕಠಿಣ, ದೊಡ್ಡ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅದರಿಂದ ಭಾರತ ಇಂದು ಜಿಡಿಪಿಯಲ್ಲಿ ಚೀನಾ ಮೀರಿಸಿ ಮೊದಲ ಸ್ಥಾನದಲ್ಲಿದೆ.

ಇದರ ಜೊತೆಗೆ ಮಹಿಳೆಯರಿಗಾಗಿ ಕ್ರೂರವಾದ ಕ್ರಮವಾದ ತ್ರಿಪಲ್ ತಲಾಖ್ ಅನ್ನು ಮುಕ್ತಿಗೊಳಿಸಿದರು. ಭಾರತದ ವಿಶ್ವದ ೬ನೇ ಬಹುದೊಡ್ಡ ಅರ್ಥವ್ಯವಸ್ಥೆ ಆಗಿದೆ. ಅದರ ನಡುವೆ ಮೋದಿಯವರ ಪತ್ನಿ ಯಶೋದ ಬೇನ್ ಹೇಳಿಕೆ ಜನರಿಂದ ಶ್ಲಾಘನೆಗೆ ಪಾತ್ರವಾಗಿದೆ.

ಉತ್ತರಾಖಂಡದಲ್ಲಿ ಒಂದು ಕಾರ್ಯಕ್ರಮಕ್ಕೆ ಯಶೋದ ಬೇನ್ ತಲುಪಿದರು. ಅವರು ಪ್ರಧಾನಮಂತ್ರಿಯವರನ್ನು ಕುರಿತು ಒಂದು ಹೇಳಿಕೆ ನೀಡಿದ್ದರು. ಯಶೋದ ಬೇನ್ ತಮ್ಮ ಭಾಷಣದ ಪ್ರಾರಂಭ ಭಾರತ್ ಮಾತಾ ಕೀ ಜೈ ಹೇಳುವುದರ ಮೂಲಕ ಪ್ರಾರಂಭಿಸಿದರು.

ದೇಶ ಮುಂದುವರಿಯಲಿ ನರೇಂದ್ರ ಮೋದಿ ಮುಂದುವರೆಯಲಿ ಎಂದು ನಾನು ಬೇಡಿಕೊಳ್ಳತ್ತೇನೆ  ಯಶೋದ ಬೇನ್ ಹೇಳಿಕೆ ನೀಡಿದ್ದರು. ಮೋದಿಯವರ ಯೋಜನೆಯಾದಂತಹ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ದೇಶದ ಮೂಲೆ ಮೂಲೆಗೂ ತಲುಪಬೇಕು ಎಂದು ಹೇಳಿದರು.

ಯಶೋದ ಬೇನ್ ಅವರ ಈ ಹೇಳಿಕೆಗೆ ಜನರು ಚಪ್ಪಾಳೆಗಳ ಸುರಿಮಳೆಗೈದರು. ಉತ್ತರಾಖಂಡದಲ್ಲಿನ ಒಂದು ಸಂಸ್ಥೆಯಾದ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬುದರ ಎರಡನೇ ವರ್ಷದ ಸಮಾವೇಶದಲ್ಲಿ ಮುಖ್ಯ ಅತಿಥಿ ಆಗಿ ಹೋಗಿದ್ದರು.

ಅವರ ಭಾಷಣದಲ್ಲಿ “ಈ ಸಂಸ್ಥೆ ಒಳ್ಳೆಯ ಸಮಾಜಮುಖಿ ಕೆಲಸ ಮಾಡುತ್ತಿದೆ, ಈ ಸಂಸ್ಥೆಯ ಬೆಂಬಲಕ್ಕಾಗಿ ಇನ್ನೂ ಹೆಚ್ಚಿನ ಜನರ ಸೇರುವಿಕೆ ಅಗತ್ಯವಾಗಿದೆ. ಪ್ರತಿಯೊಬ್ಬರಲ್ಲೂ ಒಂದು ಗುರಿ ಇರಬೇಕು. ‘ ಬೇಟಿ ಬಚಾವೋ, ಬೇಟಿ ಪಡಾವೋ’ ನಾರಿಯರ ಸಶಕ್ತೀಕರಣಕ್ಕೆ ಪ್ರೋತ್ಸಾಹ ಸಿಗಲಿ ಎಂದು ಮೋದಿಯವರ ಯೋಜನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದರು.