ಕುಮಾರಸ್ವಾಮಿ ವಿಷಕಂಠರೇ? ಹಾಗಿದ್ದರೆ ವಿಷ ಉಣಿಸಿದ್ದು ಯಾರು? ಕಲಾಪದಲ್ಲಿ ಪ್ರಸ್ತಾಪಿಸಿದ ಸಿಂಹ?

ಕುಮಾರಸ್ವಾಮಿ ವಿಷಕಂಠರೇ? ಹಾಗಿದ್ದರೆ ವಿಷ ಉಣಿಸಿದ್ದು ಯಾರು? ಕಲಾಪದಲ್ಲಿ ಪ್ರಸ್ತಾಪಿಸಿದ ಸಿಂಹ?

0

ಕರ್ನಾಟಕದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಇತ್ತೀಚೆಗೆ ತಾವು ವಿಷಕಂಠ ಎಂಬ ಹೇಳಿಕೆಯನ್ನು ನೀಡಿದ್ದರು, ಇದಕ್ಕೆ ಹಲವಾರು ರಾಜಕಾರಣಿಗಳು ಪ್ರತಿಕ್ರಿಯಿಸಿದ್ದು ಒಬ್ಬ ಬರುವ ಪ್ರತಿಕ್ರಿಯೆ ಒಂದೊಂದು ತರ ಇದೆ, ಈ ಬಾರಿ ಪ್ರತಿಕ್ರಿಯಿಸಿರುವುದು ಕರ್ನಾಟಕದ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹರವರು ತಮ್ಮದೇ ಶೈಲಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆ ಕೆಲವೊತ್ತು ಕಲಾಪದಲ್ಲಿ ಗೊಂದಲವನ್ನು ಸೃಷ್ಟಿಸಿತ್ತು.

ಬರಗಾಲದ ಕುರಿತು ಚರ್ಚೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ರವರು ಕರ್ನಾಟಕದ ಮುಖ್ಯಮಂತ್ರಿಗಳು ತಾವು ವಿಷಕಂಠ ಎಂದು ಹೇಳಿದ್ದಾರೆ ಅಧಿಕಾರದಲ್ಲಿ ಉಳಿಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಅದೇ ಸೋಗಿನಲ್ಲಿ ಕಾಂಗ್ರೆಸ್ ಪಕ್ಷದ ಕಾಲೆಳೆದ ಪ್ರತಾಪ್ ಸಿಂಹರವರು ಕಾಂಗ್ರೆಸ್ ಪಕ್ಷ ಹೆಚ್ಚಿನ ಅಧಿಕಾರಕ್ಕಾಗಿ ಹಾಗೂ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಕುಮಾರಸ್ವಾಮಿಯವರಿಗೆ ವಿಷ ಉಣಿಸುತ್ತಿದೆ ಎಂದು ವಾಗ್ವಾದ ನಡೆಸಿದರು.