ಬಿಜೆಪಿ ಪಕ್ಷ ಸೋಲಲು ಕಾರಣ ಪಿಚ್ಚರ್ ಬಿಚ್ಚಿಟ್ಟ ಬಿಜೆಪಿ ಶಾಸಕ.

0

ಕೆಲವು ದಿನಗಳ ಹಿಂದಷ್ಟೇ ಮುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬರೋಬ್ಬರಿ 150 ಸೀಟುಗಳ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತಾದರೂ ಗೆದ್ದದ್ದು 104 ಸೀಟುಗಳು ಮಾತ್ರ. ಕೇವಲ ಕೆಲವೇ ಕೆಲವು ಸೀಟುಗಳಿಂದ ಬಹುಮತ ಸಾಧಿಸಲು ಸಾಧ್ಯವಾಗಿರಲಿಲ್ಲ. ಅದರ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸೋಮಶೇಖರ್ ರೆಡ್ಡಿ ರವರು ಚುನಾವಣೆಯ ವೇಳೆ  ಜನಾರ್ದನ ರೆಡ್ಡಿ ಅವರನ್ನು ದೂರ ಇಟ್ಟಿದ್ದ ಕಾರಣದಿಂದ ಬಿಜೆಪಿ ಪಕ್ಷವು ನೀರೀಕ್ಷಿತ ಸೀಟು ಗಳಿಸಲಿಲ್ಲ.

ಚುನಾವಣೆ ವೇಳೆಯಲ್ಲ ನನ್ನ ಸಹೋದರನನ್ನು ಜನಾರ್ದನ ರೆಡ್ಡಿಯವರ ಕಡೆಗಣನೆ ಬಗ್ಗೆ ಈಗ ಬಿಜೆಪಿಯವರೇ ಮಾತನಾಡಿಕೊಳ್ಳುತ್ತಿದ್ದಾರೆ. ಅವರನ್ನು ಸಕ್ರಿಯವಾಗಿಸಿಕೊಂಡಿದ್ದರೆ ಬಿಜೆಪಿ ಗೆಲ್ಲುತ್ತಿತ್ತು ಅಂತ ವಿಶ್ಲೇಷಣೆ ಮಾಡಿದ್ದಾರೆ.

ರೆಡ್ಡಿ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಜನರ ಅಭಿಪ್ರಾಯ ಹೀಗಿರುವಾಗ ಅದನ್ನು ಒಪ್ಪಬೇಕಲ್ವಾ ? .. ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ ಅಂತ ಹೇಳಿದ್ದಾರೆ.