ಮೋದಿ ಕರ್ನಾಟಕ ರಾಜ್ಯ ಭೇಟಿ ರದ್ದು: ಕಾರಣವೇನು ಗೊತ್ತೆ?

ಮೋದಿ ಕರ್ನಾಟಕ ರಾಜ್ಯ ಭೇಟಿ ರದ್ದು: ಕಾರಣವೇನು ಗೊತ್ತೆ?

0

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ರವರಿಗೆ ದೊಡ್ಡ ದೊಡ್ಡ ಸವಾಲುಗಳು ಎದುರಾಗಿದೆ, ಆದರೆ ಮೋದಿ ಅಲೆಯು ಸುನಾಮಿಯಾಗಿ ಬದಲಾಗಿರುವುದು ಬಹಳ ಸುಲಭವಾಗಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಯಾಗುವುದು ಬಹುತೇಕ ಖಚಿತವಾಗಿದೆ.

ಆದರೆ ತೃತಿಯ ರಂಗ ವೆಲ್ಲ ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಮೋದಿ ರವರು ಚುನಾವಣೆಗೆ ಇನ್ನು ಒಂದು ವರ್ಷವಿದ್ದಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ಕಾರ್ಯಕ್ರಮದ ಭಾಗವಾಗಿ ಮೋದಿ ರವರು ಜುಲೈ 29ರಂದು ಉತ್ತರ ಕರ್ನಾಟಕದ ಚಿಕ್ಕೋಡಿಯಲ್ಲಿ ರೈತರ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಸರ್ಕಾರದ ರೈತ ಪರ ಯೋಜನೆಗಳನ್ನು ಜನರಿಗೆ ತಿಳಿಸಲು ಭಾಗವಹಿಸಬೇಕಾಗಿತ್ತು.

ಆದರೆ ಮೋದಿರವರ ಕರ್ನಾಟಕದ ರಾಜ್ಯ ಭೇಟಿ ರದ್ದಾಗಿದ್ದು ಮೋದಿ ಅಭಿಮಾನಿಗಳಲ್ಲಿ ಮತ್ತು ರಾಜ್ಯದ ಬಿಜೆಪಿ ನಾಯಕರಲ್ಲಿ ನಿರಾಶೆ ಉಂಟು ಮಾಡಿದೆ.

ಅಷ್ಟಕ್ಕೂ ಮೋದಿ ಭೇಟಿ ರದ್ದಾಗಲು ಕಾರಣವಾದರೂ ಏನು?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ, ಭಾರಿ ಮಳೆಯಿಂದ ಕೃಷ್ಣಾನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಇದೇ ಕಾರಣಕ್ಕೆ ಮೋದಿ ರವರ ಭೇಟಿ ರದ್ದಾಗಿದೆ.