ಕನ್ನಡದ ಖ್ಯಾತ ನಿರೂಪಕಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ?

0

ಕನ್ನಡದ ಖ್ಯಾತ ನಿರೂಪಕಿ ಯಾದ ಅನುಶ್ರೀ ರವರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡುವ ಸಮಯದಲ್ಲಿ ಅನುಶೀ ರವರು ಕಣ್ಣೀರು ಹಾಕಿದ್ದಾರೆ. ಕಾರಣ ಕೇಳಿದರೆ ನೀವು ಸ್ವಲ್ಪ ಭಾವುಕರಾಗುತ್ತೀರಾ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನ ಸ್ಪರ್ಧಿಗಳಾದ ಸೂರಜ್, ಶ್ರಾವ್ಯ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಅದ್ಭುತ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕುತ್ತಾರೆ, ಈ ವೇಳೆ ಸ್ನೇಹದ ಮಹತ್ವ ಸಾರಲು ಡ್ಯಾನ್ಸ್ ನ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ.ಪ್ರತಿಯೊಬ್ಬರು ತಮ್ಮ ಸರದಿ ಬಂದಾಗ ತಮ್ಮ ಸ್ನೇಹಿತರ ಬಗ್ಗೆ ಎರಡು ಮಾತುಗಳನ್ನು ಆಡುತ್ತಾರೆ.

ಈತನ್ಮಧ್ಯೆ ಅನುಶ್ರೀ ರವರ ಸರದಿ ಬಂದಾಗ ಸ್ನೇಹಿತರ ಬದಲಾಗಿ ಸಹೋದರ ಅಭಿಜಿತ್ ಫೋಟೋವನ್ನು ತೋರಿಸಲಾಗುತ್ತದೆ. ಇದೇ ವೇಳೆ ಭಾವುಕರಾದ ಅನುಶ್ರೀ ರವರು ನನ್ನ ಸಹೋದರನ ನನ್ನ ಕನಸು ತುಂಬಾ ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದೆ. ಅಂದಿನಿಂದ ಅವನು ನನ್ನ ತಾಯಿಯನ್ನು ಸಹ ತನ್ನ ಹೆಗಲೇರಿಸಿಕೊಂಡು ನಿರ್ವಹಿಸುತ್ತಿದ್ದಾನೆ. ಅದೇ ಸಮಯದಲ್ಲಿ ಓದಿ ತನ್ನ ಸ್ವಂತ ಪ್ರಯತ್ನದಿಂದ ಒಳ್ಳೆಯ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ದೇವರು ನನಗೆ ನೀಡುವ ಇಲ್ಲ ಇದನ್ನು ಆತನಿಗೆ ನೀಡಲಿ ಎಂದು ಒಂದು ಕ್ಷಣ ಭಾವುಕರಾಗಿ ಅತ್ತರು.


ಕನ್ನಡದ ನಂಬರ್ 1 ನಿರೂಪಕಿ ಆಗಿರುವ ಅನುಶ್ರೀ ರವರು ಬೆಳೆದು ಬಂದ ದಾರಿ ತುಂಬಾ ಕಷ್ಟಕರವಾಗಿದೆ, ಕಾರ್ಯಕ್ರಮಗಳಲ್ಲಿ ತಮ್ಮ ಮಾತುಗಳಿಂದ ಎಲ್ಲರನ್ನೂ ನಗಿಸುವ ಅನುಶ್ರೀ ರವರು ಒಂದು ಕ್ಷಣ ಕಣ್ಣೀರು ಹಾಕಿದ್ದರಿಂದ ತೀರ್ಪುಗಾರರು ಮತ್ತು ವೀಕ್ಷಕರು ಸಹ ಭಾವುಕರಾದರು