ಪಾಕಿಸ್ತಾನದ ನಿಲುವೇ ಕಾಂಗ್ರೆಸ್ ನಿಲುವು : ನೀವು ದೇಶ ಅಭಿಮಾನಿಯೇ?

ಪಾಕಿಸ್ತಾನದ ನಿಲುವೇ ಕಾಂಗ್ರೆಸ್ ನಿಲುವು : ನೀವು ದೇಶ ಅಭಿಮಾನಿಯೇ?

0

ನೀವು ದೇಶ ಅಭಿಮಾನಿಯೇ, ಹಾಗಿದ್ದರೆ ದಯವಿಟ್ಟು ಸಂಪೂರ್ಣ ಓದಿ ಅಂಕಣ ಓದಿದ ತಕ್ಷಣ ನಿಮ್ಮ ಮತ ಯಾರಿಗೆ ನೀಡಬೇಕೆಂಬುದು ನಿಮಗೆ ಅರ್ಥವಾಗಲಿದೆ, ಅದಕ್ಕೆ ಕಾರಣ ಕೂಡ ನಿಮಗೆ ತಿಳಿಯಲಿದೆ.

ಪ್ರಧಾನಿ ನರೇಂದ್ರ ಮೋದಿಜೀ ಅಧಿಕಾರ ಸ್ವೀಕರಿಸಿದಾಗಿನಿಂದ ಉಗ್ರರಿಗೆ ತಲೆನೋವಾಗಲು ಶುರುವಾಗಿದೆ!! ಯಾಕೆಂದರೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ತಮಗೆ ಇಷ್ಟ ಬಂದಂತೆ ಭಾರತದ ಗಡಿ ದಾಟಿ ಭಾರತವನ್ನು ಪ್ರವೇಶಿಸುತ್ತಿದ್ದರು!! ಆದರೆ ಇದೀಗ ಮೋದಿ ಯುಗ!! ಉಗ್ರರಿಗೆ ಭಾರತದ ಹೆಸರು ಕೇಳುತ್ತಿದ್ದಂತೆಯ ನಡುಕ ಶುರುವಾಗಲು ಆರಂಭವಾಗಿದೆ!! ಉಗ್ರರ ದಮನಕ್ಕೆ ನಮ್ಮ ಭಾರತೀಯ ಸೈನಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮೋದಿಜೀ ಸರಕಾರ ಮಾಡಿಕೊಟ್ಟಿದೆ!! ಆದರೆ ಕಾಂಗ್ರೆಸ್ಸಿಗರು ಮಾತ್ರ ಈ ದೇಶ ಯಾರದ್ದೋ ಅನ್ನುವ ರೀತಿ ಮಾಡುತ್ತಿದ್ದಾರೆ!! ಉಗ್ರರ ದಮನ ಯಾವ ರೀತಿ ಮಾಡುವುದು ಎಂದು ಚಿಂತಿಸದೆ ಉಗ್ರರನ್ನು ಪೋಷಣೆ ಮಾಡುವತ್ತ ಹೆಚ್ಚಿನ ಕಾಳಜಿ ವಹಿಸಿದಂತೆ ಕಾಣುತ್ತಿದೆ!!

ನಮ್ಮ ಸೈನಿಕರು ಗಡಿಯಲ್ಲಿ ನಿರಂತರವಾಗಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದೆ! ಇವರಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ!! ಆದರೆ ಕಾಂಗ್ರೆಸ್ಸಿಗರು ಮಾತ್ರ ಸರಕಾರವನ್ನು ವಿರೋಧಿಸುವ ಭರದಲ್ಲಿದ್ದಾರೆ!! ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕಾರ್ಯ ಮಾಡುತ್ತಿದ್ದಾರೆ!! ಅಷ್ಟೇ ಅಲ್ಲ ಅವರ ಹೇಳಿಕೆಗಳು ಸ್ವಾರ್ಥ ಉಗ್ರರೇ ಬೆಂಬಲಿಸುವ ಮಟ್ಟದಲ್ಲಿ ಇದೆ ಎಂಬುದುವುದು ಈ ದೇಶದ ದುರಂತ!!

ಜಮ್ಮು-ಕಾಶ್ಮೀರದಲ್ಲಿನ ರಾಜ್ಯಪಾಲರ ಆಡಳಿತಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆಯನ್ನು  ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಆಫೀಜ್ ಸೈಯದ್ ಸ್ವಾಗತಿಸಿದ್ದಾನೆ!!  ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನ ಕಾರ್ಯಾಚರಣೆಯಲ್ಲಿ ಉಗ್ರರಗಿಂತ ಹೆಚ್ಚು ಜನಸಾಮಾನ್ಯರೇ ಬಲಿಯಾಗಿದ್ದಾರೆ ಎಂದು ಗುಲಾಂ ನಬಿ ಹೇಳಿದ್ದರು. ಈ ಬಗ್ಗೆ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಬಾ ಇ ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ನೀಡಿದೆ. ಲಷ್ಕರ್ ಎ ತೊಯ್ಬಾದ ವರಿಷ್ಠ ಮಹಮ್ಮದ್ ಷಾ ಪ್ರಕಾರ, ಕಾಂಗ್ರೆಸ್ ಮುಖಂಡ ಆಜಾದ್ ಅವರ ಹೇಳಿಕೆ ಸರಿಯಾಗಿದೆ. ನಮ್ಮದು ಕೂಡಾ ಗುಲಾಂ ನಬಿ ಆಜಾದ್ ಅವರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾನೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರುವ ಮೂಲಕ ಭಾರತವನ್ನು ಜಗಮೋಹನ್ ಕಾಲಘಟ್ಟಕ್ಕೆ ಒಯ್ಯಲಾಗುತ್ತಿದೆ. ಅಷ್ಟೇ ಅಲ್ಲ ಈ ಕ್ರಮ ಸಾಮೂಹಿಕ ಹತ್ಯಾಕಾಂಡಕ್ಕೆ ದಾರಿಯಾಗಬಲ್ಲದು ಎಂದು ಎಚ್ಚರಿಕೆ ನೀಡಿರುವುದಾಗಿ ಲಷ್ಕರ್ ನ ವಕ್ತಾರ ಅಬ್ದುಲ್ ಘಜ್ನವಿ ಪ್ರಕಟಣೆಯಲ್ಲಿ ತಿಳಿಸಿದ್ದಾನೆ. ಸ್ವತಃ ಗುಲಾಮ್ ನಬಿ ಆಜಾದ್ ಇಂತಹ ಹೇಳಿಕೆಗೆ ಪಾಕಿಸ್ಥಾನದವರೇ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದರೆ ಭಾರತದ ಸ್ಥಿತಿಯನ್ನು ಕಾಂಗ್ರೆಸ್ಸಿಗರು ಎತ್ತ ಕಡೆ ತಲುಪಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ!!

ಅಲ್ಲದೇ ರಂಜಾನ್ ಸಂದರ್ಭದಲ್ಲಿ ಕದವಿರಾಮ ಘೋಷಿಸಿರುವುದು ಒಂದು ನಾಟಕ ಎಂದು ಹೇಳಿರುವ ಲಷ್ಕರ್, ಆರ್ ಎಸ್ ಎಸ್ ಅಜೆಂಡಾವನ್ನು ಜಾರಿಗೊಳಿಸಲು ಪಿಡಿಪಿ ಮುಖ್ಯಸ್ಥೆ, ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಉತ್ತಮ ರೀತಿಯಲ್ಲಿ ಯತ್ನಿಸಿದ್ದಾರೆ ಎಂದು ಆರೋಪಿಸಿದೆ. ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಆರ್ ಎಸ್ ಎಸ್ ಅಜೆಂಡಾಕ್ಕೆ ಅನುಕೂಲ ಮಾಡಿಕೊಡಲು ಮುಫ್ತಿ ಜಾಣ್ಮೆಯಿಂದ ನಡೆದುಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸುಮಾರು 8 ಲಕ್ಷ ಯೋಧರು ಅಮಾನವೀಯ ಕೃತ್ಯ ಎಸಗಲು ನಿರತರಾಗಿದ್ದಾರೆ. ಈ ಪಡೆಗಳಿಂದಾಗಿ ಜನರು ಗುಲಾಮರಾಗುವಂತಾಗಿದೆ ಎಂದು ದೂರಿದೆ

ರಂಜಾನ್ ತಿಂಗಳಲ್ಲಿ ಕದನವಿರಾಮ ಘೋಷಿಸಿ ನಾಟಕವಾಡುವ ಸ್ಥಿತಿ ಭಾರತಕ್ಕಿಲ್ಲ!! ತನ್ನಷ್ಟಕ್ಕೆ ಕುಳಿದ್ದ ಭಾರತೀಯ ಯೋಧರನ್ನು ಕೆಣಕಿದ್ದು ಪಾಕಿಸ್ತಾನದ ಉಗ್ರರೇ ಅನ್ನುವುದನ್ನು ಮರೆಯಬಾರದು!! ಭಾರತೀಯರೇ ಹಾಗೆ.. ನಾವು ಸುಖಾಸುಮ್ಮನೆ ಯಾರ ಮೇಲು ಕೆರಳಲ್ಲ!! ನಮ್ಮನ್ನು ಕೆರಳಿಸಿದರೆ ಮಾತ್ರ ಯಾರೂ ಬಿಡಲ್ಲ ಎಂಬುವ ತತ್ವ ಯಾವತ್ತೂ ಮರೆಯಬಾರದು!! ರಂಜಾನ್ ತಿಂಗಳಲ್ಲಿ ಯಾವುದೇ ದಾಳಿ ಮಾಡಬಾರದು ಎಂದ ಉದ್ಧೇಶದಿಂದ ಯಾವುದೇ ದಾಳಿ ಮಾಡದೆ ಇದ್ದರೂ ಪಾಪಿ ಪಾಕಿಸ್ತಾನದ ಉಗ್ರರು ಮಾತ್ರ ನಮ್ಮ ಭಾರತೀಯ ಯೋಧನನ್ನೇ ರಜೆ ನಿಮಿತ್ತ ಊರಿಗೆ ಹೋಗುತ್ತದ್ದ ಸಮಯದಲ್ಲಿ ಅಪಹರಿಸಿ ಕೊಲೆ ಮಾಡಿದ್ದರು!! ಇದು ಪಾಕ್‍ನ ನರಿ ಬುದ್ದಿ ಅಂತ ಕಾಂಗ್ರೆಸ್ಸಿಗರಿಗೆ ಅನಿಸುವುದಿಲ್ಲವೇ?!! ಇಷ್ಟು ಮಾಡಿದರೂ ಪಾಕ್‍ಗೆ ಸಹಾನುಭೂತಿಯನ್ನು ತೋರಿಸುವ ನೀವು ಇನ್ನೂ ಭಾರತದಲ್ಲೇಕೆ ಜೀವಿಸುತ್ತಿದ್ದೀರಿ?! ಅದಲ್ಲದೆ ಬರ್ಕಾದತ್ ಕುಡಾ ಗುಲಾಂ ನಬಿ ಹೇಳಿಕೆಗೆ ಬೆಂಬಲಿಸಿದ್ದು ಉಗ್ರರಿಗೆ ಈ ರೀತಿ ಬೆಂಬಲಿಸುತ್ತಿದ್ದು ನಿಜವಾಗಿಯೂ ಭಾರತದ ಮಣ್ಣಲ್ಲಿ ಜೀವಿಸುವ ಯೋಗ್ಯತೆ ನಿಮಗಿಲ್ಲ ಅಂತ ಅನಿಸುತ್ತಿದೆ.

ಇತ್ತೀಚೆಗೆ ನ್ಯೂಸ್ 18 ಇಂಗ್ಲಿಷ್ ಚಾನೆಲ್ ಗೆ ನೀಡಿದ್ದ ಸಂದರ್ಶನದಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮಾತನಾಡುತ್ತ, ಅವರು ಹತ್ಯಾಕಾಂಡದ ಬಗ್ಗೆ ಹೇಳಿದ್ದಾರೆ. ನಾಲ್ಕು ಮಂದಿ ಉಗ್ರರ ವಿರುದ್ಧ ಕಾರ್ಯಾಚರಣೆಗಾಗಿ ಯೋಧರು 20 ಮಂದಿ ನಾಗರಿಕರನ್ನು ಕೊಲ್ಲುತ್ತಾರೆ. ಅವರ ಕಾರ್ಯಾಚರಣೆ ಉಗ್ರರಿಗಿಂತ ಹೆಚ್ಚಾಗಿ ನಾಗರಿಕರ ವಿರುದ್ಧವೇ ಆಗಿದೆ. ಅದೇ ರೀತಿ ಪುಲ್ವಾಮಾ ಪ್ರದೇಶದಲ್ಲಿ 13 ಜನರನ್ನು ಕೊಂದಿದ್ದಾರೆ. ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ. ಈ ಕಾರ್ಯಾಚರಣೆಯಿಂದ ಯಾವುದೇ ಉಪಯೋಗವಿಲ್ಲ. ಇದೊಂದು ವ್ಯವಸ್ಥಿತ ಹತ್ಯಾಕಾಂಡ. ಯಾವುದೇ ಕಾರಣಕ್ಕೂ ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳುವುದರ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಬದ್ಧ ವೈರಿಗಳಾಗಿದ್ದ ಅಮೆರಿಕಾ ಹಾಗೂ ಉತ್ತರ ಕೊರಿಯಾ ಕೂಡಾ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ ಎಂದು ಹೇಳಿದ್ದರು. ಆಜಾದ್ ಹೇಳಿಕೆಯನ್ನು ಉಗ್ರಗಾಮಿ ಸಂಘಟನೆ ಲಷ್ಕರ್ ಬಹುಪರಾಕ್ ಹೇಳಿತ್ತು. ಆದರೆ ತಕ್ಕ ರೀತಿಯಲ್ಲಿ ಬಿಜೆಪಿ ತಿರುಗೇಟು ನೀಡಿದ್ದಾರೆ!!

ಅಂಕಿ ಅಂಶ ಬಿಚ್ಚಿಟ್ಟ ಬಿಜೆಪಿ!!

2012ರಲ್ಲಿ ಜಮ್ಮು-ಕಾಶ್ಮೀರದಲ್ಲಿ 72 ಉಗ್ರರು ಬಲಿಯಾಗಿದ್ದು, 2013ರಲ್ಲಿ 67 ಉಗ್ರರು ಸಾವನ್ನಪ್ಪಿದ್ದರು. ನಾವು 2014ರ ಜೂನ್ ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಧಿಕಾರದ ಗದ್ದುಗೆ ಏರಿದ್ದೇವು. 2014ರಲ್ಲಿ ನಡೆದ ಕಾರ್ಯಾಚರಣೆಯಲ್ಲಿ 110 ಉಗ್ರರು ಬಲಿಯಾಗಿದ್ದರು. 2015ರಲ್ಲಿ 108 ಉಗ್ರರು, 2016ರಲ್ಲಿ 150 ಉಗ್ರರು, 2017ರಲ್ಲಿ 217 ಉಗ್ರರು ಹಾಗೂ 2018ರ ಮೇ ವರೆಗೆ 75 ಉಗ್ರರನ್ನು ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಅಂಕಿ, ಅಂಶಗಳ ಮಾಹಿತಿ ನೀಡಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ…

ಹಾಗಾದರೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ಕೆಲವೇ ಕೆಲವು ಉಗ್ರರನ್ನು ಹೊಡೆದುರುಳಿಸಿದ್ದರು!! ಭಾರತೀಯ ಸೈನಿಕರ ವಿರುದ್ಧ ಹೋರಾಟ ನಡೆಸಿದರೆ ತಿರುಗಿ ನಮ್ಮ ಸೈನಿಕರು ಪಾಕ್‍ಗೆ ಪ್ರತ್ಯುತ್ತರ ಕೊಡಬೇಕಾದರೆ ಯುಪಿಎ ಸರಕಾರದ ಅನುಮತಿ ಪಡೆಯಬೇಕಿತ್ತು!! ಆದರೆ ಇದೀಗ ಮೋದೀ ಯುಗ ಭಾರತೀಯ ಯೋಧರ ಸ್ಥಿತಿಯೇ ಬದಲಾಗಿದೆ!! ಯೋಧರು ಅಟ್ಟ ಹಾಸ ಮೆರೆದರೆ ಉಗ್ರರನ್ನು ದ್ವಂಸ ಮಾಡಲು ಮೋದೀ ಸರಕಾರ ಅನುಮತಿ ನೀಡಿದೆ!! ಹೀಗಾಗಿ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನು ಲಷ್ಕರ್ ಎ ತೊಯ್ಬಾ ಸ್ವಾಗತಿಸಿ ಅವರ ಹೇಳಿಕೆಗೆ ಕುಣಿದು ಕುಪ್ಪಳಿಸುತ್ತಿದ್ದಾರೆ!!. ಕಾಂಗ್ರೆಸ್ ಸರಕಾರ ಭಾರತವನ್ನು ಸುಮಾರು 70 ವರ್ಷಗಳ ಕಾಲ ಆಳಿದೆ. ಆದರೆ ಇಷ್ಟೊಂದು ಉಗ್ರರನ್ನು ಹೊಡೆದುರುಳಿಸಲು ಮೋದಿಯೇ ಬರಬೇಕಾಯಿತು. ಇಂದು ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಸಾಧಾರಣವಾಗಿ ಸಾಕಷ್ಟು ಉಗ್ರ ಕಮಾಂಡರ್ಗಳು ಹೇಳಹೆಸರಿಲ್ಲದಂತೆ ನಾಶವಾಗಿರುವುದರಿಂದ ಸೇನಾಪಡೆಗೆ ಸಿಕ್ಕ ಭರ್ಜರಿ ಯಶಸ್ವಿ ಎಂದೇ ಹೇಳಬಹುದು. ಮೋದಿ ಸರಕಾರ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಉಗ್ರರನ್ನು ಹುಡುಕಿ ಹುಡುಕಿ ಹೊಸಕಿ ಹಾಕುತ್ತಿದೆ!! ಇದು ಮೋದೀಜೀ ತಾಕತ್ತು!!

Complete Credtis: News Dailry