ಮತ್ತೊಮ್ಮೆ ಸುಬ್ರಹ್ಮಣಿಯನ್ ಸ್ವಾಮಿ ಪಾಶಕ್ಕೆ ಸಿಲುಕಿದ ರಾಹುಲ್ !!

0

ಹೌದು, ಮತ್ತೊಮ್ಮೆ ರಾಹುಲ್ ಅವರು ಸುಬ್ರಮಣಿಯನ್ ಸ್ವಾಮಿ ಪಾಶಕ್ಕೆ ಸಿಲುಕಿದ್ದಾರೆ. ಪ್ರತಿಬಾರಿಯೂ ರಾಹುಲ್ ಒಂದಲ್ಲ ಒಂದು ವಿಷಯಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಸಿಲುಕಿಕೊಳ್ಳುತ್ತಾರೆ. ಸದಾ ಟೀಕೆ ಗಳ ಮೇಲೆ ಟೀಕೆಗಳನ್ನು ಮಾಡುವ ರಾಹುಲ್ ರವರಿಗೆ ಯಾರಾದರೂ ಒಬ್ಬರು ಪ್ರತಿ ಟೀಕೆ ನಂತರ ಕಡಕ್ ಉತ್ತರವನ್ನು ನೀಡುತ್ತಾರೆ. ಈ ಬಾರಿ ಮೋದಿ ರವರನ್ನು ಟೀಕಿಸಲು ಹೋಗಿ ಸುಬ್ರಮಣಿಯನ್ ಸ್ವಾಮಿ ಬಳಿ ರಾಹುಲ್ ಸಿಲುಕಿಕೊಂಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು?

ಯೋಗ ದಿನಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಭಾರತ ಮೂಲದ ಈ ಯೋಗ ಪ್ರಪಂಚದಾದ್ಯಂತ ತನ್ನದೇ ಆದ ಛಾಪು ಡಿಸಿದೆ. ಅದರಲ್ಲೂ ಅದರಲ್ಲೂ ಯೋಗ ವಿಶ್ವದೆಲ್ಲೆಡೆ ಮತ್ತಷ್ಟು ವ್ಯಾಪಿಸಿದ್ದು ಸತ್ಯ. ಮೊನ್ನೆಯಷ್ಟೇ ಮೋದಿ ರವರು ಫಿಟ್ನೆಸ್ ಚಾಲೆಂಜನ್ನು ತೆಗೆದುಕೊಂಡು ತಾವು ಪ್ರತಿದಿನವೂ ಮಾಡುವಂತಹ ಯೋಗವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.

ಇದನ್ನು ಕಂಡ ರಾಹುಲ್ ಗಾಂಧಿ ರವರು ಮೋದಿ ರವರನ್ನು ಟ್ರೊಲ್ ಮಾಡಲು ಯತ್ನಿಸಿ, ಯೋಗ ದೇಶವನ್ನು ಹಿಂದೆ ತೆಗೆದುಕೊಂಡು ಹೋಗುತ್ತಿದೆ. ದಯವಿಟ್ಟು  ಪ್ರಧಾನಿ ಅವರು ದೇಶವನ್ನು ಮುಂದೆ ತೆಗೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡಬೇಕು ಎಂದು ಟೀಕಿಸಿದ್ದರು.ಇದಕ್ಕೆ ಸುಬ್ರಮಣಿಯನ್ ಸ್ವಾಮಿ ಅವರು ಖಡಕ್ ಉತ್ತರವನ್ನು ನೀಡಿದ್ದಾರೆ.

ಅಷ್ಟಕ್ಕೂ ಸುಬ್ರಹ್ಮಣಿಯನ್ ಸ್ವಾಮಿ ರವರ ಉತ್ತರವೇನು?

ಮಾನ್ಯ ರಾಹುಲ್ ಗಾಂಧಿ ರವರೇ, ನಿಮಗೆ ಯೋಗ ಮತ್ತು ದೇಶದ ಬಗ್ಗೆ ಏನೂ ತಿಳಿದಿಲ್ಲ. ನಿಮಗೆ ತಿಳಿದಿರುವುದು ಕೇವಲ ಲಂಡನ್ ಬಾರ್ ಗಳು ಪಬ್ ಗಳು ನೈಟ್ ಕ್ಲಬ್ ಗಳು ಮಾತ್ರ. ನಾವು ದೇಶದ ಬಗ್ಗೆ ತಿಳಿದುಕೊಳ್ಳದೆ ಮಾತನಾಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಟ್ವಿಟರ್ ಫೇಸ್ ಬುಕ್ ನಲ್ಲಿ ಬಹಳ ಪ್ರಶಂಸೆ ವ್ಯಕ್ತವಾಗಿದ್ದು, ಪ್ರತಿಯೊಬ್ಬರು ರಾಹುಲ್ ರವರನ್ನು ಟ್ರೊಲ್ ಮಾಡಲು ಪ್ರಾರಂಭಿಸಿದ್ದಾರೆ.

ಆದರೆ ವಿಷಯ ಏನೇ ಇರಲಿ ಯೋಗ ಎಂಬುದು ಭಾರತದ ಒಂದು ಹೆಮ್ಮೆಯ ಸಂಕೇತ, ಅದು ಎಂದು ದೇಶವನ್ನು ಹಿಂದೆಗೆದುಕೊಳ್ಳುವ ಅಂತಹ ಕೆಲಸ ಮಾಡೋದಿಲ್ಲ . ಕೇವಲ ನಿಮ್ಮ ರಾಜಕೀಯ ಬೇಳೆಯನ್ನು ಬೇಯಿಸಿ ಕೊಳ್ಳುವುದಕ್ಕಾಗಿ ದೇಶದ ಕೆಲವು ಹೆಮ್ಮೆಯ ಸಂಗತಿಗಳ ಬಗ್ಗೆ ಮಾತನಾಡುವುದು ತಪ್ಪು. ಹೌದು ಎನ್ನುವವರು ಶೇರ್ ಮಾಡಿ.