ಸಿದ್ದರಾಮಯ್ಯನವರ ಆಡಂಬರದ ಜೀವನ ಹೇಗಿದೆ ಗೊತ್ತಾ..? ಈ ಮಾಹಿತಿ ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!

ಸಿದ್ದರಾಮಯ್ಯನವರ ಆಡಂಬರದ ಜೀವನ ಹೇಗಿದೆ ಗೊತ್ತಾ..? ಈ ಮಾಹಿತಿ ತಿಳಿದು ಬೆಚ್ಚಿಬೀಳ್ತೀರಾ ಹುಷಾರ್..!!

0

ಬಡವರ ಬಂಧು, ಅಹಿಂದರ ನಾಯಕ ಕರ್ನಾಟಕದ ಸೂಪರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸೋಪು, ಬೆಡ್,ಸ್ಥಾನಮಾಡಲು ಕುಳಿತುಕೊಳ್ಳುವ ಸ್ಟೂಲಿಗೆ ಮಾಡುದ ಖರ್ಚು ಎಷ್ಟು ಗೊತ್ತೇ?

ಸದಾ ಒಂದಲ್ಲಒಂದು ಕೆಲಸಗಳಿಗೆ ಸುದ್ದಿಯಲ್ಲಿರುವ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಭಾರಿಯೂ ಭಾರಿ ಸುದ್ದಿಯಲ್ಲಿದ್ದಾರೆ.ಕಾಗೆ ಕುಳಿತದ್ದಕೆ ಕಾರು ಬದಲಾಯಿಸಿದ್ದು, ದಿನನಿತ್ಯದ ಚಹಾಕಾಫಿ,ಬಿಸ್ಟೇಟಿಗೆ ಎರಡುಕೋಟಿ ಖರ್ಚು ಮಾಡಿದ್ದು , 80 ಲಕ್ಷದ ವಾಚುಕಟ್ಟಿಕೊಂಡದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಬಿಡಿ.

ಆದ್ರೆ ಇತ್ತೀಚೆಗೆ ಸಿದ್ದರಾಮಯ್ಯರ ಖರ್ಚಿನ ಕುರಿತು ಮಾಹಿತಿಹಕ್ಕು ಕಾಯ್ದೆಯಡಿಯಲ್ಲಿ ಪಡೆದ ಒಂದು ಮಾಹಿತಿ ಕೇಳಿ ನೀವು ಸಿಡಿಲುಬಡಿದಂತಾಗುತ್ತಿರಿ ನೋಡಿ. ತಮ್ಮನ್ನು ತಾನೇ ಬಡವ, ರೈತರ ಮಗ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರು ಮಾಡಿದ ಆ ಖರ್ಚಿನ ಮೊತ್ತ ಎಷ್ಟು ಗೊತ್ತೇ?

ಒಟ್ಟು ಖರ್ಚಿನ ವಿವರಗಳು..

ಸಿದ್ದರಾಮಯ್ಯರ ಅಧಿಕೃತ ನಿವಾಸ ಕೃಷ್ಣ ಹಾಗೂ ಕಾವೇರಿಗೆ ಗೃಹೋಪಕರಣ ಹಾಗೂ ನಾಲ್ಕು ಬೃಹತ್ ಟಿವಿ ಖರಿಧಿ ಮಾಡಲು ಮಾಡಿದ ಖರ್ಚು 18,38,426 ರೂಪಾಯಿ.

ತನ್ನ ನಿವಾಸದ ಬೆಡ್ ಶೀಟ್, ದಿಂಬು, ರಬ್ಬರ್ ಮ್ಯಾಟ್, ಸೋಫಾ, ಬೆಡ್ ಕವರಿಗೆ ಬರೋಬ್ಬರಿ 15,97,898 ರೂಪಾಯಿ ಖರ್ಚು ಮಾಡಿದ್ದಾರೆ.

ಬಾತ್ರೂಮ್ ಹಾಗೂ ವಾಟರ್ಪ್ರೋಪಿಂಗ್ ವ್ಯವಸ್ಥೆಗೆ ಸುಮಾರು 24,87,234 ರೂಪಾಯಿ.

ಅಡುಗೆಮನೆ, ಪೂಜೆಕೋಣೆ, ಸ್ಟೋರ್ ರೂಮ್ ರಿಪೇರಿಗೆ ಸುಮಾರು 35,63,807 ರೂಪಾಯಿ.

ಇನ್ನು ಮರದಕೆಲಸ, ಷೋಕೇಸ್, ಗ್ಲಾಸ್ ಕೆಲಸಕ್ಕೆ ಸರಿಸುಮಾರು 43,00,900 ರೂಪಾಯಿ ಖರ್ಚು ಮಾಡಲಾಗಿದೆ.

 

ಮುಖ್ಯಮಂತ್ರಿಗಳು ತಾವು ಬಳಸುವ ಸೋಪು ಮತ್ತು ರೂಮ್ ಫ್ರೆಶ್ನರ್ ಗೆ ಸುಮಾರು 1,26,878 ರೂಪಾಯಿ ಖರ್ಚು ಮಾಡಿದ್ದಾರೆ.

ಪೇಪರ್ ಕಪ್ಪಿಗೆ 1,87,950 ರೂಪಾಯಿ. ಅಗರುಬತ್ತಿ, ವಾಷಿಂಗ್ ಪೌಡರ್, ಬ್ಯಾಟರಿ, ಹಾರ್ಪಿಕ್ ಕ್ಲಿನರಿಗೆ 50 ಸಾವಿರ ರೂಪಾಯಿ. ಮುಖ್ಯಮಂತ್ರಿಗಳು ನಿಂತು ಸ್ನಾನ ಮಾಡುವುದಲ್ಲ ಅವರು ಕುಳಿತು ಸ್ನಾನ ಮಾಡುವುದು.ಆ ಕುಳಿತುಕೊಳ್ಳುವ ಸ್ಟೂಲಿಗೆ ಮಾಡಿದ ಖರ್ಚು 22 ಸಾವಿರ. ನಮ್ಮ (ಎ)ಮ್ಮೆಯ ಮುಖ್ಯಮಂತ್ರಿಗಳು ಒಟ್ಟು ಮಾಡಿದ ಖರ್ಚು ಸರಿಸುಮಾರು 5 ಕೋಟಿ ರೂಪಾಯಿ.

ಪದೇ ಪದೇ ನರೇಂದ್ರಮೋದಿಯನ್ನು ಸೂಟ್ ಬೂಟಿನ ಸರ್ಕಾರ ಎಂದು ತೆಗಳುವ ಈ ಸಿದ್ದಣ್ಣ ತಾವೇನು ಮಾಡುತ್ತಿದ್ದಾರೆ? ತಮ್ಮ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವಾಗ ತಾನು ಸ್ನಾನ ಮಾಡಲು ಕುಳಿತುಕೊಳ್ಳುವ ಸ್ಟೂಲ್ ಗೆ 22ಸಾವಿರ ಖರ್ಚು ಮಾಡುತ್ತಾರಲ್ಲ ಇವರೆಂತ ಮುಟ್ಟಲಿರಬೇಕು?

ಮನೆಯಿಲ್ಲದ ಕೋಟಿಜನ ರಾಜ್ಯದಲ್ಲಿ ಇರುವಾಗ ಬರಿ ತಮ್ಮ ಸೋಪಿಗೆ 25ಲಕ್ಷ ಖರ್ಚು ಮಾಡುತ್ತಾರಲ್ಲ ಇವರೇನು ರಾಜಮನೆತನದವರ? ನೀರಿಲ್ಲದೆ ಜನರು ಸಾಯುತ್ತಿರುವಾಗ ತಾನು ಬಳಸುವ ಪೇಪರ್ ಕಪ್ಪಿಗೆ ಲಕ್ಷಾಂತರ ಖರ್ಚು ಮಾಡುತ್ತಾರಲ್ಲ ಇವರು ಯಾವಸೀಮೆ ನಾಯಕ?

ನಾನು ರೈತನ ಮಗ ರೈತನ ಮಗ ಅನ್ನುತ್ತಿರಲ್ಲಾ? ರೈತನ ಮಗ ಹೀಗಿರುತ್ತಾನೆಯೇ ಸಿದ್ದಣ್ಣ? ಕೋಟಿ ರೂಪಾಯಿಯ ಹಾಸಿಗೆಯಲ್ಲಿ ಅವನು ಕನಸಲ್ಲೂ ಮಲಗುದಿಲ್ಲ, ನಿಮಗದೇ ಬೇಕಲ್ಲವೇ ?ಇಲ್ಲ ಅಂದ್ರೆ ನಿದ್ರೆ ಬರುದಿಲ್ಲವಲ್ಲಾ??
ಈವರೆಗೆ ನಿಮ್ಮ ನಿದ್ದೆ ಮಾತ್ರ ಕೆಟ್ಟುಹೋಗಿದೆ ಅಂದುಕೊಂಡಿದ್ದೆ ಈಗ ಸರಿ ಗೋತ್ತಾಯಿತು ತಲೆಯೂ ಪೂರ್ತಿ ಕೆಟ್ಟುಹೋಗಿದೆ ಅಂತ.

ಹೇಳಿ ಮಿಸ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅದು ಯಾರ ದುಡ್ಡಲ್ಲ ರಾಜ್ಯದ ಬಡಜನರ ಹಣ. ಖರ್ಚು ಮಾಡುವಾಗ ರಾಜ್ಯದ ಹಿತಕೋಸ್ಕರ ಖರ್ಚುಮಾಡಿ.

ಇಂತಹ ವಿಲಾಸಿ ಜೀವನ ನಡೆಸುವ ನಾಯಕ ನಮಗೆ ಬೇಕೇ ಬೇಡವೇ ಎಂದು ತೀರ್ಮಾನ ಮಾಡುವ ಕಾಲ ಹತ್ತಿರ ಬರುತ್ತಿದೆ ಬಂಧುಗಳೇ, ಯೋಚನೆ ಮಾಡಿ ಮತ ಚಲಾಯಿಸಿ.

 

✍ ಸಚಿನ್ ಜೈನ್ ಹಳೆಯೂರ್