Kannada News: ಶ್ರೀರಸ್ತು ಶುಭಮಸ್ತು: ಅದ್ಭುತ ನಟನೆಯ ಮೂಲಕ ರಾಜ್ಯದ ಮನಗೆದ್ದಿರುವ ಮಾಧವ ರವರ ಪತ್ನಿ ಹಾಗೂ ಕುಟುಂಬ ಹೇಗಿದೆ ಗೊತ್ತೇ??

Kannada News: ಶ್ರೀರಸ್ತು ಶುಭಮಸ್ತು: ಅದ್ಭುತ ನಟನೆಯ ಮೂಲಕ ರಾಜ್ಯದ ಮನಗೆದ್ದಿರುವ ಮಾಧವ ರವರ ಪತ್ನಿ ಹಾಗೂ ಕುಟುಂಬ ಹೇಗಿದೆ ಗೊತ್ತೇ??

Kannada News: ಜೀಕನ್ನಡ (Zee Kannada) ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಜನಮನ ಗೆದ್ದಿರುವ ಧಾರವಾಹಿ ಶ್ರೀರಸ್ತು ಶುಭಮಸ್ತು (Shrirasthu Shubhamasthu). ಈ ಧಾರವಾಹಿ ಶುರುವಾಗಿ ಎರಡು ತಿಂಗಳು ಕಳೆದಿದ್ದು, ಬೇರೆ ಧಾರವಾಹಿಗಳ ಹಾಗೆ ಅತ್ತೆ ಸೊಸೆ ಜಗಳ ತೋರಿಸದೆ ಸೊಸೆಯೇ ಅತ್ತೆಗೆ ಸಪೋರ್ಟ್ ಮಾಡುತ್ತಿರುವ ಈ ಧಾರವಾಹಿಯ ಜನರಿಗೆ ಹೊಸ ಅನುಭವ ನೀಡುತ್ತಿದೆ. ಆರಂಭವಾದ ವಾರದಿಂದಲೂ ಶ್ರೀರಸ್ತು ಶುಭಮಸ್ತು ಧಾರವಾಹಿ ಟಾಪ್ 3ನೇ ಸ್ಥಾನದಲ್ಲಿ ನಿಂತಿದೆ. ಈ ಧಾರಾವಾಹಿಯ ಮುಖ್ಯ ಪಾತ್ರ ತುಳಸಿ (Tulasi) ಮತ್ತು ಮಾಧವ್ (Madhav).

ತುಳಸಿ ಪಾತ್ರದಲ್ಲಿ ಚಂದನವನದ ಖ್ಯಾತ ನಟಿ ಸುಧಾ ರಾಣಿ (Sudha Rani) ಅವರು ನಟಿಸಿದ್ದು, ಬಹಳ ವರ್ಷಗಳಿಂದ ಚಿತ್ರರಂಗದಲ್ಲಿರುವ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ತುಳಸಿ ಪಾತ್ರದ ಮೂಲಕ ಎಲ್ಲರಿಗು ಇಷ್ಟವಾಗಿದ್ದಾರೆ ನಟಿ ಸುಧಾ ರಾಣಿ. ಇನ್ನು ಮಾಧವ್ ಪಾತ್ರದಲ್ಲಿ ನಟಿಸಿರುವ ಕಲಾವಿದನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇಂದು ನಿಮಗೆ ಮಾಧವ್ ಅವರ ಬಗ್ಗೆ ತಿಳಿಸುತ್ತೇವೆ.. ಮಾಧವ್ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದನ ನಿಜವಾದ ಹೆಸರು ಅಜಿತ್ ಹಂದೆ (Ajith Hande). ಇವರು ರಂಗಭೂಮಿ, ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎಲ್ಲದರಲ್ಲೂ ಗುರುತಿಸಿಕೊಂಡಿರುವವರು.. ಇದನ್ನು ಓದಿ..Kannada News: ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್; ಮೊದಲ ಅತಿಥಿ ಯರಂತೆ ಗೊತ್ತೆ?? ಹೆಸರು ಕೇಳಿ, ಬೇಡವೇ ಬೇಡ ನೆಟ್ಟಿಗರು. ಕಾರಣ ಏನು ಗೊತ್ತೇ??

ಅಜಿತ್ ಅವರು ಮುಕ್ತ ಮತ್ತು ಇನ್ನಿತರ ಹಲವು ಕನ್ನಡ ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಬಹಳಷ್ಟು ವರ್ಷಗಳ ಹಿಂದೆ ನಟಿಸಿದ್ದಾರೆ. ಆದರೆ ಹಲವು ವರ್ಷಗಳ ಕಾಲ ನಟನೆ ಇಂದ ಬ್ರೇಕ್ ತೆಗೆದುಕೊಂಡಿದ್ದರು ಅಜಿತ್. ಆ ಸಮಯದಲ್ಲಿ ತಮ್ಮದೇ ಆದ ಪ್ರೊಡಕ್ಷನ್ ಸಂಸ್ಥೆ ಶುರು ಮಾಡಿ, ಅದರ ಮೂಲಕ ಹಲವು ಪ್ರಾಜೆಕ್ಟ್ ಗಳನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದಾರೆ. ಈಗ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ. ಅಜಿತ್ ಅವರ ಕುಟುಂಬದ ವಿಚಾರದ ಬಗ್ಗೆ ಹೇಳುವುದಾದರೆ, ಅಜಿತ್ ಅವರ ಪತ್ನಿಯ ಹೆಸರು ಸಿಂಧು (Sindhu), ಅವರು ಗಾಯಕಿ ಮತ್ತು ಕಲಾವಿದೆ ಆಗಿದ್ದಾರೆ. ಅಜಿತ್ ಮತ್ತು ಸಿಂಧು ದಂಪತಿಗೆ ಮುದ್ದಾದ ಮಗ ಇದ್ದಾನೆ, ಇವರ ಮಗನ ಹೆಸರು ಅಥರ್ವ (Atharva). ಇದನ್ನು ಓದಿ..Kannada News: ಕಳಚಿತು ಕನ್ನಡದ ಮತ್ತೊಂದು ಕೊಂಬೆ: ಭಾನುವಾರ ಮುಂಜಾನೆ ಇಹಲೋಕ ತ್ಯಜಿಸಿದ ಮಂದೀಪ್ ರಾಯ್: ಕಾರಣವೇನು ಗೊತ್ತೇ?