Kannada News: ಕಳಚಿತು ಕನ್ನಡದ ಮತ್ತೊಂದು ಕೊಂಬೆ: ಭಾನುವಾರ ಮುಂಜಾನೆ ಇಹಲೋಕ ತ್ಯಜಿಸಿದ ಮಂದೀಪ್ ರಾಯ್: ಕಾರಣವೇನು ಗೊತ್ತೇ?

Kannada News: ಕಳಚಿತು ಕನ್ನಡದ ಮತ್ತೊಂದು ಕೊಂಬೆ: ಭಾನುವಾರ ಮುಂಜಾನೆ ಇಹಲೋಕ ತ್ಯಜಿಸಿದ ಮಂದೀಪ್ ರಾಯ್: ಕಾರಣವೇನು ಗೊತ್ತೇ?

Kannada News: ಕನ್ನಡ ಚಿತ್ರರಂಗ ಒಂದೆರಡು ವರ್ಷಗಳಿಂದ ಸಾಕಷ್ಟು ಕಲಾವಿದರನ್ನು ಕಳೆದುಕೊಳ್ಳುತ್ತಿದೆ. ಇಂದು ಮುಂಜಾನೆ ಕನ್ನಡದ ಮತರೊಬ್ಬ ಹಿರಿಯ ಕಲಾವಿದ ಮಂದೀಪ್ ರಾಯ್ (Mandeep Roy) ಅವರು ಅಗಲಿದ್ದಾರೆ ಎನ್ನುವ ಸುದ್ದಿ ತಿಳಿದುಬಂದಿದೆ. ಮಂದೀಪ್ ಅವರು ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ (Bangalore) ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಚಿಕಿತ್ಸೆ ಪಡೆದು, ಚೇತರಿಸಿಕೊಂಡು ಮನೆಗೆ ಮರಳಿ ಬಂದಿದ್ದರು. ಆದರೆ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದ ಹಾಗೆ ಕನ್ನಡ ಚಿತ್ರರಂಗದ ಕಲಾವಿದರು ಮಂದೀಪ್ ರಾಯ್ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ. ಇವರು ನಾಲ್ಕೈದು ದಶಕಗಳ ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಮಂದೀಪ್ ರಾಯ್ ಅವರು, ಮೇರು ನಟರಾದ ಶಂಕರ್ ನಾಗ್ ಅವರು ಮತ್ತು ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಎಂಟ್ರಿ ಕೊಟ್ಟವರು.. ಇದನ್ನು ಓದಿ.. Kannada News: ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್; ಮೊದಲ ಅತಿಥಿ ಯರಂತೆ ಗೊತ್ತೆ?? ಹೆಸರು ಕೇಳಿ, ಬೇಡವೇ ಬೇಡ ನೆಟ್ಟಿಗರು. ಕಾರಣ ಏನು ಗೊತ್ತೇ??

ಆಗಿನಿಂದ ಈಗಿನವರೆಗು 500 ಕ್ಕಿಂತ ಹೆಚ್ಬು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯನಟನಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದರು. ಮಿಂಚಿನ ಓಟ, ಆಕಸ್ಮಿಕ, ಬೆಂಕಿಯ ಬಲೆ, ಪ್ರೀತ್ಸೊದ್ ತಪ್ಪಾ, ಪುಷ್ಪಕ ವಿಮಾನ, ಆಪ್ತರಕ್ಷಕ, ಏಳು ಸುತ್ತಿನ ಕೋಟೆ, ಬೆಳದಿಂಗಳ ಬಾಲೆ, ಖುಷಿ ಸೇರಿದಂತೆ ಅನೇಕ ಪಾತ್ರಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮತ್ತು ಕನ್ನಡ ಸಿನಿಪ್ರಿಯರ ನಡುವೆ ಮನೆಮಾತಾಗಿದ್ದರು. ಹಾಸ್ಯಪಾತ್ರಗಳು ಮತ್ತು ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಈಗ ಇವರು ಇಹಲೋಕ ತ್ಯಜಿಸಿದ್ದಾರೆ. ಇದನ್ನು ಓದಿ..Kannada News: ಜೀವನೇ ಕೊಡುವಷ್ಟು ಆ ನಟಿಯನ್ನು ಪ್ರೀತಿ ಮಾಡಿದ್ದ ತೆಲುಗಿನ ಬಾಲಯ್ಯ: ಆದರೆ ಕೊನೆಗೆ ಕೈ ಕೊಟ್ಟದ್ದು ಯಾಕೆ ಗೊತ್ತೆ? ಕೊನೆಯಲ್ಲಿ ಏನಾಯ್ತು ಗೊತ್ತೇ??