Kannada News: ಆಗಲೇ ನಾನು ಅವರ ಸಿನಿಮಾ ಮಾಡುವುದಿಲ್ಲ ಅಂತ ಹೇಳಿ ಬಿಟ್ಟಿದ್ದೆ, ಅವರ ಬಲವಂತಕ್ಕೆ ಮಾಡಿದೆ ಎಂದ ರಶ್ಮಿಕಾ.

Kannada News: ಆಗಲೇ ನಾನು ಅವರ ಸಿನಿಮಾ ಮಾಡುವುದಿಲ್ಲ ಅಂತ ಹೇಳಿ ಬಿಟ್ಟಿದ್ದೆ, ಅವರ ಬಲವಂತಕ್ಕೆ ಮಾಡಿದೆ ಎಂದ ರಶ್ಮಿಕಾ.

Kannada News: ನಟಿ ರಶ್ಮಿಕಾ (Rashmika) ಅವರ ಬಗೆಗಿನ ಒಂದು ವಿಚಾರ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆ ಎನ್ನುವ ಸುದ್ದಿಯೊಂದು ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಸಿನಿಪ್ರಿಯರು ಮಾತ್ರವಲ್ಲದೆ, ಬೇರೆ ಭಾಷೆಯವರು ಕೂಡ ಇದಕ್ಕೆ ಸಪೋರ್ಟ್ ಮಾಡಿ, ರಶ್ಮಿಕಾ ಮಂದಣ್ಣ ಅವರು ಬ್ಯಾನ್ ಆಗಬೇಕು ಎನ್ನುತ್ತಿದ್ದಾರೆ. ಅಷ್ಟಕ್ಕೂ ಈ ರೀತಿ ಆಗೋದಕ್ಕೆ ಕಾರಣ ಏನು ಎಂದರೆ, ಕರ್ನಾಟಕದ ಮೇಲೆ, ಕನ್ನಡದ ಮೇಲೆ ಹಾಗು ತಮಗೆ ಮೊದಲ ಅವಕಾಶ ಕೊಟ್ಟವರ ಮೇಲೆ ರಶ್ಮಿಕಾ ಅವರಿಗೆ ಗೌರವ ಇಲ್ಲದೆ ಇರುವುದು ಎಂದು ಹೇಳಲಾಗುತ್ತಿದೆ.

ಅದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ, ಇತ್ತೀಚೆಗೆ ರಶ್ಮಿಕಾ ಅವರು ಕಾಣಿಸಿಕೊಂಡ ಒಂದು ಹಿಂದಿ ಸಂದರ್ಶನದಲ್ಲಿ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಕೊಟ್ಟ ರಶ್ಮಿಕಾ, ಆಗ ನಾನು ಕಾಲೇಜಿನಲ್ಲಿದ್ದಾಗ ಒಂದು ಬ್ಯೂಟಿ ಕಾಂಟೆಸ್ಟ್ ನಲ್ಲಿ ಗೆದ್ದಿದ್ದೆ, ಟೈಮ್ಸ್ ಆಫ್ ಇಂಡಿಯಾ ಕವರ್ ನಲ್ಲಿ ನನ್ನ ಫೋಟೋ ಬಂದಿತ್ತು, ಅದನ್ನು ನೋಡಿ ಆ ಪ್ರೊಡಕ್ಷನ್ ಕಂಪನಿಯವರು ನನಗೆ ಕಾಲ್ ಮಾಡಿದರು, ಆದರೆ ಅದು ಪ್ರಾಂಕ್ ಕಾಲ್ ಅಂತ ನಾನು ಅನ್ಕೊಂಡಿದ್ದೆ, ನನ್ನ ಹುಡುಕಿಕೊಂಡು ಅವರು ನಮ್ಮ ಕಾಲೇಜ್ ಗೆ ಬಂದರು. ಸಿನಿಮಾದಲ್ಲಿ ನಟಿಸೋದಕ್ಕೆ ನನಗೆ ಆಸಕ್ತಿ ಇಲ್ಲ ಅಂತ ಹೇಳಿದೆ. ಇದನ್ನು ಓದಿ.. Darshan: ಒಂದು ಕಡೆ ಮಾಧ್ಯಮದವರ ಬ್ಯಾನ್, ಮತ್ತೊಂದು ಕಡೆ ಕ್ರಾಂತಿ ಸಿನಿಮಾ. ಇದೆಲ್ಲದರ ನಡುವೆ ನಿವೃತ್ತಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ??

ಅವರು ನಮ್ಮ ಪ್ರೊಫೆಸರ್ ಅನ್ನು ಮೀಟ್ ಮಾಡಿ, ಅವರ ಜೊತೆ ಮಾತನಾಡಿದರು, ನಮ್ಮ ಪ್ರೊಫೆಸರ್ ನನಗೆ ಇದು ಒಳ್ಳೆಯ ಅವಕಾಶ ಟ್ರೈ ಮಾಡು ಅಂತ ಹೇಳಿದ್ರು, ಅವರ ಮಾತಿಗೋಸ್ಕರ ನಾನು ಒಪ್ಪಿಕೊಂಡೆ. ನನಗೆ ಆಕ್ಟಿಂಗ್ ಬರಲ್ಲ ಅಂತ ಹೇಳಿದೆ, ಕ್ಯಾಶುವಲ್ ಆಗ ಮಾತನಾಡಿದರೆ ಸಾಕು ಅಂತ ಅಂದ್ರು, ನನ್ನ ಜೊತೆಗೆ ಹಾಗೆ ಪ್ರಶ್ನೆ ಕೇಳಿದ್ರು, ಕ್ಯಾಮೆರಾ ಇಟ್ಟಿದ್ದರು, ನಾನು ಮಾತನಾಡಿದೆ ಅವರಿಗೆ ಅದು ಇಷ್ಟವಾಯಿತು. ಆ ರೀತಿ ಸಿನಿಮಾ ಶುರುವಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತು..” ಎಂದಿದ್ದಾರೆ ರಶ್ಮಿಕಾ. ಇಲ್ಲಿ ತಮಗೆ ಅವಕಾಶ ಕೊಟ್ಟ ಪ್ರೊಡಕ್ಷನ್ ಹೌಸ್ ಹೆಸರು ಹೇಳಲು, ಅಥವಾ ನಿರ್ದೇಶಕ ಹಾಗು ನಟನ ಹೆಸರು ಹೇಳೋದಕ್ಕೆ ರಶ್ಮಿಕಾ ಅವರು ಹಿಂಜರಿದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಲೇ ಈಗ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇಕು ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Rashmika Mandanna: ರಶ್ಮಿಕಾ ಮಂದಣ್ಣ ರವರ ಬ್ಯಾನ್ ಕುರಿತು ಹಾರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಹಾಕಿದ ಕನ್ನಡ ಚಲನಚಿತ್ರ ಅಧ್ಯಕ್ಷ ಹೇಳಿದ್ದೇನು ಗೊತ್ತೇ??