ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಅಧಿಪುರುಷ್ ಚಿತ್ರಕ್ಕಿಂತ ಬಹಳ ಅದ್ಭುತವಾಗಿ ಮೂಡಿ ಬಂದಿರುವ ಹನುಮಾನ್ ಚಿತ್ರದ ಬಜೆಟ್ ಎಷ್ಟು ಗೊತ್ತೇ? ಹೇಗಿದೆ ಗೊತ್ತೇ ಟ್ರೈಲರ್?

Kannada News: ಅಧಿಪುರುಷ್ ಚಿತ್ರಕ್ಕಿಂತ ಬಹಳ ಅದ್ಭುತವಾಗಿ ಮೂಡಿ ಬಂದಿರುವ ಹನುಮಾನ್ ಚಿತ್ರದ ಬಜೆಟ್ ಎಷ್ಟು ಗೊತ್ತೇ? ಹೇಗಿದೆ ಗೊತ್ತೇ ಟ್ರೈಲರ್?

72

Kannada News: ಬಾಹುಬಲಿ (Bahubali) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ (Prabhas) ಅವರ ಮುಂದಿನ ಸಿನಿಮಾ ಆಧಿಪುರುಷ್ (Adipurush), ಇದು ರಾಮಾಯಣದ ಭಾಗವಾಗಿದ್ದು, ಪ್ರಭಾಸ್ ಅವರು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ಟಾಲಿವುಡ್ ಇಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹನುಮಾನ್ (Hanuman) ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ತೇಜ ಸಜ್ಜ (Teja Sajja) ಅವರು ನಾಯಕನಾಗಿ ನಟಿಸಿದ್ದು, ಇದು ಭಾರತದ ಮೊಟ್ಟ ಮೊದಲ ಸೂಪರ್ ಹೀರೋ, ಹನುಮಂತನ ಕಥೆಯನ್ನು ತಿಳಿಸುವ ಸಿನಿಮಾ ಆಗಿದೆ. ಈ ಸಿನಿಮಾ ಟೀಸರ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ..

Follow us on Google News

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಹನುಮಾನ್ ಟೀಸರ್ ಬಿಡುಗರೆ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆಧಿಪುರುಷ್ ಸಿನಿಮಾವನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. 16 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಹನುಮಾನ್, ಆಧಿಪುರುಷ್ ಗಿಂತ ಚೆನ್ನಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೆ ಪ್ರಭಾಸ್ ಅವರ ಅಭಿಮಾನಿಗಳು ಇದನ್ನು ಒಪ್ಪದೆ, ಎರಡು ಸಿನಿಮಾಗಳಲ್ಲಿ ಇರುವ ವ್ಯತ್ಯಾಸಗಳನ್ನು ತಿಳಿಸಿದ್ದಾರೆ, ಹನುಮಾನ್ ಸಿನಿಮಾ 16 ಕೋಟಿ ಬಜೆಟ್ ನಲ್ಲಿ, ಆಧಿಪುರುಷ್ 400 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ.. ಹನುಮಾನ್ ನಲ್ಲಿ ಹಿಂದಿನ ಜಲಪಾತ, ಗುಹೆಗಳು ಮತ್ತು ಇನ್ನು ಹಲವು ವಿಚಾರಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ.. ಇದನ್ನು ಓದಿ.. Kannada Astrology: ಎಲ್ಲರಿಗೂ ಕರ್ಮದ ಫಲ ನೀಡಿ ಕಷ್ಟಗಳನ್ನು ನೀಡುವ ಶನಿ ದೇವ ಇವರಿಗೆ ಮಾತ್ರ ಕಾಡುವುದಿಲ್ಲ. ಯಾವ ರಾಶಿ ಜನರಿಗೆ ಗೊತ್ತೇ??

ಆದರೆ ಆದಿಪುರುಷ್ ಸಿನಿಮಾದಲ್ಲಿ ತ್ರೇತಾಯುಗವನ್ನು ತೋರಿಸಲಾಗಿದ್ದು ಹೆಚ್ಚಾಗಿ ಲೈವ್ ಆಕ್ಷನ್ ಇದೆ ಎಂದಿದ್ದಾರೆ ಅಭಿಮಾನಿಗಳು.ಆದಿಪುರುಷ್ ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಕೆ ಹೆಚ್ಚಿದೆ, ಹನುಮಾನ್ ನಲ್ಲಿ ಗ್ರಾಫಿಕ್ಸ್ ಹೆಚ್ಚಾಗಿ ಬೇಕಾಗಿಲ್ಲ, ಹಾಗಾಗಿ ಸಿನಿಮಾಗಳ ಬಜೆಟ್ ನಲ್ಲಿ ವ್ಯತ್ಯಾಸ ಇದೆ, ಈ ಎರಡು ಸಿನಿಮಾಗಳನ್ನು ಹೋಲಿಕೆ ಮಾಡಬಾರದು. ಆದಿಪುರುಷ್ ಸಂಪೂರ್ಣ ಐತಿಹಾಸಿಕ ಸಿನಿಮಾ ಇಲ್ಲಿ ಎಲ್ಲವನ್ನು ವಿಶೇಷವಾಗಿ ತೋರಿಸಲಾಗಿದೆ, ಆದರೆ ಹನುಮಾನ್ ಸಿನಿಮಾದಲ್ಲಿ ಅದರ ಅಗತ್ಯವಿಲ್ಲ, ಹನುಮಾನ್ ಅನ್ನು ಆಧುನಿಕವಾಗಿ ತೋರಿಸಲಾಗಿದೆ ಎಂದು ಅಭಿಮಾನಿಗಳು ಆದಿಪುರುಷ್ ಸಿನಿಮಾವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ, ಟ್ರೋಲ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಇದನ್ನು ಓದಿ.. Cricket News: ನೇರವಾಗಿ ಜಡೇಜಾ ರವರನ್ನು ಧೋನಿ ರವರು ಮೋದಿ ಬಳಿ ಕರೆದುಕೊಂಡು ಹೋಗಿ ಹೇಳಿದ್ದು ಏನು ಗೊತ್ತೇ?? ಧೋನಿ ರವರು ಮೋದಿ ಬಳಿ ಹೇಳಿದ್ದೇನು ಗೊತ್ತೇ?