ಭಾರತ ತಂಡ ಅದೊಂದು ಬದಲಾವಣೆ ಮಾಡಿದರೆ ಖಂಡಿತ ಏಷ್ಯಾ ಕಪ್ ನಮ್ಮದೇ. ಯಾರು ಹೊರ ಹೋಗಿ ಯಾರು ತಂಡ ಸೇರಿಕೊಳ್ಳಬೇಕು ಗೊತ್ತಾ??
ಭಾರತ ತಂಡ ಅದೊಂದು ಬದಲಾವಣೆ ಮಾಡಿದರೆ ಖಂಡಿತ ಏಷ್ಯಾ ಕಪ್ ನಮ್ಮದೇ. ಯಾರು ಹೊರ ಹೋಗಿ ಯಾರು ತಂಡ ಸೇರಿಕೊಳ್ಳಬೇಕು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಸೋಲನ್ನು ಕಂಡ ನಂತರ ಭಾರತದ ಹನ್ನೊಂದರ ಬಳಗದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಸಂಭಾವ್ಯ ಭಾರತ ಕ್ರಿಕೆಟ್ ತಂಡವನ್ನು ಹಲವಾರು ಕ್ರಿಕೆಟ್ ಪಂಡಿತರು ಘೋಷಿಸಿದ್ದು ಬಹುತೇಕ ಪಂಡಿತರು ಈ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದ್ದಾರೆ. ಕೊನೆಗೂ ಎಚ್ಚೆತ್ತುಕೊಳ್ಳುತ್ತಿದೆ ಭಾರತ, ಪಾಕ್ ವಿರುದ್ಧ ಸೋಲಿನ ಬಳಿಕ ಮಹತ್ವದ ಬದಲಾವಣೆ ಫಿಕ್ಸ್: ಹೊರಹೋಗುವುದು ಯಾರು ಗೊತ್ತೇ?? ಖಡಕ್ ಆಟಗಾರ ಎಂಟ್ರಿ ಖಚಿತ.
![](http://karunaadavaani.com/wp-content/uploads/2022/09/indian-cricket-team-kannnada-news-5-1024x530.jpg)
ಭಾರತ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ತಂಡದಲ್ಲಿ ಇದೊಂದು ಬದಲಾವಣೆ ನಡೆದರೆ ಖಂಡಿತ ಪಂದ್ಯಗಳನ್ನು ಕೂಡ ಗೆಲ್ಲಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಬೋಲಿಂಗ್ ನಲ್ಲಿ ಹಾಗೂ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ಭಾರತಕ್ಕೆ ಕೆಲವೊಂದು ಆಟಗಾರರು ತಲೆ ನೋವಾಗಿ ಪರಿಣಮಿಸಿದ್ದಾರೆ.
ಅದರಲ್ಲಿಯೂ ಹಲವಾರು ಪಂದ್ಯಗಳಿಗೆ ಒಮ್ಮೆ ಉತ್ತಮ ಪ್ರದರ್ಶನ ನೀಡಿ ಉಳಿದ ಎಲ್ಲಾ ಪಂದ್ಯಗಳಲ್ಲಿ ಬಹಳ ಬೇಜಾಬ್ದಾರಿತನದ ಆಟವಾಡುವ ರಿಷಬ್ ಪಂತ್ ಅವರ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆತ ಒಬ್ಬ ಅದ್ಭುತ ಆಟಗಾರ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಬೇಜವಾಬ್ದಾರಿತನ ತೋರುವುದು ಆತನಿಗೆ ಅಭ್ಯಾಸವಾಗಿ ಬಿಟ್ಟಿದೆ.
![](http://karunaadavaani.com/wp-content/uploads/2022/09/rohit-rishab-1-1024x508.jpg)
ಅದೇ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೇಜವಾಬ್ದಾರಿ ಆಟವಾಡಿ ಔಟಾದ ಕಾರಣ ರೋಹಿತ್ ಶರ್ಮ ರವರು ಪಂದ್ಯ ಮುಗಿಯುವ ಮುನ್ನವೇ ಡ್ರೆಸ್ಸಿಂಗ್ ರೂಮ್ ಗೆ ಹೋಗಿ ಕ್ಲಾಸ್ ತೆಗೆದುಕೊಂಡಿದ್ದರು. ಹೀಗಿರುವಾಗ ಮುಂದಿನ ಪಂದ್ಯಗಳಲ್ಲಿ ರಿಷಬ್ ಪಂತ್ ರವರಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನ.
ಯಾಕೆಂದರೆ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ ಅನ್ನು ಶತಾಯಗತಾಯ ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ, ಇನ್ನುಳಿದಂತೆ ರಿಷಬ್ ಪಂತ್ ರವರ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ರವರು (ಇದನ್ನು ಓದಿ. ಕೊನೆಗೂ ಸಿಕ್ತು ಕಾರಣ: ರೋಹಿತ್ ಶರ್ಮ ಫಾರ್ಮ್ ನಲ್ಲಿ ಇರುವ ದಿನೇಶ್ ರವರನ್ನು ಕೈ ಬಿಟ್ಟಿದ್ದು ಯಾಕಂತೆ ಗೊತ್ತೇ??) ಸೂಕ್ತ ಆಯ್ಕೆಯಾಗಿದ್ದು ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡಿದ ಮೇಲೆ ದೀಪಕ್ ಹೂಡಾ ರವರು ಬ್ಯಾಟಿಂಗ್ ಮಾಡಿದರೇ ಖಂಡಿತ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಹಾರ್ಥಿಕ್ ಪಾಂಡ್ಯ ರವರು ಉತ್ತಮ ಫೀನಿಷರುಗಳಾಗಿ ಕಾರ್ಯ ನಿರ್ವಹಿಸಿ ಪಂದ್ಯವನ್ನು ಗೆಲ್ಲಿಸಿ ಕೊಡುವ ಸಾಮರ್ಥ್ಯವಿದೆ.
![](http://karunaadavaani.com/wp-content/uploads/2022/06/Rishab-pant-1024x508.jpg)
ಅದೇ ಕಾರಣಕ್ಕಾಗಿ ದೀಪಕ್ ಹೂಡಾ ರವರ ಬ್ಯಾಟಿಂಗ್ ಕ್ರಮಕಾ ಬದಲಾವಣೆ ಮಾಡಿ ರಿಷಬ್ ಪಂತ್ ಅವರ ಬದಲು ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪ್ ಆಗಿ ಆಯ್ಕೆ ಮಾಡಿದ್ದರೇ ಖಂಡಿತ ಭಾರತ ತಂಡ ಗೆಲ್ಲುವುದು ಬಹುತೇಕ ಖಚಿತ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಒಟ್ಟಾರೆಯಾಗಿ ತಂಡ ಹೀಗಿರಬೇಕು: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.