ಶಿವಣ್ಣನ ಮುಂದೆ ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು. ಶಿವಣ್ಣ ಮನಸ್ಸು ಮಾಡಿದರೆ ವಿನೋದ್ ರಾಜ್ ರವರ ಜೀವನವೇ ಬದಲು; ಅಭಿಮಾನಿಗಳ ಬೇಡಿಕೆ ಏನು ಗೊತ್ತೆ??

ಶಿವಣ್ಣನ ಮುಂದೆ ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು. ಶಿವಣ್ಣ ಮನಸ್ಸು ಮಾಡಿದರೆ ವಿನೋದ್ ರಾಜ್ ರವರ ಜೀವನವೇ ಬದಲು; ಅಭಿಮಾನಿಗಳ ಬೇಡಿಕೆ ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರುನಾಡ ಚಕ್ರವರ್ತಿ ಶಿವಣ್ಣನವರು ಇಂದಿಗೂ ಕೂಡ ವಯಸ್ಸು 59 ಆದರೂ ಕೂಡ 25ರ ಹರೆಯದ ಯುವಕರಂತೆ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಯಾವುದೇ ಪ್ರೀತಿಯ ನಾಯಕನ ಪಾತ್ರವನ್ನು ನೀಡಲಿ ಶಿವಣ್ಣ ಯುವಕರನ್ನು ಕೂಡ ನಾಚಿಸುವಂತೆ ಸಂಪೂರ್ಣ ಪರಿಪಕ್ವವಾಗಿ ಆ ಪಾತ್ರಕ್ಕೆ ನ್ಯಾಯವನ್ನು ನೀಡುತ್ತಾರೆ. ಅದಕ್ಕಾಗಿಯೇ ಶಿವಣ್ಣನವರನ್ನು ಕರುನಾಡ ಚಕ್ರವರ್ತಿ ಎನ್ನುವುದಾಗಿ ಕರೆಯುವುದು. ಅಭಿಮಾನಿಗಳ ಪಾಲಿಗೆ ಲೀಡರ್ ಆಗಿರೋದು.

ಇನ್ನು ಶಿವಣ್ಣ ಈಗಾಗಲೇ 125 ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ನೆಚ್ಚಿನ ನಾಯಕ ನಟರಾಗಿ ಕಳೆದ 35 ವರ್ಷಗಳಿಂದಲೂ ಕೂಡ ಬೆಳ್ಳಿ ತೆರೆಯ ಮೇಲೆ ತಮ್ಮ ನಟನೆ ಹಾಗೂ ನೃತ್ಯ ಸಾಹಸ ದೃಶ್ಯಗಳ ಪರ್ಫಾರ್ಮೆನ್ಸ್ ನೀಡುತ್ತಲೆ ಬಂದಿದ್ದಾರೆ. ಮೂರು ತಲೆಮಾರನ್ನು ಕನ್ನಡ ಚಿತ್ರರಂಗದಲ್ಲಿ ನೋಡಿರುವ ಸದ್ಯದ ಮಟ್ಟಿಗಿನ ಟ್ರೆಂಡಿಂಗ್ ಸ್ಟಾರ್ ಎಂದರೆ ಅದು ಶಿವಣ್ಣ ಮಾತ್ರ. ತಮ್ಮ ತಂದೆಯ ಕಾಲದಲ್ಲಿ ಗೆದ್ದು ಬಂದಂತಹ ಹೆಮ್ಮೆಯ ನಟ ಎನ್ನುವುದು ನಾವೆಲ್ಲರೂ ಒಪ್ಪಿಕೊಳ್ಳ ಬೇಕಾಗಿರುವಂತಹ ಅಂಶ. ಇನ್ನು ಶಿವಣ್ಣ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ.

ಹಲವಾರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಕೂಡ ಶಿವಣ್ಣನವರು ಈಗಾಗಲೇ ಹೋಗಿದ್ದಾರೆ. ಆದರೆ ಈ ಬಾರಿ ಕರುನಾಡ ಚಕ್ರವರ್ತಿ ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಮುಖ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕೇವಲ ಸಿನಿಮಾಗಳಲ್ಲಿ ಮಾತ್ರ ಶಿವಣ್ಣನವರನ್ನು ಕಾಣಲು ಸಾಧ್ಯವಾಗುತ್ತಿದ್ದ ಅಭಿಮಾನಿಗಳಿಗೆ ಇದು ಮತ್ತಷ್ಟು ಸಂತೋಷವನ್ನು ನೀಡಿದೆ. ಆದರೆ ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಸಿನಿಮಾ ಅಭಿಮಾನಿಗಳು ಮತ್ತೊಂದು ಕೋರಿಕೆಯನ್ನು ಈಗಾಗಲೇ ಇಟ್ಟಿದ್ದಾರೆ.

ಅದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಖ್ಯಾತ ಹಿರಿಯ ನಟಿ ಲೀಲಾವತಿಯವರ ಮಗನಾಗಿರುವ ನಟ ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಐಕಾನ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಮೈಕಲ್ ಜಾಕ್ಸನ್ ರವರ ಹಾಗೆ ಡ್ಯಾನ್ಸ್ ಮಾಡುತ್ತಿದ್ದಾರೆ ವಿನೋದ್ ರಾಜ್ ರವರು ಪ್ರತಿಯೊಬ್ಬರ ಫೇವರಿಟ್ ಆಗಿದ್ದರು. ಅವರನ್ನು ಹಲವಾರು ಸಮಯಗಳಿಂದಲೂ ಕೂಡ ಕನ್ನಡ ಪ್ರೇಕ್ಷಕರು ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ವಿನೋದ್ ರಾಜ್ ರವರನ್ನು ತೀರ್ಪುಗಾರರಾಗಿ ನೋಡಬೇಕು ಎನ್ನುವುದಾಗಿ ಹಲವಾರು ಸಮಯದಿಂದಲೂ ಕೂಡ ಬೇಡಿಕೆಯನ್ನು ಇಟ್ಟುಕೊಂಡು ಬಂದಿದ್ದಾರೆ.

ಹೀಗಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ವಿನೋದ್ ರಾಜ್ ರವರನ್ನು ಕೂಡ ತೀರ್ಪುಗಾರರ ಸ್ಥಾನದಲ್ಲಿ ಕರೆತರಬೇಕು ಎನ್ನುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣನವರಿಗೆ ಅಭಿಮಾನಿಗಳು ಕೋರಿಕೆಯನ್ನು ಇಟ್ಟಿದ್ದಾರೆ. ವಿನೋದ್ ರಾಜ್ ರವರನ್ನು ಶಿವಣ್ಣ ಕಾರ್ಯಕರ್ತರ ಖಂಡಿತವಾಗಿ ಅವರ ಜೀವನವೇ ಬದಲಾಗಬಹುದು ಮಾತ್ರವಲ್ಲದೆ ಕಾರ್ಯಕ್ರಮಕ್ಕೆ ಒಳ್ಳೆಯ ಟಿಆರ್ಪಿ ಕೂಡ ಬರುತ್ತದೆ. ಹೀಗಾಗಿ ಇದೇ ತರದ ಹತ್ತು ಹಲವಾರು ಕಾರಣಗಳು ಇದೆ. ಇದಕ್ಕಾಗಿಯೇ ವಿನೋದ್ ರಾಜ್ ರವರನ್ನು ಈ ಸ್ಥಾನಕ್ಕೆ ಕರೆತಂದರೇ ಪ್ರತಿಯೊಬ್ಬ ಕನ್ನಡಿಗನಿಗೂ ಕೂಡ ಈ ಕಾರ್ಯಕ್ರಮವನ್ನು ನೋಡಬೇಕೆನ್ನುವ ಹಂಬಲ ಹೆಚ್ಚಾಗುತ್ತದೆ.

ಈ ಕಾರ್ಯವನ್ನು ಶಿವಣ್ಣ ಬಿಟ್ಟರೆ ಬೇರೆ ಯಾರೂ ಕೂಡ ಮಾಡಲು ಸಾಧ್ಯವಿಲ್ಲ ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಭಿಯಾನವನ್ನು ಕೈಗೊಂಡಿದ್ದಾರೆ. ಈ ವಿಚಾರದ ಕುರಿತಂತೆ ವಾಹಿನಿ ಅಥವಾ ಶಿವಣ್ಣ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮವನ್ನು ಕೈಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.