ಒಂದು ಕಡೆ ಕಾಶ್ಮೀರಿ ಫೈಲ್ಸ್ ದೇಶದೆಲ್ಲೆಡೆ ಭರ್ಜರಿ ಸದ್ದು ಮಾಡುತ್ತಿರುವ ಬಾಲಿವುಡ್ ನಲ್ಲಿ ಮತ್ತೊಂದು ಸುನಾಮಿ ಎಬ್ಬಿಸಲು ಮುಂದೆ ಬಂದ ಚಿತ್ರ. ಯಾವುದು ಗೊತ್ತೇ??

ಒಂದು ಕಡೆ ಕಾಶ್ಮೀರಿ ಫೈಲ್ಸ್ ದೇಶದೆಲ್ಲೆಡೆ ಭರ್ಜರಿ ಸದ್ದು ಮಾಡುತ್ತಿರುವ ಬಾಲಿವುಡ್ ನಲ್ಲಿ ಮತ್ತೊಂದು ಸುನಾಮಿ ಎಬ್ಬಿಸಲು ಮುಂದೆ ಬಂದ ಚಿತ್ರ. ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಾಶ್ಮೀರಿ ಫೈಲ್ಸ್ ಸದ್ಯ ಭಾರತವನ್ನೇ ಗಮನಸೆಳೆಯುತ್ತಿರುವ ಚಿತ್ರ. ಹಲವಾರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಚಿತ್ರದ ಮೂಲಕ ತೋರಿಸಿರುವ ಚಿತ್ರ ತಂಡದ ಪ್ರಯತ್ನಕ್ಕೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜನತೆಯಿಂದ ಸಂಪೂರ್ಣ ಬೆಂಬಲ ದೊರೆತಿದ್ದು, ಸರ್ಕಾರಗಳು ಸಹ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.

ಈ ಚಿತ್ರದ ಯಶಸ್ಸು ಬಾಲಿವುಡ್ ಮಂದಿಗೆ ಹೊಸ ಹುರುಪು ನೀಡಿದ್ದು, ಕಾಶ್ಮೀರಿ ಫೈಲ್ಸ್ ರೀತಿ ಸತ್ಯ ಕತೆಗಳ ಆಧಾರಿತ ಚಿತ್ರಗಳನ್ನು ನಿರ್ಮಿಸಲು ಮುಂದಾಗಿವೆ. ಈಗ ಇಂತಹದ್ದೇ ಚಿತ್ರ ನಿರ್ಮಿಸಲು ಬಾಲಿವುಡ್ ನ ಖ್ಯಾತ ನಿರ್ದೇಶಕ ಮಹೇಶ್ ಮಂಜ್ರೇಕರ್ ಮುಂದೆ ಬಂದಿದ್ದಾರೆ. ಈ ಭಾರಿ ಅವರು ಆರಿಸಿಕೊಂಡಿರುವ ಕಥಾ ವಸ್ತು, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು. ಹೌದು ಸ್ನೇಹಿತರೇ ಸ್ವಾತಂತ್ರ್ಯ ಇತಿಹಾಸದಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿರುವ ಸಾವರ್ಕರ್ ಬಯೋಪಿಕ್ ಸಿನಿಮಾ ಮಾಡಲು ಮಹೇಶ್ ಮಂಜ್ರೇಕರ್ ನಿರ್ಧರಿಸಿದ್ದಾರೆ.

ಈ ಮೂಲಕ ಮತ್ತೊಮ್ಮೆ ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಲು ಚಿತ್ರತಂಡವೊಂದು ಮುಂದಾಗಿದೆ. ವಿಶೇಷ ಎಂದರೆ ಈ ರೀತಿಯ ಚಿತ್ರಗಳನ್ನು ಜನರೇ ಪ್ರಚಾರ ಮಾಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಇದೀಗ ಕಾಶ್ಮೀರಿ ಫೈಲ್ಸ್ ಇಡೀ ದೇಶದಲ್ಲ ಕೋಟಿ ಕೋಟಿ ಹಣ ಬಾಚುತ್ತಿದೆ. ಇನ್ನು ವೀರ ಸಾವರ್ಕರ್ ಪಾತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ರಣದೀಪ್ ಹೂಡಾ ರವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಹೂಡಾ ಸರಬ್ಜೀತ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನೈಜ ಅಭಿನಯದಿಂದ ಮನೆಮಾತಾಗಿದ್ದರು. ಈ ಭಾರಿ ವೀರ ಸಾವರ್ಕರ್ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.