ಕನ್ನಡದ ಕೆಲವೊಂದು ನಟರೇ ಅಪ್ಪು ಜನ್ಮದಿನವನ್ನು ಮರೆತಿರುವಾಗ ಅಂದು ಆಶ್ರಮದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದ ವಿಶಾಲ್ ಮಾಡಿದ್ದೇನು ಗೊತ್ತೇ??

ಕನ್ನಡದ ಕೆಲವೊಂದು ನಟರೇ ಅಪ್ಪು ಜನ್ಮದಿನವನ್ನು ಮರೆತಿರುವಾಗ ಅಂದು ಆಶ್ರಮದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದ ವಿಶಾಲ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ತಾವು ಬದುಕಿದ್ದಾಗ ಎಷ್ಟೆಲ್ಲಾ ಜನ ಸೇವೆಗಳನ್ನು ಮಾಡಿದ್ದಾರೆ ಎನ್ನುವುದು ಅವರ ಮರಣದ ನಂತರ ಎಲ್ಲರಿಗೂ ಕೂಡ ತಿಳಿದಿದೆ. ಇಷ್ಟೆಲ್ಲಾ ದೊಡ್ಡಮಟ್ಟದ ಕಾರ್ಯಗಳಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರು ಕೂಡ ಇದರ ಕುರಿತಂತೆ ಒಬ್ಬರಲ್ಲೂ ಕೂಡ ಹೇಳಿಕೊಂಡಿರಲಿಲ್ಲ.

ಎಷ್ಟರಮಟ್ಟಿಗೆ ಎಂದರೆ ಅಪ್ಪು ಅವರ ಮರಣದ ನಂತರವೇ ಅವರ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣನವರಿಗೆ ಅವರ ಒಳ್ಳೆಯ ಕಾರ್ಯಗಳ ಕುರಿತಂತೆ ಗೊತ್ತಾದದ್ದು. ಶಕ್ತಿ ದಮದ ಅನಾಥ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದು ರಿಂದ ಹಿಡಿದು ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಸಹಾಯ ಕೇಳಿಕೊಂಡು ಬಂದವರಿಗೆ ಕ್ಷಿಪ್ರವಾಗಿ ಸಹಾಯ ಮಾಡುವುದು ಹೀಗೆ ಹಲವಾರು ಕೆಲಸಗಳಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕೇವಲ ಇಷ್ಟೇ ಮಾತ್ರವಲ್ಲ ತಮ್ಮ ಗಾಯನದಿಂದ ಬಂದಂತಹ ಹಣವನ್ನು ಸಂಪೂರ್ಣವಾಗಿ ವೃದ್ದಾಶ್ರಮ ಹಾಗೂ ಅನಾಥಾಶ್ರಮಗಳಿಗೆ ನೀಡುತ್ತಿದ್ದರು. ತಮ್ಮ ತಂದೆಯಂತೆ ಸರ್ಕಾರಿ ಜಾಹೀರಾತುಗಳಿಗಾಗಿ ಕೂಡ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುತ್ತಿರಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮರಣ ಹೊಂದಿದ ಸಂದರ್ಭದಲ್ಲಿ ನಿಮಗೆ ನೆನಪಿರಬಹುದು ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ರವರು ಪುನೀತ್ ರಾಜಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಶಕ್ತಿಧಾಮ ಆಶ್ರಮದ ಹೆಣ್ಣುಮಕ್ಕಳ ಜವಾಬ್ದಾರಿ ನನ್ನದು ಎಂಬುದಾಗಿ ಹೇಳಿದ್ದರು.

ಇದಾದ ನಂತರ ಈ ಕುರಿತಂತೆ ಶಿವಣ್ಣನವರಲ್ಲಿ ಕೇಳಿದಾಗ ಸದ್ಯಕ್ಕೆ ಬೇಡ ಅಗತ್ಯ ಬಂದಾಗ ಹೇಳುತ್ತೇವೆ ಎಂಬುದಾಗಿ ವಿಶಾಲ್ ಅವರಿಗೆ ಹೇಳಿದ್ದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಸದ್ಯಕ್ಕೆ ಶಕ್ತಿಧಾಮ ದ ಜವಾಬ್ದಾರಿ ಶಿವಣ್ಣ ಹಾಗೂ ಅವರ ಪತ್ನಿಯಾಗಿರುವ ಗೀತಕ್ಕನ ಅವರ ಮೇಲಿದೆ. ಪುನೀತ್ ರಾಜಕುಮಾರ್ ರವರ ನಂತರ ಶಕ್ತಿ ಧಾಮವನ್ನು ಅತ್ಯಂತ ಜವಾಬ್ದಾರಿಯಾಗಿ ಹಾಗೂ ನಾಜೂಕಾಗಿ ಶಿವಣ್ಣ ದಂಪತಿಗಳು ನೋಡುತ್ತಿರುವುದು ಈಗಾಗಲೇ ಹಲವಾರು ವಿಡಿಯೋ ಫೋಟೋಗಳಲ್ಲಿ ನೀವು ನೋಡಿರುತ್ತೀರಿ.

ಆದರೆ ಈಗ ನಟ ವಿಶಾಲ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಪುನೀತ್ ರಾಜಕುಮಾರ್ ರವರನ್ನು ವಿಶಾಲ್ ರವರು ತಮ್ಮ ಅಣ್ಣನಂತೆ ಗೌರವ ಹಾಗೂ ಪ್ರೀತಿಗಳನ್ನು ನೀಡುತ್ತಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಉತ್ತಮ ಸಮಯಗಳನ್ನು ಕೂಡ ಕಳೆಯುತ್ತಿದ್ದರು. ಇನ್ನು ಈ ಬಾರಿ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅವರ ನೆಚ್ಚಿನ ಆರಾಧ್ಯದೈವ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸುವುದನ್ನು ನೀವೆಲ್ಲ ನೋಡಿರುತ್ತೀರಿ.

ಆದರೆ ಒಬ್ಬ ಸೆಲೆಬ್ರಿಟಿಯಾಗಿ ನಟ ವಿಶಾಲ್ ರವರು ಕೂಡ ಚೆನ್ನೈನ ಸುತ್ತಮುತ್ತಲಿನ ವೃದ್ಧಾಶ್ರಮಗಳಲ್ಲಿ ಸಿಹಿ ಹಾಗೂ ಊಟವನ್ನು ಹಂಚುವ ಮೂಲಕ ಆಚರಿಸಿರುವುದು ನಿಜಕ್ಕೂ ಕೂಡ ಎಲ್ಲರ ಪ್ರಶಂಸೆಗೆ ಒಳಗಾಗಿದೆ. ಕೆಲವರು ಕೇವಲ ಪ್ರಚಾರಕ್ಕಾಗಿ ಹೇಳಿ ಮರೆತುಬಿಡುತ್ತಾರೆ. ಆದರೆ ನಟ ವಿಶಾಲ್ ರವರು ಪುನೀತ್ ರಾಜಕುಮಾರ್ ಅವರು ಮರಣಹೊಂದಿ ಆರು ತಿಂಗಳು ಕಳೆದರೂ ಕೂಡ ಅವರ ನೆನಪಿನಲ್ಲಿ ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ನಮ್ಮ ಪ್ರೀತಿ ಹಾಗೂ ಗೌರವ ಗಳಿಗೆ ಅವರು ಅರ್ಹರಾಗಿದ್ದಾರೆ.

ಒಬ್ಬ ಸೆಲೆಬ್ರಿಟಿಯಾಗಿ ಒಬ್ಬ ನಟನಾಗಿ ಜನ್ಮದಿನಾಚರಣೆಯನ್ನು ಈ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿರುವ ನಟ ವಿಶಾಲ್ ರವರು ನಿಜಕ್ಕೂ ಹೃದಯದಿಂದ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಪ್ಪು ಅಭಿಮಾನಿಗಳು ಹಾಗೂ ಕನ್ನಡಿಗರು ಕೂಡ ವಿಶಾಲ್ ರವರು ಮಾಡಿರುವ ಈ ಕೆಲಸಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.