ಅಣ್ಣಾವ್ರೊಂದಿಗೆ ಅಂದಿನ ಕಾಲದ ಟಾಪ್ ನಟಿ ಶ್ರುತಿ ಅವರೇಕೆ ನಟಿಸಲಿಲ್ಲ ಗೊತ್ತೇ?? ಸ್ವತಃ ಶ್ರುತಿ ಅವರೇ ಕೊಟ್ಟ ಕಾರಣವೇನು ಗೊತ್ತಾ??

ಅಣ್ಣಾವ್ರ ಜೊತೆ ನಟಿಸಲು ಅವಕಾಶ ಇದ್ದರೂ ಕೂಡ ನಟಿಸಲು ಸಾಧ್ಯವಾಗಲಿಲ್ಲ ಎಂದ ಶ್ರುತಿ, ಇದರ ಹಿಂದಿನ ಅಸಲಿಯತ್ತು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಎಂದು ಬಂದಾಗ ನಟ ಸಾರ್ವಭೌಮ ಡಾ ರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಕರೆಯಲಾಗುತ್ತದೆ. ಅವರೊಂದಿಗೆ ನಟಿಸಬೇಕು ಎಂದು ತಾಮುಂದು ನಾಮುಂದು ಎಂದು ಹೇಳುವ ನಟ-ನಟಿಯರಿಗೆ ಕಡಿಮೆ ಇರಲಿಲ್ಲ. ರಾಜಕುಮಾರ್ ಅವರೊಂದಿಗೆ ನಡೆಸುವುದೇ ಅಂದಿನ ಕಾಲದಲ್ಲಿ ಕಲಾವಿದರ ಸೌಭಾಗ್ಯವಾಗಿತ್ತು.

ಈ ಸಂದರ್ಭದಲ್ಲಿ ಕೂಡ ಹಲವಾರು ನಟ-ನಟಿಯರಿಗೆ ಅವರ ಪ್ರತಿಭೆಯ ಆಧಾರದ ಮೇಲೆ ಸ್ವತಹ ಅಣ್ಣಾವ್ರೇ ಅವಕಾಶವನ್ನು ನೀಡಿ ತಮ್ಮ ಬ್ಯಾನರ್ ನಲ್ಲಿ ನಟಿಸುವ ಚಾನ್ಸ್ ಅನ್ನು ನೀಡುತ್ತಿದ್ದರು. ಇನ್ನು ಹಲವಾರು ಕಲಾವಿದರು ಅಣ್ಣಾವ್ರು ಅಂದಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಅಂಥವರಲ್ಲಿ ನಟಿ ಶ್ರುತಿ ಅವರು ಕೂಡ ಒಬ್ಬರು. ಇದಕ್ಕೆ ಕಾರಣ ಏನೆಂಬುದನ್ನು ಕೂಡ ನಟಿ ಶ್ರುತಿ ರವರೆ ಖುದ್ದಾಗಿ ಹೇಳಿದ್ದಾರೆ. ಹಾಗಿದ್ದರೆ ಇದರ ಹಿಂದಿನ ಕಾರಣ ಏನೆಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

90ರ ದಶಕದಲ್ಲಿ ನಟಿ ಶ್ರುತಿ ರವರು ಕನ್ನಡ ಚಿತ್ರರಂಗದಲ್ಲಿ ಚಾಲ್ತಿಗೆ ಬರುತ್ತಾರೆ. ಬಹುತೇಕ ಚಿತ್ರಗಳಲ್ಲಿ ಭಾವನಾತ್ಮಕ ಅಂದರೆ ಅಳುಮುಂಜಿ ಪಾತ್ರಗಳಲ್ಲೇ ಶೃತಿ ಅವರು ನಟಿಸಿ ಜನಪ್ರಿಯತೆಗೆ ಬರುತ್ತಾರೆ. ಸಾಹಸಸಿಂಹ ವಿಷ್ಣುವರ್ಧನ್ ರೆಬೆಲ್ ಸ್ಟಾರ್ ಅಂಬರೀಶ್ ರಾಮ್ ಕುಮಾರ್ ಕ್ರೇಜಿಸ್ಟಾರ್ ರವಿಚಂದ್ರನ್ ರಮೇಶ್ ಅರವಿಂದ್ ಹೀಗೆ ಹಲವಾರು ಸ್ಟಾರ್ ನಟರೊಂದಿಗೆ ಈಗಾಗಲೇ ಶ್ರುತಿ ರವರು ನಟಿಸಿದ್ದಾರೆ.

ಇಷ್ಟೊಂದು ಸಿನಿಮಾಗಳಲ್ಲಿ ಯಶಸ್ವಿ ನಾಯಕ ನಟಿಯಾಗಿ ಕಾಣಿಸಿಕೊಂಡರು ಕೂಡ ಅಂದಿನಿಂದ ಇಂದಿನವರೆಗೂ ಶೃತಿ ಅವರ ಮನಸ್ಸಿನಲ್ಲಿ ಇರುವ ಕೊರಗು ಏನೆಂದರೆ ರಾಜಕುಮಾರ್ ಅವರ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗದೆ ಇರುವುದು. ಆಲೆ ಕದಲ್ಲಿ ಹೇಳುವುದಕ್ಕೆ ಹೋಗುವುದಾದರೆ ಅಣ್ಣಾವ್ರ ಬ್ಯಾನರ್ ನಲ್ಲಿ ಮೂಡಿ ಬಂದಿರುವಂತಹ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾದಲ್ಲಿ ಶಿವಣ್ಣನವರ ತಂಗಿಯಾಗಿ ಸಿನಿಮಾರಂಗಕ್ಕೆ ಪ್ರವೇಶಿಸುತ್ತಾರೆ. ಇದಾದ ನಂತರ ಶ್ರುತಿ ರವರು ಸಿನಿಮಾರಂಗದಲ್ಲಿ ಬೆಳೆದು ಬಂದಂತಹ ರೀತಿ ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಅಣ್ಣಾವ್ರ ಆಶೀರ್ವಾದವೇ ನನ್ನನ್ನು ಚಿತ್ರರಂಗದಲ್ಲಿ ಬೆಳೆಯುವಂತೆ ಮಾಡಿತು ಎಂಬುದಾಗಿ ಕೂಡಾ ಆಗಾಗ ಹೇಳುತ್ತಾರೆ.

ಇನ್ನು ಶ್ರುತಿ ಅವರಿಗೆ ಅಣ್ಣಾವ್ರೊಂದಿಗೆ ನಟಿಸುವಂತಹ ಅವಕಾಶ ಇದ್ದರೂ ಕೂಡ ಅದನ್ನು ಗುರುತಿಸುವಲ್ಲಿ ಶ್ರುತಿ ರವರು ವಿಫಲರಾಗಿದ್ದರು. ಜೀವಮಾನದಲ್ಲಿ ಬಂದಂತಹ ಬಹುದೊಡ್ಡ ಸುವರ್ಣಾವಕಾಶವನ್ನು ಶೃತಿಯವರು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಶೃತಿಯವರ ದುಃಖಕ್ಕೆ ಕಾರಣವಾಗಿರುವ ಅಂಶ. ಹೌದು ಶ್ರುತಿ ಅವರಿಗೆ ಅಣ್ಣಾವ್ರು ನಟಿಸಿರುವ ಜೀವನಚೈತ್ರ ಸಿನಿಮಾದಲ್ಲಿ ಒಂದು ಅವಕಾಶವೂ ಕೂಡ ಹುಡುಕಿಕೊಂಡು ಬಂದಿತ್ತು. ಶೃತಿ ಅವರಿಗಾಗಿಯೇ ನಿರ್ದೇಶಕ ದೊರೆ ಭಗವಾನ್ ಅವರು ಒಂದು ಪಾತ್ರವನ್ನು ಕೂಡ ಬರೆದಿದ್ದರು. ಈ ಸಿನಿಮಾದಲ್ಲಿ ನಾಯಕಿಯ ಸರಿಸಮಾನವಾಗಿ ಇರುವಂತಹ ಪ್ರಮುಖ ಪಾತ್ರವನ್ನು ನಿರ್ವಹಿಸುವ ಅವಕಾಶ ಶ್ರುತಿ ಅವರನ್ನು ಹುಡುಕಿಕೊಂಡು ಬಂದಿತ್ತು.

ಆದರೆ ಅಂದಿನ ಕಾಲದಲ್ಲಿ ಶ್ರುತಿ ಅವರ ಬ್ಯುಸಿ ಶೆಡ್ಯೂಲ್ ನಲ್ಲಿ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಹೀಗಾಗಿ ಬಹುದೊಡ್ಡ ಅವಕಾಶವನ್ನು ಶ್ರುತಿ ರವರು ತಮಗೆ ಗೊತ್ತೋ ಗೊತ್ತಿಲ್ಲದಂತೆಯೇ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ನಟಿ ಶ್ರುತಿ ರವರ ಕಾಲ್ ಶೀಟ್ ಗಳನ್ನು ನೋಡಿಕೊಳ್ಳುತ್ತಿದ್ದುದು ಅವರ ತಂದೆ ತಾಯಿಯರು ಎನ್ನುವುದನ್ನು ಕೂಡ ಶ್ರುತಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ. ಅದೇ ಅವಕಾಶವನ್ನು ನಟಿ ಸುಧಾರಾಣಿ ಅವರು ಜೀವನ ಚೈತ್ರ ಸಿನಿಮಾದಲ್ಲಿ ಪಡೆದುಕೊಂಡರು ಎಂಬುದಾಗಿ ಕೂಡ ಹೇಳಲಾಗುತ್ತದೆ. ಅದೇನೇ ಇರಲಿ ಶ್ರುತಿ ರವರಿಗೆ ಇಂದಿಗೂ ಕೂಡ ಅಣ್ಣಾವ್ರ ಜೊತೆಗೆ ನಟಿಸದೇ ಇರೋದಕ್ಕೆ ನಾನೇ ಕಾರಣ ಎಂಬ ಬೇಸರವೂ ಕೂಡ ಕಾಡುತ್ತಿದೆ.