ವಿಜಯ್ ರಾಘವೇಂದ್ರ ರವರ ಬದಲು ಮತ್ತೊಬ್ಬರನ್ನು ತೀರ್ಪುದಾರನನ್ನಾಗಿ ಕರೆತಂದ ಝೀ ಕನ್ನಡ. ಆ ಟಾಪ್ ಕಲಾವಿದ ಯಾರು ಗೊತ್ತೇ??

ವಿಜಯ್ ರಾಘವೇಂದ್ರ ರವರ ಬದಲು ಮತ್ತೊಬ್ಬರನ್ನು ತೀರ್ಪುದಾರನನ್ನಾಗಿ ಕರೆತಂದ ಝೀ ಕನ್ನಡ. ಆ ಟಾಪ್ ಕಲಾವಿದ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ ಬರುತ್ತಿರುವ ಕಾರ್ಯಕ್ರಮಗಳು ಸಾಕಷ್ಟು ಇತ್ತೀಚಿನ ದಿನಗಳಲ್ಲಿ ವಿಭಿನ್ನವಾಗಿ ಮೂಡಿ ಬರುತ್ತಿದ್ದು ಪ್ರೇಕ್ಷಕರ ಸದಭಿರುಚಿಗೆ ತಕ್ಕಂತೆ ಮನರಂಜನೆಯನ್ನು ನೀಡುತ್ತಿವೆ. ಇನ್ನು ಸಿನಿಮಾ ಹಾಗೂ ಧಾರವಾಹಿ ಗಳಿಗಿಂತ ಹೆಚ್ಚಾಗಿ ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಕನ್ನಡ ಪ್ರೇಕ್ಷಕರು ಒಲವನ್ನು ತೋರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಾಹಿನಿಗಳು ಹೊಸ ಹೊಸ ಕಾರ್ಯಕ್ರಮಗಳನ್ನು ಕೂಡ ಪ್ರಸಾರ ಮಾಡುತ್ತಿವೆ.

ಇಂದು ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಕುರಿತಂತೆ. ಹೌದು ಗೆಳೆಯರೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಎನ್ನುವುದು ಮಕ್ಕಳ ಪ್ರತಿಭೆ ಹಾಗೂ ನಟನೆಯನ್ನು ಕನ್ನಡ ಪ್ರೇಕ್ಷಕರಿಗೆ ಪ್ರಸ್ತುತ ಪಡಿಸುವಂತಹ ಅಮೋಘವಾದ ಕಾರ್ಯಕ್ರಮ. ಇನ್ನು ಈ ಕಾರ್ಯಕ್ರಮದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ತೀರ್ಪುಗಾರರಾಗಿ ಮುಖ್ಯಮಂತ್ರಿ ಚಂದ್ರು ಬಹುಭಾಷಾ ತಾರೆ ಲಕ್ಷ್ಮಿ ಅಮ್ಮ ಹಾಗೂ ಅವರ ಜೊತೆಗೆ ನಟ ವಿಜಯ್ ರಾಘವೇಂದ್ರ ಕೂಡ ಇದ್ದರು.

ಆದರೆ ಈಗ ವಿಜಯ್ ರಾಘವೇಂದ್ರ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದಾಗಿ ಹೊಸ ತೀರ್ಪುಗಾರರನ್ನು ಹುಡುಕಲು ಜೀ ಕನ್ನಡ ವಾಹಿನಿ ನಿರ್ಧರಿಸಿದೆ. ಇನ್ನು ಈಗ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ನಿರೂಪಕರಾಗಿರುವ ಮಾಸ್ಟರ್ ಆನಂದ್ ಅವರೇ ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಕೂಡ ಹೊಸ ಸೀಸನ್ ಕಾರ್ಯನಿರ್ವಹಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಹಾಗೂ ಎಷ್ಟರಮಟ್ಟಿಗೆ ಸುಳ್ಳು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಡ್ರಾಮಾ ಜೂನಿಯರ್ಸ್ ಪ್ರಾರಂಭವಾಗಲಿದ್ದು ಕನ್ನಡ ಪ್ರೇಕ್ಷಕರು ಮಕ್ಕಳ ಪ್ರತಿಭೆಯನ್ನು ನೋಡಲು ಕಾತರರಾಗಿದ್ದಾರೆ.