ಮಳೆಬಿಲ್ಲೆ ಮಳೆಬಿಲ್ಲೆ ಖ್ಯಾತಿಯ ನಟಿ ಸಾಕ್ಷಿ ಶಿವಾನಂದ್ ಆ ಒಂದು ಘಟನೆಯಿಂದ ಇನ್ನು ಮದುವೆಯಾಗಿಲ್ಲ , ಯಾಕೆ ಗೊತ್ತೇ??

ಮಳೆಬಿಲ್ಲೆ ಮಳೆಬಿಲ್ಲೆ ಖ್ಯಾತಿಯ ನಟಿ ಸಾಕ್ಷಿ ಶಿವಾನಂದ್ ಆ ಒಂದು ಘಟನೆಯಿಂದ ಇನ್ನು ಮದುವೆಯಾಗಿಲ್ಲ , ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದಾನೊಂದು ಕಾಲದಲ್ಲಿ ಮಳೆಬಿಲ್ಲೆ ಮಳೆಬಿಲ್ಲೆ ಎಂಬ ಕನ್ನಡದ ಹಾಡು ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿತ್ತು. ಹೌದು ಕನ್ನಡ ಸೈನಿಕ ಸಿನಿಮಾದ ಕಾಡಾಗಿದ್ದ ಇದು ಸಾಕಷ್ಟು ಜನರ ಬಾಯಲ್ಲಿ ಇಂದಿಗೂ ಕೂಡ ಹರಿದಾಡುತ್ತದೆ. ಹೌದು ಇವರು ಮಳೆಬಿಲ್ಲೆ ಮಳೆಬಿಲ್ಲೆ ಹಾಡಿನಲ್ಲಿ ಮಳೆಯಲ್ಲಿ ನೆನೆದು ಹೆಜ್ಜೆ ಹಾಕಿದ್ದು ಇಂದಿಗೂ ಕೂಡ ಜನರ ಕಣ್ಣಿಗೆ ಕಟ್ಟಿದಂತಿದೆ. ಇನ್ನು ಇವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ಕೂಡ ಮಿಂಚಿದವರು. ಇವರು ಕನ್ನಡದ ‘ಗಲಾಟೆ ಅಳಿಯಂದ್ರು’ ಎಂಬ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಆದರೆ ಇವರಿಗೆ ಸೈನಿಕ ಸಿನಿಮಾ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಇನ್ನು ಸಾಕಷ್ಟು ಭಾಷೆಗಳಲ್ಲಿ ನಟಿಗಾಗಿ ಮಿಂಚಿದ ಇವರು ಇದೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಟಿ ಸಾಕ್ಷಿ ಶಿವಾನಂದ್ ಅವರು ಕನ್ನಡ ಚಿತ್ರರಂಗದಲ್ಲಿ ಗಲಾಟೆ ಅಳಿಯಂದ್ರು, ನಾನು ನಾನೇ, ತಂದೆಗೆ ತಕ್ಕ ಮಗ, ಸೈನಿಕ, ಕೋದಂಡರಾಮ, ಸೌಂದರ್ಯ, ಪರಮಶಿವ ಸೇರಿದಂತೆ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು 2014ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯಿಸಿರುವ ‘ಪರಮಶಿವ’ ಎಂಬ ಸಿನಿಮಾ ಸಾಕ್ಷಿ ಶಿವಾನಂದ ಅವರ ಕೊನೆಯ ಕನ್ನಡದ ಸಿನಿಮಾ ಆಗಿದೆ.

ಇನ್ನೊಬ್ಬರ ಭಾಷೆಗಳಲ್ಲಿ ಕೂಡ ಮಿಂಚಿದ ಇವರು ಶಿವರಾಜಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ರವಿಚಂದ್ರನ್, ಮಹೇಶ್ ಬಾಬು, ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಹಲವಾರು ಸ್ಟಾರ್ ನಟರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಸಾಕ್ಷಿ ಅವರು ಅಮೆರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರು.

ಇನ್ನು ಈ ಕೋರ್ಸ್ ಮಾಡುತ್ತಿರುವಾಗಲೇ ಸಾಗರ್ ಎಂಬುವವರ ಪರಿಚಯವಾಗಿ ಅವರೊಂದಿಗೆ ಸಹ ಜೀವನವನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಅವರ ವ್ಯವಹಾರಕ್ಕೆ ಆರ್ಥಿಕ ಸಹಾಯವನ್ನು ಕೂಡ ನೀಡಿದ್ದರು. ಆದರೆ ದಿನಕಳೆದಂತೆ ಸಾಗರ್ ತನ್ನ ನಲ್ಲ ತನ್ನ ಹಣವನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ತಿಳಿದ ಸಾಕ್ಷಿ ಅವರು ಆತನಿಂದ ದೂರವಾದರು. ಆದರೆ ಅಷ್ಟೊತ್ತಿಗಾಗಲೇ ಸಾಗರ್ ಸಾಕ್ಷಿ ಅವರಿಂದ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದ.

ಸಾಗರ್ ಎಂಬುವವನಿಂದ ಮೋ-ಸ ಹೋದ ಸಾಕ್ಷಿ ಶಿವಾನಂದ್ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಇನ್ನು ಮೂಲಗಳಿಂದ ತಿಳಿದು ಪ್ರಕಾರ ಅವರು ಅಮೆರಿಕದಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಏನೋ ಸಾಗರನಿಂದ ಮೋ-ಸ ಹೋದ ಸಾಕ್ಷಿ ಅವರು ಇದುವರೆಗೂ ಕೂಡ ಮದುವೆಯ ಬಗ್ಗೆ ಚಿಂತಿಸಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಅವರು ಮದುವೆಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಅವರಿಗೆ ಮುಂದಿನ ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬರಲಿ ಎಂದು ಹಾರೈಸೋಣ.