ನ್ಯಾಷನಲ್ ಸ್ಟಾರ್ ಆದರೂ ಕನ್ನಡವೇ ಮೊದಲ ಆದ್ಯತೆ ಎಂದು ನಿರೂಪಿಸಿದ ಯಶ್. ನಡೆದ್ದದೇನು ಗೊತ್ತೇ??

ನ್ಯಾಷನಲ್ ಸ್ಟಾರ್ ಆದರೂ ಕನ್ನಡವೇ ಮೊದಲ ಆದ್ಯತೆ ಎಂದು ನಿರೂಪಿಸಿದ ಯಶ್. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೀಗ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೇವಲ ಅವರ ಸಿನಿಮಾದ ಸುದ್ದಿ ಮಾತ್ರವಲ್ಲದೆ ಕನ್ನಡದ ಆಯ್ಕೆಯ ಕುರಿತು ಕೂಡ ಸುದ್ದಿ ಕೇಳಿ ಬಂದಿದೆ. ಇದೇನಪ್ಪಾ ಇದು ಕನ್ನಡದ ಆಯ್ಕೆ ಕುರಿತು ಯಶ್ ರವರ ಸುದ್ದಿ ಏನು ಎಂದು ಅಂದುಕೊಂಡಿರಾ ಬನ್ನಿ ಇಂದಿನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಅಭಿಮಾನಿಗಳು ಹಲವಾರು ಕಲಾವಿದರು ಹಾಗೂ ನಿರ್ದೇಶಕರನ್ನು ಕನ್ನಡದ ವಿಚಾರದ ಕುರಿತು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಇತರ ಚಿತ್ರ ರಂಗದ ಕಲಾವಿದರಿಗೆ ಮಣೆ ಹಾಕುವುದು ಹಾಗೂ ಇತರ ಚಿತ್ರರಂಗದ ಜೊತೆ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ತೋರಿಸಲಾಗುತ್ತಿದೆ ಎಂದು ಹಲವಾರು ಖ್ಯಾತ ಕಲಾವಿದರ ಹಾಗೂ ನಿರ್ದೇಶಕರ ವಿರುದ್ಧ ಕನ್ನಡದ ಅಭಿಮಾನಿಗಳು ಗರಮ್ ಆಗಿದ್ದಾರೆ.

ಆದರೆ ಯಶ್ ರವರು ಈ ರೀತಿಯ ಯಾವುದೇ ವಿವಾದಗಳಿಗೆ ಅನುವು ಮಾಡಿಕೊಡದೇ ತಮ್ಮ ಸಿನಿಮಾ ಘೋಷಣೆಯ ನಿರ್ಧಾರ ನಿರ್ಧಾರ ಮಾಡಿದ್ದಾರೆ. ಹೌದು ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ಕನ್ನಡದ ಜನತೆಗೆ ಮಾತ್ರ ತಿಳಿದಿಲ್ಲ ಬದಲಾಗಿ ಇದೀಗ ಯಶ್ ಎಂದರೇ ಇಡೀ ಭಾರತದ ಚಿತ್ರರಂಗದ ಅಭಿಮಾನಿಗಳಿಗೆ ತಿಳಿಯುತ್ತದೆ. ಅದೇ ಕಾರಣಕ್ಕಾಗಿ ಇತರ ಚಿತ್ರರಂಗಗಳ ನಿರ್ದೇಶಕರು ಯಶ್ ರವರ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಅದಕ್ಕಾಗಿ ತೆಲುಗು ಚಿತ್ರರಂಗದ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ಪೂರಿ ಜಗನ್ನಾಥ್ ಹಾಗೂ ತಮಿಳು ಚಿತ್ರರಂಗದಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುವಂತೆ ಚಿತ್ರಗಳನ್ನು ನಿರ್ಮಾಣ ಮಾಡಿರುವ ಶಂಕರ್ ಅವರು ಕೂಡ ಯಶ್ ರವರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆದರೆ ಯಶ್ ರವರು ಇವರಿಬ್ಬರು ನಿರ್ದೇಶಕರ ಕಾಲ್ಶೀಟ್ ಬದಲಾಗಿ ಕನ್ನಡದ ಭರವಸೆಯ ನಿರ್ದೇಶಕ ಎಂದು ಹೆಸರು ಪಡೆದುಕೊಂಡಿರುವ ನರ್ತನ್ ರವರ ಜೊತೆ ಯಶ್ ರವರು ಇಬ್ಬರು ನಿರ್ದೇಶಕರ ಮನವಿಯನ್ನು ಪಕ್ಕಕ್ಕೆ ಇಟ್ಟು ಒಪ್ಪಿಕೊಂಡಿದ್ದಾರೆ.

ಹೌದು ಸ್ನೇಹಿತರೇ ಯಶ್ ಅವರ ಮುಂದಿನ ಸಿನಿಮಾ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಘೋಷಣೆಯಾಗಲಿದ್ದು ಶಂಕರ ಹಾಗೂ ಪುರಿ ಜಗನ್ನಾಥ ರವರಂತಹ ಸ್ಟಾರ್ ನಿರ್ದೇಶಕರು ಯಶ್ ರವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರೂ ಕೂಡ ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ರವರಿಗೆ ಯಶ್ ರವರು ಒಪ್ಪಿಗೆ ಸೂಚಿಸಿದ್ದು ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಗಳು ಸಂಪೂರ್ಣವಾಗಿ ರೆಡಿಯಾಗಿದ್ದು,

ಯಶ್ ರವರು ಕೆಜಿಎಫ್ ಟು ಚಿತ್ರದಿಂದ ಒಮ್ಮೆ ಬಿಡುವು ಪಡೆದುಕೊಂಡ ತಕ್ಷಣ ಸಿನಿಮಾ ಘೋಷಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ನಿರ್ಧಾರವನ್ನು ಕೇಳಿದ ಯಶ್ ಅಭಿಮಾನಿಗಳು ಒಂದು ಕಡೆ ಸಂತೋಷ ಪಟ್ಟರೆ ಮತ್ತೊಂದು ಕಡೆ ಕನ್ನಡದ ಅಭಿಮಾನಿಗಳು ಕೂಡ ಯಶ್ ರವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಲು ಹಲವಾರು ನಿರ್ದೇಶಕ ಹಾಗೂ ಕಲಾವಿದರಿಗೆ ಸೂಚಿಸಿ ಯಶ್ ರವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.