ಕಾಂಗ್ರೆಸ್ ಪಕ್ಷಕ್ಕೆ ಗಾಯದ ಮೇಲೆ ಬರೆ ! ಮೋದಿಯ ಬದ್ಧವೈರಿ ಮೋದಿಯ ಬಗ್ಗೆ ಹಾಡಿ ಹೊಗಳಿದ್ದು ಹೇಗೆ ಗೊತ್ತಾ??

ಕಾಂಗ್ರೆಸ್ ಪಕ್ಷಕ್ಕೆ ಗಾಯದ ಮೇಲೆ ಬರೆ ! ಮೋದಿಯ ಬದ್ಧವೈರಿ ಮೋದಿಯ ಬಗ್ಗೆ ಹಾಡಿ ಹೊಗಳಿದ್ದು ಹೇಗೆ ಗೊತ್ತಾ??

ನರೇಂದ್ರ ಮೋದಿ ರವರ ಆಡಳಿತ ವೈಖರಿಗೆ ದಿನೇ ದಿನೇ ಶತ್ರುಗಳು ಕಡಿಮೆಯಾಗುತ್ತಿದ್ದಾರೆ. ಇಷ್ಟು ದಿವಸ ನರೇಂದ್ರಮೋದಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ನಾವು ಬಿಜೆಪಿ ಪಕ್ಷ ಅಥವಾ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಹೊಗಳಿಕೆಯನ್ನು ಕೇಳುತ್ತಿದ್ದೆವು. ಆದರೆ ಇತ್ತೀಚೆಗೆ ನರೇಂದ್ರ ಮೋದಿ ರವರು ತೆಗೆದುಕೊಳ್ಳುತ್ತಿರುವ ದೇಶದ ಪರ ನಿರ್ಧಾರಗಳಿಗೆ ಹಲವಾರು ವಿರೋಧ ಪಕ್ಷದ ನಾಯಕರು ಸಹ ಮನಸೋತಿದ್ದಾರೆ. ಆದರೆ ಈ ಬಾರಿ ವಿರೋಧ ಪಕ್ಷದ ನಾಯಕ ಎನ್ನುವುದಕ್ಕಿಂತಲೂ ಬದಲಾಗಿ ಮೋದಿರವರ ಬದ್ಧ ವೈರಿ ಒಬ್ಬರು ನರೇಂದ್ರ ಮೋದಿ ರವರ ಆಡಳಿತ ವೈಖರಿಗೆ ಮನಸೋತು ಹಾಡಿಹೊಗಳಿದ್ದಾರೆ. ಅಷ್ಟಕ್ಕೂ ಯಾರು ಬದ್ಧವೈರಿ ಹಾಕುವಾಗ ವಿಚಾರವಾಗಿ ಮೋದಿರವರ ನಿರ್ಧಾರವನ್ನು ಹೊಗಳಿದ್ದಾರೆ ಗೊತ್ತಾ??

ಕಳೆದ ಬಾರಿ ಬಿಜೆಪಿ ಪಕ್ಷದ ಸಂಸದನಾಗಿ ಕೆಲಸಮಾಡಿದ್ದ ಶತ್ರುಘ್ನ ಸಿನ್ಹಾ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ, ಕಳೆದ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ನರೇಂದ್ರ ಮೋದಿ ಅವರು ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಸಂದರ್ಭದಲ್ಲಿ, ಶತ್ರುಘ್ನ ಸಿನ್ಹಾ ಅವರು ನರೇಂದ್ರ ಮೋದಿರವರ ವಿರುದ್ಧ ಹಲವಾರು ಟೀಕೆಗಳನ್ನು ಮಾಡಿದರು, ಇದೇ ಟೀಕೆಗಳ ವಿಚಾರವಾಗಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದ ಶತ್ರುಘ್ನ ಸಿನ್ಹಾ ರವರು ಇದೀಗ ಇದ್ದಕ್ಕಿದ್ದ ಹಾಗೆ ಯು ಟರ್ನ್ ಹೊಡೆದಿದ್ದಾರೆ. ನರೇಂದ್ರ ಮೋದಿರವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಕೇಳಿದ ಶತ್ರುಘ್ನ ಸಿನ್ಹಾ ರವರು, ನರೇಂದ್ರಮೋದಿ ಅವರ ಮಾತು ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಹಾಗೂ ಚಿಂತನೆಗೆ ಹಚ್ಚುವಂತಿತ್ತು. ದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ ಎಂದು ಮೋದಿ ಅವರ ಭಾಷಣದ ಪರವಾಗಿ ಟ್ವೀಟ್ ಮಾಡಿದ್ದಾರೆ. ಇವರ ನಡೆ ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.