ಕನ್ನಡಿಗರ ಪರವಾಗಿ ನಿಂತು ಕೇರಳ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿ ಸದ್ದಡಗಿಸಿದ ಗಡ್ಕರಿ

ಕನ್ನಡಿಗರ ಪರವಾಗಿ ನಿಂತು ಕೇರಳ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿ ಸದ್ದಡಗಿಸಿದ ಗಡ್ಕರಿ

ಅಮೇಥಿಯಲ್ಲಿ ತಮ್ಮ ಗೆಲುವು ಕಗ್ಗಂಟಾದ ತಕ್ಷಣ ಎರಡನೇ ಆಯ್ಕೆಯಾಗಿ ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿದ್ದ ರಾಹುಲ್ ಗಾಂಧಿ ರವರು ಅಂದು ತಮ್ಮ ಗೆಲುವಿಗಾಗಿ ಕರ್ನಾಟಕದ ಕೈಬಿಟ್ಟಿದ್ದರು. ಕರ್ನಾಟಕ ಹಾಗೂ ಕೇರಳ ನಡುವಿನ ಸಮಸ್ಯೆ ಬಗ್ಗೆ ಅರಿವೇ ಇಲ್ಲದ ರಾಹುಲ್ ಗಾಂಧಿ ಅವರು ನೇರವಾಗಿ ಕೇರಳ ರಾಜ್ಯದ ಬೆಂಬಲಕ್ಕೆ ನಿಂತು ನೀಡಿದ್ದ ಹೇಳಿಕೆ ಅಂದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ನಾವು ಸಹ ಲೇಖನ ಬರೆದು ಕನ್ನಡಿಗರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದೆವು. ಹೌದು ಅಂದು ರಾಹುಲ್ ಗಾಂಧಿ ರವರು ಕರ್ನಾಟಕ ಹಾಗೂ ಕೇರಳ ರಾಜ್ಯದ ನಡುವೆ ಹಲವಾರು ವರ್ಷಗಳಿಂದ ನಡೆದು ಕೊಂಡುಬಂದಿರುವ ಕಾದಾಟದ ವಿಷಯದಲ್ಲಿ ಕೇರಳ ರಾಜ್ಯದ ಪರ ನಿಂತಿದ್ದರು, ತಮ್ಮ ಚುನಾವಣಾ ಪ್ರಚಾರದಲ್ಲಿ ಕೇರಳ ರಾಜ್ಯದ ವಯನಾಡು ಜನತೆಯ ಮತ ಪಡೆಯಲು ಈ ನಿರ್ಧಾರ ಕೈಗೊಂಡಿದ್ದರು. ವಿಷಯದ ಮೂಲ ಹಾಗೂ ಸಂಪೂರ್ಣ ವಿಷಯಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯವು ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಯ ವೇಳೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ನೆರೆಯ ರಾಜ್ಯವಾದ ಕೇರಳ ಸರ್ಕಾರವು ಬಂಡಿಪುರ ಅರಣ್ಯ ಪ್ರದೇಶವನ್ನು ಸಂಪೂರ್ಣ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಸಂಪೂರ್ಣ ಲಾಬಿಯನ್ನು ನಡೆಸುತ್ತಾ ಮೊದಲಿನಿಂದಲೂ ರಾತ್ರಿ ಸಂಚಾರ ನಿಷೇಧ ತೆರೆದು ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದೆ, ಯಾವುದಕ್ಕೂ ಜಗ್ಗದ ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಮೆಟ್ಟಿಲೇರಿ ನಿಷೇಧವನ್ನು ಎತ್ತಿ ಹಿಡಿದಿತ್ತು. ಬಂಡೀಪುರ ಹೆದ್ದಾರಿ ಯು ಕರ್ನಾಟಕ ಹಾಗೂ ವಯನಾಡಿನ ನಡುವೆ ಕೊಂಡಿಯಂತೆ ಇದೆ, ಆದ ಕಾರಣದಿಂದ ಮೊದಲಿನಿಂದಲೂ ವಯನಾಡಿನ ಜನತೆ ರಾತ್ರಿಯ ಸಂಚಾರ ನಿಷೇಧವನ್ನು ತೆಗೆಯಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ.

ಅಂದು ಚುನಾವಣಾ ಪ್ರಚಾರದಲ್ಲಿ ವನ್ಯಜೀವಿಗಳ ಹಿತದೃಷ್ಟಿಯನ್ನು ಮರೆತ ರಾಹುಲ್ ಗಾಂಧೀ ರವರು ಬಂಡಿಪುರ ಅರಣ್ಯ ಪ್ರದೇಶದಲ್ಲಿ ನಿಷೇಧಿಸಲಾದ ರಾತ್ರಿಯ ಸಂಚಾರ ನಿಯಮಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಕೇವಲ ವಯನಾಡಿನ ಜನತೆಯ ಮತಗಳನ್ನು ಪಡೆಯಲು ರಾಹುಲ್ ಗಾಂಧಿ ರವರು ಯಾವ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಯ ಸಂಚಾರವನ್ನು ನಿಷೇಧಿಸಿದೆ ಎಂಬ ಅರಿವು ಇಲ್ಲದೆ ನೇರವಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಇದೆ ವಿಚಾರವಾಗಿ ಕೇರಳ ರಾಜ್ಯವು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿತ್ತು. ಈ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ ರವರು ಸಂಸತ್ತಿನಲ್ಲಿ ಕೇರಳ ರಾಜ್ಯದ ಪರ ಮತ್ತೊಮ್ಮೆ ಧ್ವನಿ ಎತ್ತಿ, ಮೋದಿ ಸರ್ಕಾರಕ್ಕೆ ಹಲವಾರು ಬಾಣಗಳನ್ನು ಬಿಟ್ಟರು.

ಈ ವಿಷಯದಲ್ಲಿ ಮೊದಲಿಂದಲೂ ಕರ್ನಾಟಕದ ಪರ ವಿಶೇಷ ಒಲವನ್ನು ಹೊಂದಿರುವ ನಿತಿನ್ ಗಡ್ಕರಿರವರು, ರಾಹುಲ್ ಗಾಂಧಿ ರವರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಕೇರಳ ಸಾರಿಗೆ ಇಲಾಖೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ವಿಶೇಷ ಅರ್ಜಿ ಆಧಾರದ ಮೇಲೆ ಸಮಸ್ಯೆ ಪರಿಹಾರ ಮಾಡಲು ತಜ್ಞರ ಸಮಿತಿ ರಚಿಸಲಾಯಿತು, ಸಮಿತಿಯು ಕರ್ನಾಟಕ ರಾಜ್ಯದ ನಿಷೇಧದ ಪರವಾಗಿ ತೀರ್ಪು ನೀಡಿದ್ದಾಗಿದೆ, ಈ ವಿಷಯದಲ್ಲಿ ಮತ್ತೊಮ್ಮೆ ಪ್ರಶ್ನೆ ಮಾಡುವುದು ಸಾಧ್ಯವೇ ಇಲ್ಲ, ಬಂಡೀಪುರದಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ. ಹೈಕೋರ್ಟ್ ತೀರ್ಪನ್ನು ಸಮಿತಿಯು ಎತ್ತಿ ಹಿಡಿದಿರುವ ಕಾರಣ ಯಾವುದೇ ಕಾರಣಕ್ಕೂ ತೀರ್ಪು ಮರು ಪರಿಶೀಲನೆ ನಡೆಯಲು ಸಾಧ್ಯವೇ ಇಲ್ಲ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಇವರ ಉತ್ತರಕ್ಕೆ ರಾಹುಲ್ ಗಾಂಧಿ ರವರು ಯಾವುದೇ ಪ್ರತಿಕ್ರಿಯನ್ನು ನೀಡದೆ ಸುಮ್ಮನಾಗಿದ್ದಾರೆ.