ನಿಖಿಲ್ ಕುಮಾರಸ್ವಾಮಿ ಗೆ ಮರ್ಮಾಘಾತ: ಸುಮಲತಾ ಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮತ್ತೊಬ್ಬ ಮಾಜಿ ಶಾಸಕ. ಯಾರು ಗೊತ್ತಾ??

ನಿಖಿಲ್ ಕುಮಾರಸ್ವಾಮಿ ಗೆ ಮರ್ಮಾಘಾತ: ಸುಮಲತಾ ಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮತ್ತೊಬ್ಬ ಮಾಜಿ ಶಾಸಕ. ಯಾರು ಗೊತ್ತಾ??

ಮಂಡ್ಯ ಜಿಲ್ಲೆಯು ದಿನೇದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಯಾವ ಕ್ಷಣದಲ್ಲಿ ಯಾರು ಯಾರ ಪರವಾಗಿ ನಿಲ್ಲಲಿದ್ದಾರೆ ಎಂದು ಇಡೀ ರಾಜ್ಯದ ಜನ ಕಾದು ಕುಳಿತಿದ್ದಾರೆ.ಈ ವಿಷಯದಲ್ಲಿ ಈಗಾಗಲೇ ಹಲವಾರು ಬಾರಿ ಸುಮಲತಾ ರವರು ಮೇಲುಗೈ ಸಾಧಿಸಿದ್ದಾರೆ. ಮಂಡ್ಯದಲ್ಲಿ ಭಾರಿ ಜನ ಬೆಂಬಲ ದೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ರವರಿಗೆ ಈಗ ಮತ್ತೊಂದು ಬಲ ಸೇರಿದಂತಾಗಿದೆ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಮತ್ತಷ್ಟು ಕಗ್ಗಂಟಾಗಿದೆ. ಮಂಡ್ಯದ ಜನರ ಸ್ವಾಭಿಮಾನ ಜನರು ಹಾಗಾಗಿ ಸುಮಲತಾ ರವರಿಗೆ ಮಾತ್ರ ಮತ ನೀಡುತ್ತೇವೆ ಎಂದು ಲಕ್ಷಾಂತರ ಜನರು ಈಗಾಗಲೇ ಹೇಳಿಕೆ ನೀಡಿದ್ದಾರೆ.ಇಂತಹ ಸಮಯದಲ್ಲಿ ಗೆಲುವಿಗಾಗಿ ಹರಸಾಹಸ ಪಡುತ್ತಿರುವ ನಿಖಿಲ್ ಕುಮಾರಸ್ವಾಮಿ ರವರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಪ್ರಸ್ತುತ ಸ್ವಾಭಿಮಾನದ ಪ್ರಶ್ನೆ ಎದುರಾಗಿದೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೂ ಮಂಡ್ಯ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ, ಪರಿಸ್ಥಿತಿ ಬಹಳ ವಿಭಿನ್ನವಾಗಿ ಇರುತ್ತಿತ್ತು. ಆದರೆ ಇಂದು ಕುಮಾರಸ್ವಾಮಿ ರವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಮಣೆ ಹಾಕಿರುವ ಕಾರಣ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಆದ ಕಾರಣದಿಂದ ಮಂಡ್ಯದ ಜನ ಹಾಗೂ ನಾನು ಪಕ್ಷೇತರ ಅಭ್ಯರ್ಥಿ ಯಾಗಿರುವ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಎಚ್ ಪಿ ರಾಮು ರವರು ಘೋಷಿಸಿದ್ದಾರೆ. ಅಂಬರೀಶ್ ಅವರ ಋಣ ನನ್ನ ಮೇಲಿದೆ ಹೀಗಾಗಿ ಚುನಾವಣೆಯಲ್ಲಿ ಯಾರಿಗೂ ಹೆದರದೆ ಸುಮಲತಾ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.