ಸಾಕ್ಷಿ ಸಮೇತ ಸಿಕ್ಕಿಬಿದ್ದ ಪ್ರಕಾಶ್ ರಾಜ್- ಚುನಾವಣೆ ಕ್ಯಾನ್ಸಲ್ ಮಾಡಿ ನೇರವಾಗಿ ಜೈಲಿಗೆ??

ಸಾಕ್ಷಿ ಸಮೇತ ಸಿಕ್ಕಿಬಿದ್ದ ಪ್ರಕಾಶ್ ರಾಜ್- ಚುನಾವಣೆ ಕ್ಯಾನ್ಸಲ್ ಮಾಡಿ ನೇರವಾಗಿ ಜೈಲಿಗೆ??

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನೇರವಾಗಿ ನರೇಂದ್ರ ಮೋದಿರವರು ನಿಂತು ಕೊಂಡಿದ್ದಾರೆ ಎಂದು ಊಹಿಸಿಕೊಂಡು ಈ ನನ್ನ ಸಮರ ನರೇಂದ್ರ ಮೋದಿ ಅವರ ವಿರುದ್ಧ ಎಂದು ಹೇಳಿಕೆ ನೀಡಿ, ಈಗಾಗಲೇ ಪ್ರಚಾರ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡು ಪ್ರಗತಿಪರ ಸಂಘಟನೆಗಳು ಎಂದು ಹೆಸರು ಇಟ್ಟುಕೊಂಡಿರುವ ಸಂಘಟನೆಗಳ ಬೆಂಬಲವನ್ನು ಪಡೆದು ಕೊಂಡು ಸಿದ್ಧರಾಗುತ್ತಿರುವ ಪ್ರಕಾಶ್ ರಾಜ್ ರವರಿಗೆ ಬಹು ದೊಡ್ಡ ಶಾಕ್ ಎದುರಾಗಿದೆ. ವಿಪರ್ಯಾಸವೆಂದರೆ ಭಾರತದ ಕಾನೂನಿಗೆ ಯಾವುದೇ ಬೆಲೆ ಕೊಡದ ಪ್ರಕಾಶ್ ರೈ ಅವರನ್ನು ಕೆಲವು ಸಂಘಟನೆಗಳು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಎಲ್ಲಾ ಪಕ್ಷದ ನಾಯಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಅಷ್ಟಕ್ಕೂ ಪ್ರಕಾಶ್ ರೈ ಮಾಡಿದ್ದಾದರೂ ಏನು ಗೊತ್ತಾ??ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಕಾಶ್ ರಾಜ್ ರವರು ಪಂಚ ಭಾಷೆಗಳಲ್ಲಿ ನಟನೆ ಮಾಡಿದ್ದಾರೆ.

ಬಹುಶಃ  ನಟನೆ ಮಾಡುವ ಸಂದರ್ಭದಲ್ಲೇ ಇರಬೇಕು ಕೆಲವು ಮೂಲಗಳ ಪ್ರಕಾರ ಪ್ರಕಾಶ್ ರಾಜ್ ರವರು ತೆಲಂಗಾಣ, ತಮಿಳುನಾಡು, ಬೆಂಗಳೂರಿನ ಶಾಂತಿನಗರ ಸೇರಿದಂತೆ 4 ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಇದಕ್ಕೆ ನನ್ನ ಬಳಿ ಸಾಕ್ಷಿ ಗಳು ಇವೆ ಎಂದು ವಕೀಲ ಜಗನ್ ಕುಮಾರ್ ರವರು ಕೇಸ್ ದಾಖಲಿಸಿದ್ದಾರೆ. ಆದರೆ ನಾಮಪತ್ರ ಘೋಷಣೆಗೆ ಸಂದರ್ಭದಲ್ಲಿ ಶಾಂತಿ ನಗರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂದು ಸುಳ್ಳು ಮಾಹಿತಿ ನೀಡಿ ನಾಮಪತ್ರ ಸಲ್ಲಿಕೆ ಯಲ್ಲಿಯೂ ಸಹ ಮೋಸ ಮಾಡಿದ್ದಾರೆ, ಹಾಗೂ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವುದು ಅಪರಾಧವಾಗಿದ್ದು ಹೀಗಾಗಿ ಪ್ರಕಾಶ್ ರಾಜ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಸ್ ಜಡಿದಿದ್ದಾರೆ.ಒಂದು ವೇಳೆ ವಕೀಲ್ ಜಗನ್ ರವರ ಮಾತು ಸತ್ಯವಾಗಿ ಪ್ರಕಾಶ್ ರೈ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕಾದ ಪರಿಸ್ಥಿತಿ ಎದುರಾದಲ್ಲಿ, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಕೊಂಡಿದ್ದ ಪ್ರಕಾಶ್ ರೈ ಅವರು ಸ್ಪರ್ಧಿಸದೆ ನೇರವಾಗಿ ಜೈಲಿಗೆ ಹೋಗಬೇಕಾಗುತ್ತದೆ.