ಬಿಗ್ ಬ್ರೇಕಿಂಗ್: ಗಡಗಡ ನಡುಗಿ ಹೋದ ಪಾಪಿಗಳು, ಯುದ್ಧ ಆರಂಭವಾಗಿದೆ ಎಂದುಕೊಂಡು ಮಾಡಿದ್ದೇನು ಗೊತ್ತಾ??

ಬಿಗ್ ಬ್ರೇಕಿಂಗ್: ಗಡಗಡ ನಡುಗಿ ಹೋದ ಪಾಪಿಗಳು, ಯುದ್ಧ ಆರಂಭವಾಗಿದೆ ಎಂದುಕೊಂಡು ಮಾಡಿದ್ದೇನು ಗೊತ್ತಾ??

ಭಾರತ ದೇಶವು ಒಂದು ವೇಳೆ ಪಾಕಿಸ್ತಾನ ದೇಶದ ಮೇಲೆ ಯುದ್ಧ ಮಾಡಿದರೆ ಪಾಕಿಸ್ತಾನದ ಸರ್ವನಾಶ ಖಂಡಿತ ಇದು ಇಡೀ ವಿಶ್ವಕ್ಕೆ ತಿಳಿದಿರುವ ಸಂಗತಿ. ಈ ವಿಶ್ವಕ್ಕೆ ತಿಳಿದಿರುವ ಸಂಗತಿ ಯನ್ನು ಪಾಕಿಸ್ತಾನವು ಸಹ ಅರ್ಥಮಾಡಿಕೊಂಡಿದೆ. ಆದರೆ ತನ್ನ ಮರ್ಯಾದೆ ಉಳಿಸಿಕೊಳ್ಳಲು ಭಾರತದ ವಿರುದ್ಧ ಗುಟುರು ಹಾಕುವ ಕೆಲಸ ಮಾಡುತ್ತಿದೆ. ಪಾಕಿಸ್ತಾನಕ್ಕೆ ಒಳ ಭಯವಿದೆ ಎಂಬುದು ಎಲ್ಲರಿಗೂ ತಿಳಿದಿತ್ತು ಆದರೆ ಈಗ ಆ ಭಯ ಎಷ್ಟಿದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ.

ಭಾರತ ದೇಶವು ಈಗಾಗಲೇ ಗಡಿಯಲ್ಲಿ ಸೇನಾ ಜಮಾವಣೆ ಮಾಡುತ್ತಿರುವ ಕಾರಣ ಪಾಕಿಸ್ತಾನ ದೇಶ ನಡುಗಿ ಹೋಗಿದೆ. ಬೇರೆ ದಾರಿಯಿಲ್ಲದೆ ಒಂದು ವೇಳೆ ಭಾರತ ದೇಶವು ದಾಳಿ ಮಾಡಿದರೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಯ ಎಷ್ಟಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸೈನಿಕರು ಈಗಾಗಲೇ ಮಾನಸಿಕ ಕಿನ್ನತೆ ಖಿನ್ನತೆಯಿಂದ  ಬಳಲುತ್ತಿರುವುದು ಕೂಡ ಸಾಬೀತಾಗಿದೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?

ಈಗಾಗಲೇ ಪಾಕಿಸ್ತಾನಕ್ಕೆ ಭಾರತ ದೇಶವು ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಅರಿವಾಗಿದೆ ಆದ ಕಾರಣದಿಂದ ಭಯದಲ್ಲಿ ಬದುಕುತ್ತಿರುವ ಪಾಕಿಸ್ತಾನವು ಇಂದು ತನ್ನದೇ ಆದ ವಿಮಾನವನ್ನು ತಾನೇ ಛಿದ್ರ ಛಿದ್ರ ಮಾಡಿಕೊಂಡಿದೆ. ಒಂದೆಡೆ ಭಾರತೀಯ ವಾಯುಪಡೆಯು ಈಗಾಗಲೇ ಯುದ್ಧಕ್ಕೆ ಸಜ್ಜಾಗಿ ಗಡಿಯಲ್ಲಿ ಕಾಯುತ್ತಿದೆ, ಇದೇ ಭಯದಲ್ಲಿ ಬದುಕಿದ್ದ ಪಾಕಿಸ್ತಾನದ ಸೈನಿಕರು ಇದ್ದಕ್ಕಿದ್ದ ಹಾಗೆ ಪಾಕಿಸ್ತಾನದ ಯುದ್ಧ ವಿಮಾನವೊಂದು ಅಭ್ಯಾಸ ಆರಂಭಿಸಿದಾಗ ಇದು ಭಾರತೀಯ ಯುದ್ಧ ವಿಮಾನ ಎಂದುಕೊಂಡಿದ್ದಾರೆ

ಭಾರತ ವಿಮಾನವೂ ತನ್ನ ವಾಯುನೆಲೆ ಪ್ರವೇಶ ಮಾಡುತ್ತಿದೆ ಎಂದು ಕೊಂಡ ಪಾಕಿಸ್ತಾನವು ತನ್ನ ರಾಕೆಟ್ ಲಾಂಚರ್ ಗಳನ್ನು ಬಳಸಿಕೊಂಡು ಆ ಯುದ್ಧ ವಿಮಾನವನ್ನು ಉರುಳಿಸಿ ಧ್ವಂಸ ಮಾಡಿದೆ. ಆದರೆ ತದನಂತರ ಪಾಕಿಸ್ತಾನದ ಸೈನಿಕರಿಗೆ ಯುದ್ಧ ವಿಮಾನ ತಮ್ಮದೆಂದು ಅರಿವಾಗಿದೆ. ಈ ವಿಷಯವು ಹೊರ ಬಂದರೆ ಪಾಕಿಸ್ತಾನ ದೇಶಕ್ಕೆ ವಿಶ್ವಮಟ್ಟದಲ್ಲಿ ಮುಜುಗರ ಆಗುತ್ತದೆ ಎಂಬುದನ್ನು ಅರಿತ ಪಾಕಿಸ್ತಾನವು ಇಂಟರ್ನೆಟ್ ಬಂದ್ ಮಾಡಿದೆ. ಆದರೂ ಸಹ ಅದ್ಯಾಕೋ ವಿಷಯ ಹೊರ ಬಿದ್ದಿದ್ದು ಭಾರತದ ದೇಶವನ್ನು ಕಂಡು ಪಾಕಿಸ್ತಾನ ನಡುಗುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಇದಾಗಿದೆ.