ಪಾಕಿಸ್ತಾನದ ಮೇಲೆ ದಾಳಿ ಖಚಿತಪಡಿಸಿದ ರಕ್ಷಣಾ ಸಚಿವೆ: ಹೇಳಿದ್ದೇನು ಗೊತ್ತಾ??

ಪಾಕಿಸ್ತಾನದ ಮೇಲೆ ದಾಳಿ ಖಚಿತಪಡಿಸಿದ ರಕ್ಷಣಾ ಸಚಿವೆ: ಹೇಳಿದ್ದೇನು ಗೊತ್ತಾ??

ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಇಡೀ ದೇಶದ 130 ಕೋಟಿ ಜನ ಒತ್ತಾಯ ಮಾಡುತ್ತಿದ್ದಾರೆ. ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು ಸಹ ಸೇನೆಯು ಪಾಕಿಸ್ತಾನದ ಮೇಲೆ ಆಕ್ರಮಣವನ್ನು ನಡೆಸಿಲ್ಲ ಎಂಬ ಆಲೋಚನೆಗಳು ಜನರ ತಲೆಗಳಲ್ಲಿ ಓಡಾಡುತ್ತಿವೆ. ಇದಕ್ಕೆ ಕಾರಣಗಳನ್ನು ಕೆದಕುತ್ತಾ ಹೋದರೆ ನಮಗೆ ಹಲವಾರು ಕಾರಣಗಳು ಸಿಗುತ್ತವೆ.

ಆದರೆ ಕೆಲವರು ಸೇನೆಯು ಯಾವುದೇ ಪ್ರತಿಕಾರ ತೀರಿಸಿಕೊಳ್ಳುವುದಿಲ್ಲ ಎಂದುಕೊಂಡಿದ್ದಾರೆ. ಅಂತವರಿಗೆ ನಿರ್ಮಲಾ ಸೀತಾರಾಮನ್ ರವರ ಹೇಳಿಕೆ ತಕ್ಕ ಉತ್ತರವನ್ನು ನೀಡಲಿದೆ ಹಾಗೂ ಕುತಂತ್ರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ಖಚಿತ ವಾಗಿದೆ. ಪುಲ್ವಾಮಾ ದಾಳಿಯ ಬಗ್ಗೆ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ ರುವ ರಕ್ಷಣಾ ಸಚಿವೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವಂತಹ ಹೇಳಿಕೆಯೊಂದನ್ನು ನೀಡಿ ದ್ದಾರೆ. ನಿರ್ಮಲಾ ಸೀತಾರಾಮನ್ ರವರ ಹೇಳಿಕೆ ಗಳನ್ನು ತಿಳಿಯಲು ಸಂಪೂರ್ಣ ಓದಿ.

ದೇಶದ ಕೆಲವರನ್ನು ಹೊರತುಪಡಿಸಿ ಉಳಿದ 130 ಕೋಟಿ ಭಾರತೀಯರು ಹಾಗೂ ನಮ್ಮ ಸೇನೆ ಅನುಭವಿಸುತ್ತಿರುವ ನೋವು ಆಕ್ರೋಶವನ್ನು ನಾನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಮೋದಿ ಅವರು ಈಗಾಗಲೇ ಸೂಚಿಸಿದಂತೆ ಭಾರತೀಯ ಸೇನೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇನೆ, ತಮ್ಮಿಷ್ಟದಂತೆ ಮುಂದಿನ ಹೆಜ್ಜೆ ಇಡಬಹುದು. ನಮ್ಮ ಸೇನೆಯು ಯಾವುದೇ ವಿಷಯದಲ್ಲೂ ಧೃತಿಗೆಟ್ಟಿಲ್ಲ ಭಾರತೀಯರು ತೋರಿಸಿದ ಪ್ರೀತಿ ಗೆ ಇನ್ನಷ್ಟು ಪ್ರೇರಣೆ ಪಡೆದು ಕೊಂಡಿದ್ದಾರೆ.

ಸಾಕ್ಷ ಕೇಳುತ್ತಿರುವ ಪಾಕಿಸ್ತಾನಕ್ಕೆ ಈಗಾಗಲೇ ಹಲವಾರು ಸಾಕ್ಷಿಗಳನ್ನು ನಾವು ಒದಗಿಸಿದ್ದೇವೆ, ಈ ದಾಳಿಯನ್ನು ಯಾರೂ ಊಹಿಸಿರಲಿಲ್ಲ ಈ ಕುರಿತು ನಾನು ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಆದರೆ ನಮ್ಮದೇ ಆದ ರೀತಿಯಲ್ಲಿ ಪ್ಲಾನ್ ಮಾಡುತ್ತಿದ್ದೇವೆ ಖಂಡಿತವಾಗಿಯೂ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂಬ ಮಾತನಾಡಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರವನ್ನು ಖಚಿತಪಡಿಸಿದ್ದಾರೆ.