ಸೇನೆಯ ಆರ್ಭಟಕ್ಕೆ ಸೋಲೊಪ್ಪಿಕೊಂಡು ಹೇಡಿ ಉಗ್ರರು ಮಾಡಿದ್ದೇನು ಗೊತ್ತಾ?

ಸೇನೆಯ ಆರ್ಭಟಕ್ಕೆ ಸೋಲೊಪ್ಪಿಕೊಂಡು ಹೇಡಿ ಉಗ್ರರು ಮಾಡಿದ್ದೇನು ಗೊತ್ತಾ?

ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯ ನಂತರ ಪರಿಸ್ಥಿತಿ ಬಹಳಷ್ಟು ಬದಲಾಗಿದೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರ ಉಪಟಳ ವನ್ನು ಕಾನೂನು ಎಂಬ ತಡೆಗೋಡೆ ಯೊಂದಿಗೆ ತಡೆಯಲು ಹರಸಾಹಸ ಪಡುತ್ತಿದ್ದ ಸೈನಿಕರಿಗೆ ಈಗ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಉಗ್ರರ ದಮನ ವಾಗುವುದು ಖಚಿತವಾಗಿದೆ.

ಇನ್ನು ಪಾಕಿಸ್ತಾನ ಹಾಗು ಭಾರತದ ಗಡಿಯಲ್ಲಿ ಭಾರತೀಯ ಸೇನೆಯು ಬಾರಿ ಯುದ್ಧ ಟ್ಯಾಂಕರ್ ಹಾಗೂ ಸೇನೆಯನ್ನು ಜಮಾವಣೆ ಮಾಡಿರುವುದರಿಂದ ಯುದ್ಧ ಅಥವಾ ಸರ್ಜಿಕಲ್ ಸ್ಟ್ರೈಕ್ ನ ಪರಿಸ್ಥಿತಿ ಎದುರಾಗಿದೆ. ಭಾರತೀಯ ಸೇನೆಯು ಯಾವ ಸಮಯದಲ್ಲಿ ಬೇಕಾದರೂ ಪಾಕಿಸ್ತಾನದ ಮೇಲೆ ಅಥವಾ ಗಡಿಯಲ್ಲಿ ನೆಲೆಯೂರಿರುವ ಉಗ್ರರ ಮೇಲೆ ಮುಗಿ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.

ಆದ ಕಾರಣದಿಂದ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಭಾಸವಾಗುತ್ತಿದೆ ಎಲ್ಲಾ ವಿದ್ಯಮಾನಗಳ ನಡುವೆ ನೆನ್ನೆ ಭಾರತ ವಾಯುಪಡೆ ಸಮರಾಭ್ಯಾಸ ನಡೆಸಿ ಉಗ್ರರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚು ಮಾಡಿದೆ. ಇಡೀ ವಿಶ್ವವೇ ಇಂದು ಉಗ್ರರ ದಮನಕ್ಕಾಗಿ ಭಾರತದ ಪರ ನಿಂತು ಕಾದು ಕುಳಿತಿದೆ ಇನ್ನು ಇಂತಹ ಸ್ವಾತಂತ್ರ್ಯಕ್ಕಾಗಿ ಹಲವಾರು ವರ್ಷಗಳಿಂದ ಎದುರು ನೋಡುತ್ತಿದ್ದ ಸೇನಾಪಡೆಯು ಹೊಂಚು ಹಾಕಿ ಸರಿಯಾದ ಸಮಯಕ್ಕೆ ಕಾದು ಕುಳಿತಿದೆ.

ಇದರಿಂದ ಉಗ್ರರಲ್ಲಿ ಆತಂಕ ಮನೆ ಮಾಡಿದ್ದು ಬೇರೆ ದಾರಿಯಿಲ್ಲದೆ ಭಾರತೀಯ ಸೈನಿಕರನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಉಗ್ರರು ತಮ್ಮ ತಮ್ಮ ಅಡಗುತಾಣ ಗಳಿಂದ ಬೇರೆ ಸ್ಥಳಕ್ಕೆ ಹೇಡಿಗಳಂತೆ ಪರಾರಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಭಾರತೀಯ ಸೈನಿಕರನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಸೋಲನ್ನು ಒಪ್ಪಿಕೊಂಡಿರುವ ಈ ಉಗ್ರರು ತಮ್ಮ ಅಡಗುತಾಣ ಗಳಿಂದ ಪರಾರಿಯಾಗಿ ತಾವು ಹೇಡಿಗಳು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.