ಮೋದಿ ಗುಡುಗಿಗೆ ನಡುಗಿ ಹೋದ ಇಮ್ರಾನ್ ಖಾನ್: ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಸಿದ್ಧರಾದ ಮೋದಿ

ಮೋದಿ ಗುಡುಗಿಗೆ ನಡುಗಿ ಹೋದ ಇಮ್ರಾನ್ ಖಾನ್: ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಸಿದ್ಧರಾದ ಮೋದಿ

ಇಡಿ ವಿಶ್ವವೇ ದಂಗ್ ಆಗುವಂತೆ ಇಂದು ಭಾರತೀಯ ಸೇನೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಈ ವಿಷಯದಲ್ಲಿ ಭಾರತದ ಬೆಂಬಲಕ್ಕೆ ವಿಶ್ವದ ಬಹುತೇಕ ದೇಶಗಳು ನಿಲ್ಲುವುದು ಖಚಿತವಾಗಿದೆ. ಈಗಾಗಲೇ  ವಿಶ್ವದ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ರಷ್ಯಾ ದೇಶಗಳು ಭಾರತದ ಬೆಂಬಲಕ್ಕೆ ನಿಂತು ಉಗ್ರರ ವಿರುದ್ಧ ಹೋರಾಟ ಮಾಡಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ ಒಂದು ವೇಳೆ ಅಗತ್ಯಬಿದ್ದಲ್ಲಿ ಭಾರತೀಯ ಸೇನೆಯ ಜೊತೆ ತಮ್ಮ ದೇಶದ ಸೈನಿಕರನ್ನು ಯುದ್ಧಭೂಮಿಯಲ್ಲಿ ಹೋರಾಟ ಮಾಡಲು ಕಣಕ್ಕಿಳಿಸಲು ಸಿದ್ಧರಿರುವುದಾಗಿ ಅಮೆರಿಕ ಫ್ರಾನ್ಸ್ ಹಾಗು ರಶಿಯಾ ದೇಶಗಳ ಘೋಷಿಸಿವೆ .ಇದರಿಂದ ಪಾಕಿಸ್ತಾನದ ಕುತಂತ್ರ ನೀತಿಗಳು ವಿಶ್ವಕ್ಕೆ ಇಂದು ಬಹಿರಂಗಗೊಂಡಿವೆ. ಇನ್ನು ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುವುದಾಗಿ ಘೋಷಿಸಿದ್ದರು. ಕಳೆದ ಬಾರಿ ಉರಿ ದಾಳಿಯ ವೇಳೆ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದ ನರೇಂದ್ರ ಮೋದಿ ಅವರು ಇನ್ನೂ ಈ ದಾಳಿಗೆ ಯಾವ ಉತ್ತರ ನೀಡುತ್ತಾರೆ ಎಂದು ಪಾಕಿಸ್ತಾನ ಈಗ ಚಿಂತೆಗೆ ಒಳಗಾಗಿದೆ.

ನರೇಂದ್ರ ಮೋದಿ ಅವರ ಹೇಳಿಕೆಯ ಬೆನ್ನಲ್ಲೇ ಇಮ್ರಾನ್ ಖಾನ್ ರವರು ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಡೆದ ಆತ್ಮಹತ್ಯೆ ದಾಳಿಗೆ ಜೈಶ್ ಇ ಮೊಹಮ್ಮದ್ ಸಂಘಟನೆಯು ಕಾರಣ ಎಂದು ತಿಳಿದ ತಕ್ಷಣ ಮೋದಿಯ ಕಟ್ಟರ್ ಸೇನಾನಿಗಳು ಅಜಿತ್ ದೊವೆಲ್ ಹಾಗೂ ರಾಜನಾಥ್ ಸಿಂಗ್ ರವರಿಗೆ ನರೇಂದ್ರ ಮೋದಿ ಅವರು ಸಂಪೂರ್ಣ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ಅಜಿತ್ ದೊವೆಲ್ ಹಾಗೂ ರಾಜನಾಥ್ ಸಿಂಗ್ ರವರು ಚರ್ಚೆ ನಡೆಸಿದ ಬೆನ್ನಲ್ಲೇ ಪಾಪಿ ಪಾಕಿಸ್ತಾನದಲ್ಲಿ ಅಲರ್ಟ್ ಘೋಷಣೆಯಾದ ಅಂತೆ ಕಾಣುತ್ತಿದೆ. ಇಮ್ರಾನ್ ಖಾನ್ ರವರು ಭಾರತದ ಸಂಭಾವ್ಯ ದಾಳಿಯನ್ನು ಎದುರಿಸಲು ಸಜ್ಜಾಗುವಂತೆ ತನ್ನ ಭದ್ರತಾ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನರೇಂದ್ರ ಮೋದಿ ರವರ ಕೇವಲ ಒಂದು ಗುಡುಗಿಗೆ ಇಮ್ರಾನ್ ಖಾನ್ ರವರು ನಡುಗಿ ಸೇನೆಗೆ ದಾಳಿ ಎದುರಿಸಲು ಸಿದ್ಧರಾಗುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.