ಆಡಿಯೋ ಬಹಿರಂಗ: ರಾಜಕೀಯ ನಿವೃತ್ತಿ ನೀಡುವೆ ಎಂದು ಸವಾಲೆಸೆದ ಬಿ ಸ್ ವೈ
ಆಡಿಯೋ ಬಹಿರಂಗ: ರಾಜಕೀಯ ನಿವೃತ್ತಿ ನೀಡುವೆ ಎಂದು ಸವಾಲೆಸೆದ ಬಿ ಸ್ ವೈ
ರಾಜ್ಯ ರಾಜಕಾರದಲ್ಲಿ ಅತಿ ದೊಡ್ಡ ತಿರುವು ಪಡೆಯುವ ದಿನ ಎಂದೇ ಬಣ್ಣಿಸಲಾಗಿರುವ ಇಂದಿನ ಬಜೆಟ್ ನ ದಿನ ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ. ಮೊದಲು ಬಿ ಜೆ ಪಿ ಪಕ್ಷಕ್ಕೆ ಬಜೆಟ್ ನ ಪ್ರತಿ ನೀಡುವುದಿಲ್ಲ ಎಂದು ಬಾಂಬ್ ಸಿಡಿಸಿದ್ದ ಕುಮಾರಸ್ವಾಮಿ ರವರು ಇಂದು ಇದ್ದಕ್ಕಿದ್ದ ಹಾಗೆ ಬಜೆಟ್ ಮಂಡಿಸುವುದಕ್ಕೆ ಮುನ್ನ ಸುದ್ದಿಗೋಷ್ಠಿ ಕರೆದು ಬಾಂಬ್ ಸಿಡಿಸಿದ್ದಾರೆ.
ಆಡಿಯೋ ಟೇಪ್ ರಿಲೀಸ್ ಮಾಡಿರುವ ಕುಮಾರಸ್ವಾಮಿ ರವರು ಅಂದಾಜು 40 ನಿಮಿಷಗಳ ಅವಧಿಯ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದಾರೆ.ಗುರುಮಟ್ಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ಈ ಆಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡಿಕೊಂಡು ತಮಗೆ ಕೊಟ್ಟಿದ್ದಾಗಿ ಕುಮಾರಸ್ವಾಮಿ ಹೇಳಿದರು.ನೀನು ನನ್ನ ಮಗ ವಿಜಯೇಂದ್ರ ಇದ್ದಂತೆಯೇ ಎಂದು ಹೇಳುತ್ತಾ ಬಿಎಸ್ ಯಡಿಯೂರಪ್ಪ ಹಣದ ಆಮಿಷವನ್ನು ಒಡ್ಡಲು ಪ್ರಯತ್ನ ಮಾಡಿದ್ದಾರೆ, ಆದರೆ ಶರಣಗೌಡ ಅವರು ನನಗೆ ಕಾಲ್ ಮಾಡಿದ್ದರಿಂದ ಎಲ್ಲವನ್ನೂ ನಾನೇ ರೆಕಾರ್ಡ್ ಮಾಡಿದ್ದೇನೆ ಎಂದು ಎಚ್ಡಿಕೆ ವಿವರಿಸಿದ್ದಾರೆ.
ಈ ನಡುವೆ ಸಿಎಂ ಆರೋಪಕ್ಕೆ ಎನ್ ಕೌಂಟರ್ ನೀಡಿರುವ ಬಿಸ್ವೈ ಸಿಎಂ ಕುಮಾರಸ್ವಾಮಿಯವರು ಸಿನಿಮಾ ಕ್ಷೇತ್ರದಿಂದ ಬಂದವರಾಗಿದ್ದು, ಅವರು ಏನು ಬೇಕಾದ್ರು ಮಾಡುತ್ತಾರೆ ಅಂತ ಹೇಳಿದರು.ಇನ್ನು ಸಿಎಂ ನನ್ನ ಮೇಲೆ ಮಾಡಿರು ಆರೋಪ ಸುಳ್ಳಾಗಿದೆ. ಅವರ ಪಕ್ಷದ ಶಾಸಕರು ನಮ್ಮ ಜೊತೆ ನಾಲ್ಕು ಜನ ಬಿಜೆಪಿ ಶಾಸಕರು ಇದ್ದಾರೆ ಅಂತ ಹೇಳುತ್ತಾರೆ. ಈ ಬಗ್ಗೆ ಅವರು ಏನು ಹೇಳುತ್ತಾರೆ ಅಂತ ಪ್ರಶ್ನೆ ಮಾಡಿದರು. ಇನ್ನು ರಾಜ್ಯ ಸರಕಾರದಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಅಂತ ಹೇಳಿದರು.
ಇದೇ ವೇಳೆ ಅವರು ಸ್ಪೀಕರ್ ಅವರಿಗೆ ನಾನು 50 ಕೋಟಿ ನೀಡುವುದಾಗಿ ನಾನು ಹೇಳಿದ್ದರೆ, ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುವೆ ಕುಮಾರಸ್ವಾಮಿರಾವರಿಗೆ ನೇರ ಸವಾಲು ಎಸೆದಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡಲಾಗಿದೆ ಎಂದು ಬಿ ಸ್ ವೈ ರವರು ತಕ್ಕ ತಿರುಗೇಟನ್ನು ನೀಡಿದ್ದಾರೆ.
.