ಯಶ್ ನಂತರ ಅಭಿಮಾನಿ ಸಾವಿಗೆ ಮಿಡಿದ ರಾಧಿಕಾ ಪಂಡಿತ್ ಮಾಡಿದ್ದೇನು ಗೊತ್ತಾ???

ಯಶ್ ನಂತರ ಅಭಿಮಾನಿ ಸಾವಿಗೆ ಮಿಡಿದ ರಾಧಿಕಾ ಪಂಡಿತ್ ಮಾಡಿದ್ದೇನು ಗೊತ್ತಾ???

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರ ನಿಧನದಿಂದ ಹುಟ್ಟುಹಬ್ಬ ಆಚರಿಸದೆ ಇರಲು ನಿರ್ಧರಿಸಿದ ಯಶ್ ರವರಿಗೆ ಅಂದು ಶಾಕ್ ಕಾದಿತ್ತು ! ಒಂದು ದಿನವಾಗಿ ಮುಂಚೆ ಯಶ್ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದರೂ, ನಾನು ಅಂಬರೀಶ್ ಅವರನ್ನು ಕಳೆದುಕೊಂಡಿದ್ದೇನೆ ಆ ದುಃಖದಿಂದ ಇನ್ನು ಹೊರಬರಲು ಸಾಧ್ಯವಾಗಿಲ್ಲ ಆದ ಕಾರಣದಿಂದ ನಾನು ಹುಟ್ಟುಹಬ್ಬವನ್ನು ಆಚರಿಸಲಿದೆ  ಇರಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದರು.  ಯಶ್ ರವರ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು.ಆದರೆ ಯಶ್ ಅವರ ನಿರ್ಧಾರಕ್ಕೂ ಕ್ಯಾರೇ ಎನ್ನದ ಸಾವಿರಾರು ಅಭಿಮಾನಿಗಳು ಯಶ್ ಅವರ ಮನೆ ಮುಂದೆ ಜಮಾಯಿಸಿದ್ದರು.

ಯಾವುದೇ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಆಸಕ್ತಿ ಇಲ್ಲದ ಯಶ್ ಅವರು ಮನೆಯಲಿ ಇರಲಿಲ್ಲ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹೊರಗಡೆ ಹೋಗಿದ್ದರು. ಯಶ್ ಅವರು ಮನೆಯಲ್ಲಿ ಇಲ್ಲ ಎಂದು ತಿಳಿದ ಅಭಿಮಾನಿ ಇದ್ದಕಿದ್ದ ಹಾಗೆ  ತನ್ನ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಅಂಟಿಸಿ ಆತ್ಮ ಹತ್ಯೆ ಮಾಡಿಕೊಳ್ಳಲು ಯತ್ನಸಿದ, ಆಗಲಾದರೂ ಯಶ್ ಬರುತ್ತಾರೆ  ಎಂದು ಆತ ನಂಬಿದ್ದ .ದುರಾದೃಷ್ಟವಶಾತ್ ಯಶ್ ಹುಟ್ಟು ಹಬ್ಬದ ಮರುದಿನವೇ ಈತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಇದರಿಂದ ಯಶ್ ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು.

ಆಸ್ಪತ್ರೆಗೆ ಹೋಗಿ ಸಾಂತ್ವನ ಹೇಳಿದ ಯಶ್ ರವರು ಸಾವಿನ ನಂತರ  ತಂದೆ ತಾಯಿಯ ಮನೆಗೆ ಹೋಗಿ, ಅವರಿಗೆ ಆರ್ಥಿಕವಾಗಿ ನೆರವು ನೀಡಿದ್ದರು. ಮೂಲಗಳಿಂದ ತಿಳಿದುಬಂದ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ರವಿ ಅವರ ಕುಟುಂಬಕ್ಕೆ 5 ಲಕ್ಷ ಹಣವನ್ನು ನೀಡಿದ್ದರು . ಇಷ್ಟೇ ಅಲ್ಲದೆ ನಿಮ್ಮ ಕುಟುಂಬಕ್ಕೆ ಏನೇ ಸಮಸ್ಯೆ ಬಂದರೂ ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಮಾತು ನೀಡಿದ್ದರು. ತದ ನಂತರ ಅಲ್ಲಿಂದ ಕಣ್ಣೀರಿಡುತ್ತ ವಾಪಸ್ಸು ಬಂದಿದ್ದರು.

ಇದರಿಂದ ಸಾಕಷ್ಟು ಮನನೊಂದಿದ್ದ ಯಶ್ ಅವರು ಮಾಧ್ಯಮ ದವರ ಜೊತೆ ಇದರ ಬಗ್ಗೆ ಮಾತಾಡುವಾಗ “ಈತರ ಮಾಡುವವರು ನನ್ನ ಅಭಿಮಾನಿಗಳೇ ಅಲ್ಲ, ದಯವಿಟ್ಟು ಇಂತಹ ಕೆಲಸವನ್ನು ಮಾಡಬೇಡಿ, ನಿಮ್ಮ ತಂದೆ ತಾಯಿ ಯನ್ನು ಚನ್ನಾಗಿ ನೋಡಿಕೊಳ್ಳಿ, ನಿಮ್ಮ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಿ” ಅದೇ ನನಗೆ ಕೊಡುವ ಗೌರವ ಎಂದು ಹೇಳಿದ್ದರು.

ಈ ಎಲ್ಲ ವಿದ್ಯಮಾನಗಳಿಂದ ಯಶ್ ರವರ ಧರ್ಮಪತ್ನಿಯಾಗಿದ್ದ ರಾಧಿಕಾ ಪಂಡಿತ್ ಅವರು ಸಹ ಬಹಳ ಬೇಸರಗೊಂಡಿದ್ದರು. ಈ ಸಮಯದಲ್ಲಿ ರಾಧಿಕಾ ಪಂಡಿತ್ ರವರು ಸಹ ಅಭಿಮಾನಿಯ ಕುಟುಂಬದ ನೆರವಿಗೆ ಧಾವಿಸಲು ನಿರ್ಧರಿಸಿದ್ದಾರೆ.

ಮೂಲಗಳಿಂದ ತಿಳಿದುಬಂದ ಪ್ರಕಾರ ರಾಧಿಕಾ ಪಂಡಿತ್ ಅವರು ರವಿ ಅಭಿಮಾನಿಯ ಕುಟುಂಬಕ್ಕೆ 5 ಲಕ್ಷ ಆರ್ಥಿಕ ನೆರವು ಹಾಗೂ ಇರುವುದಕ್ಕೆ ಒಂದು ಮನೆ ಕಟ್ಟಿಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಧಿಕಾ ಪಂಡಿತ್ ರವರ ಈ ನಡೆ ಭಾರೀ ಪ್ರಶಂಸೆಗೆ ವ್ಯಕ್ತವಾಗಿದೆ. ಆದರೆ ದಯವಿಟ್ಟು ಇನ್ನು ಯಾವ ಅಭಿಮಾನಿಗಳು  ಈ ರೀತಿಯ ದಾರಿ ಹಿಡಿಯಬಾರದು ಎಂದು ರಾಧಿಕಾ ಪಂಡಿತ್ ಅವರು  ಮನವಿ ಮಾಡಿಕೊಂಡಿದ್ದಾರೆ.

ಸ್ನೇಹಿತರೆ, ಒಂದು ವಿಷ್ಯ ಮನಸಿನಲ್ಲಿ ಇಟ್ಟುಕೊಳ್ಳಿ, ನಟರ ಮೇಲೆ ಅಭಿಮಾನ ಇರಲಿ, ಆದರೆ ಈರೀತಿ ಮಾತ್ರ ದಯವಿಟ್ಟು ಮಾಡಬೇಡಿ. ನಿಮ್ಮನ್ನು ಹೆತ್ತು , ಹೊತ್ತು ಸಾಕಿದ ಅಪ್ಪ ಅಮ್ಮ ನನ್ನ ಚನ್ನಾಗಿ ನೋಡಿ ಕೊಳ್ಳಿ, ನಿಮ್ಮ ಜೀವನವನ್ನು ಚನ್ನಾಗಿ ರೂಪಿಸಿಕೊಳ್ಳಿ, ಕಷ್ಟಪಟ್ಟು ಕೆಲಸ ಮಾಡಿ, ಜೀವನದಲ್ಲಿ ಮುಂದೆ ಬನ್ನಿ! ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನಿಗಳಾಗಬೇಡಿ.

ಈ ಸುದ್ದಿ ಇಷ್ಟ ಆದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.