ಬಿಜೆಪಿ ನಾಯಕರು ಹುಮ್ಮಸ್ಸು ಐಡಿಯಾ ಕಂಡು ಬೆರಗಾದ ಡಿಕೆ ಬ್ರದರ್ಸ್

ಬಿಜೆಪಿ ನಾಯಕರು ಹುಮ್ಮಸ್ಸು ಐಡಿಯಾ ಕಂಡು ಬೆರಗಾದ ಡಿಕೆ ಬ್ರದರ್ಸ್

0

ನೆನ್ನೆ ಡಿಕೆ ಬ್ರದರ್ಸ್ ಆಡಿದ ರಾಜಕೀಯ ಚದುರಂಗದಾಟಕ್ಕೆ ಒಂದು ಕ್ಷಣ ರಾಮನಗರ ಚುನಾವಣಾ ಕಣ ದೇಶದಲ್ಲೇಡೇ ಸುದ್ದಿ ಮಾಡಿತ್ತು. ಕೇವಲ ಎರಡು ದಿನಗಳು ಇರುವಾಗ ಬಿಜೆಪಿ ನಾಯಕನನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದ ಶಿವ ಕುಮಾರ್ ರವರ ರಾಜಕೀಯ ಚದುರಂಗದಾಟಕ್ಕೆ ಎಲ್ಲರೂ ಶಾಕ್ ಆಗಿದ್ದರು.

[do_widget id=et_ads-2]

ಇದೆ ಕ್ಷಣದಲ್ಲಿ ಚುನಾವಣೆ ನಿಲ್ಲಿಸುವುದಕ್ಕಾಗಿ ಬಿಜೆಪಿ ನಾಯಕರು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಆಫ್ ಪ್ಲಾನ್ ವಿಫಲವಾದರೆ ಬಿಜೆಪಿ ನಾಯಕರು ಸುಮ್ಮನೆ ಕೂರುತ್ತಾರೆ ಎಂದು ಡಿಕೆ ಶಿವಕುಮಾರ್ ಅವರು ಮತ್ತು ಅವರ ಸಹೋದರರು ಅಂದುಕೊಂಡಿದ್ದರು ಆದರೆ ಬಿಜೆಪಿ ನಾಯಕರ ಹುಮ್ಮಸ್ಸು ಮತ್ತು ಐಡಿಯಾ ಕಂಡು ಈಗ ಡಿಕೆ ಬ್ರದರ್ಸ್ ಬೆರಗಾಗುವಂತಹ ಪರಿಸ್ಥಿತಿ ಎದುರಾಗಿದೆ.

[do_widget id=et_ads-5]

ಅಷ್ಟಕ್ಕೂ ಬಿಜೆಪಿ ನಾಯಕರು ಏನು ಮಾಡಲು ಹೊರಟಿದ್ದಾರೆ ಗೊತ್ತಾ?

ತಮ್ಮ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರೂ ಬಹಿರಂಗವಾಗಿ ಜೆಡಿಎಸ್ ಪಕ್ಷದ ಅನಿತಾ ಕುಮಾರಸ್ವಾಮಿ ರವರಿಗೆ ಬೆಂಬಲ ಘೋಷಿಸಿದ್ದರೂ ತನ್ನ ನೆಲೆಯನ್ನು ರಾಮನಗರದಲ್ಲಿ ಇತ್ತೀಚೆಗೆ ಕಂಡುಕೊಳ್ಳುತ್ತಿದ್ದ ಬಿಜೆಪಿ ಪಕ್ಷದ ನಾಯಕರು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ, ಹೌದು ಮನೆಮನೆಗೆ ತೆರಳಿ ಬಿಜೆಪಿ ಪಕ್ಷದ ಪ್ರಚಾರ ಮಾಡಿ ಬಿಜೆಪಿಗೆ ಮತ ನೀಡುವಂತೆ ಕೋರಿಕೊಳ್ಳಲಿದ್ದಾರೆ. ಈಗ ಬಿಜೆಪಿ ಪಕ್ಷದ ಕಡೆ ಸಿಂಪತಿ ಮತಗಳು ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.

[do_widget id=et_ads-4]

ಒಂದು ವೇಳೆ ಅದೇ ನಡೆದು ಬಿಜೆಪಿ ಪಕ್ಷವು ಗೆದ್ದಲ್ಲಿ ಚಂದ್ರಶೇಖರ್ ರವರು ಇನ್ನೂ ಯಾವ ರೂಪ ತಾಳುತ್ತಾರೆಯೋ ಕಾದು ನೋಡಬೇಕಿದೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿರುವ ಡಿಕೆ ಶಿವಕುಮಾರ್ ಮತ್ತು ಸಹೋದರರು ಈ ಪ್ಲಾನ್ ಗೆ ಸೆಡ್ಡು ಹೊಡೆಯಲು ಮತ್ತೊಂದು ತಂತ್ರ ರೂಪಿಸಲು ಸಿದ್ಧರಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

[do_widget id=et_ads-3]