ಬಿಗ್ ಬ್ರೇಕಿಂಗ್: ವಾಟಾಳ್ ರವರಿಗೆ ಆಮಿಷವೊಡ್ಡಿದ ಕುಮಾರಸ್ವಾಮಿ !

ಬಿಗ್ ಬ್ರೇಕಿಂಗ್: ವಾಟಾಳ್ ರವರಿಗೆ ಆಮಿಷವೊಡ್ಡಿದ ಕುಮಾರಸ್ವಾಮಿ !

0

ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಉಪ ಚುನಾವಣೆಯದ್ದೇ ಮಾತು. ಅದರಲ್ಲಿಯೂ ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ಕ್ಷೇತ್ರವಾದ ರಾಮನಗರ ಕ್ಷೇತ್ರವು ಅಕ್ಷರಸಹ ರಣರಂಗವಾಗಿ ಮಾರ್ಪಟ್ಟಿದೆ. ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣ ವಾದರೆ ಬಿಜೆಪಿ ಪಕ್ಷವು ಹೇಗಾದರೂ ಮಾಡಿ ರಾಮನಗರದಲ್ಲಿ ಗೆದ್ದು ಜನರು ಮೈತ್ರಿ ಸರ್ಕಾರದ ವಿರುದ್ಧ ಇದ್ದಾರೆ ಎಂಬುದನ್ನು ನಿರೂಪಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ.

[do_widget id=et_ads-2]

ಅದರಂತೆಯೇ ಪ್ರತಿನಾಯಕನು ರಾಮನಗರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಟ್ಟುಕೊಂಡಿರುತ್ತಾನೆ. ಅದರಂತೆಯೇ ವಾಟಾಳ್ ನಾಗರಾಜ್ ರವರು ರಾಮನಗರದಿಂದ ಕಣಕ್ಕಿಳಿಯಲು ನಿರ್ಧರಿಸಿರುತ್ತಾರೆ. ಸದಾ ಸುದ್ದಿಯಲ್ಲಿರುವ ವಾಟಾಳ್ ನಾಗರಾಜ್ ರವರು ಒಂದು ವೇಳೆ ಕಣಕ್ಕೆ ಇಳಿದರೆ ತಮ್ಮ ಪತ್ನಿಯ ಮತಗಳು ಇಬ್ಬಾಗವಾಗಬಹುದು ಎಂದು ಕುಮಾರಸ್ವಾಮಿ ಅವರು ಯೋಚಿಸಿದಂತೆ ಕಾಣುತ್ತಿದೆ.

[do_widget id=et_ads-3]

ಅದಕ್ಕಾಗಿಯೇ ವಾಟಾಳ್ ನಾಗರಾಜ್ ರವರಿಗೆ ಒಂದು ವೇಳೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿದರೆ ಎಂ ಎಲ್ ಸಿ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ ಮುಖ್ಯಮಂತ್ರಿಯಾದ ಒಬ್ಬರು ತಮ್ಮ ಹೆಂಡತಿಯನ್ನು ಗೆಲ್ಲಿಸುವುದಕ್ಕಾಗಿ ಪಕ್ಷವೇ ಹೊಂದಿರದ ಒಬ್ಬ ರಾಜಕೀಯ ನಾಯಕನ ಜೊತೆ ಹುದ್ದೆಯ ಆಮಿಷವನ್ನು ನೀಡಿ ಹಿಂದಕ್ಕೆ ಸರಿಸುವುದು ಎಷ್ಟು ಸರಿ ಎಂಬುದು ನಮ್ಮ ವಾದ.

[do_widget id=et_ads-4]

ಒಂದು ವೇಳೆ ಈ ಆಮಿಷವೇ ನಿಜವಾಗಿದ್ದರೆ ಕುಮಾರಸ್ವಾಮಿ ಅವರು ಇಂತಹ ನಿರ್ಧಾರದಿಂದ ಹಿಂದೆ ಸರಿಯಬೇಕು. ಎಲ್ಲವೂ ಆಮಿಷದಿಂದ ನೆರವೇರಿಸಿ ಕೊಂಡರೆ ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರಲಿದೆ ಎಂಬುದು ನಮ್ಮ ಅಭಿಪ್ರಾಯ.

[do_widget id=et_ads-5]