ರಾಮನಗರ ಬಿಜೆಪಿ ಅಭ್ಯರ್ಥಿ ಫೈನಲ್: ಅಚ್ಚರಿ ಅಭ್ಯರ್ಥಿಗೆ ಟಿಕೆಟ್

ರಾಮನಗರ ಬಿಜೆಪಿ ಅಭ್ಯರ್ಥಿ ಫೈನಲ್: ಅಚ್ಚರಿ ಅಭ್ಯರ್ಥಿಗೆ ಟಿಕೆಟ್

0

ಇನ್ನು ಕೆಲವೇ ದಿನಗಳಲ್ಲಿ  ಉಪ ಚುನಾವಣೆ ನಡೆಯಲಿದೆ ಅದಕ್ಕಾಗಿ ಬಿಜೆಪಿ ಪಕ್ಷವು ರಾಮನಗರದಿಂದ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ ಬಿಜೆಪಿ ಅಧ್ಯಕ್ಷರಾದ ಶ್ರೀಯುತ ಬಿ ಎಸ್ ಯಡಿಯೂರಪ್ಪನವರು ಅಭ್ಯರ್ಥಿಗೆ ಬಿ ಫಾರ್ಮ್ ನೀಡಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ ಅಭ್ಯರ್ಥಿ ಯಾರು ಎಂಬುದನ್ನು ತಿಳಿಯಲು ಸಂಪೂರ್ಣ ಓದಿ.

[do_widget id=et_ads-2]

ಮೊದಲಿನಿಂದಲೂ ಟಿಕೆಟ್ ಆಕಾಂಕ್ಷಿಯಾಗಿ ಸ್ಥಳೀಯ ಮುಖಂಡರಾದ ರುದ್ರೇಶ್ ರವರು ಮುಂದಿನ ಸಾಲಿನಲ್ಲಿ ಕಂಡುಬರುತ್ತಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಯೋಗೇಶ್ವರ್ ಅವರ ಹೆಸರು ಸಹ ಕೇಳಿಬರುತ್ತಿತ್ತು ಆದರೆ ಬಿಎಸ್ ಯಡಿಯೂರಪ್ಪ ನವರು ಬಂಡಾಯ ಅಭ್ಯರ್ಥಿಯಾದ ಸಿಎಂ ಲಿಂಗಪ್ಪ ಅವರ ಪುತ್ರರಾದ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿದ್ದಾರೆ.

[do_widget id=et_ads-3]

ಸ್ಥಳೀಯ ಮುಖಂಡ ರುದ್ರೇಶ್ ರವರ ಒಮ್ಮತದ ಮೇರೆಗೆ ಈ ಟಿಕೆಟ್ ನೀಡಲಾಗಿದೆ. ಸೋಮವಾರ ಚಂದ್ರಶೇಖರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಸಿಎಂ ಲಿಂಗಪ್ಪ ರವರು ಮತ್ತು ಅವರ ಮಗ ಚಂದ್ರಶೇಖರ್ ಅವರು ಬಹಿರಂಗವಾಗಿಯೇ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

[do_widget id=et_ads-4]

ಚಂದ್ರಶೇಖರ್ ರವರು ಮೀಡಿಯಾಗಳ ಮುಂದೆ ಬಹಿರಂಗವಾಗಿ ಮೈತ್ರಿ ಸರ್ಕಾರದ ವಿರುದ್ಧ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದಿದ್ದರು. ಬಾರಿ ಜನಬೆಂಬಲವನ್ನು ಹೊಂದಿರುವ ಚಂದ್ರಶೇಖರ್ ರವರು ರಾಮನಗರದಲ್ಲಿ ಒಂದು ವೇಳೆ ಗೆದ್ದರೆ ಮೈತ್ರಿ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಬರುವುದಂತೂ ಸುಳ್ಳಲ್ಲ.

[do_widget id=et_ads-5]