ಆರ್ ಅಶೋಕ್ ತಲೆದಂಡ?? ಶೋಭಾ ಕರಂದ್ಲಾಜೆ ರವರಿಗೆ ಉಸ್ತುವಾರಿ?

ಆರ್ ಅಶೋಕ್ ತಲೆದಂಡ?? ಶೋಭಾ ಕರಂದ್ಲಾಜೆ ರವರಿಗೆ ಉಸ್ತುವಾರಿ?

0

ಬಿಜೆಪಿ ಪಕ್ಷದ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ ಪ್ರತಿಯೊಂದು ಚುನಾವಣೆಯಲ್ಲಿಯೂ ಪಕ್ಷವು ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತಿದೆ ಆದರೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗುತ್ತದೆ ಇದಕ್ಕೆ ಒಂದು ಕಾರಣ ಬಹುಮತ ಇಲ್ಲದಿರುವುದರಿಂದ ಮತ್ತು ಆಪರೇಷನ್ ಕಮಲ ವಿಫಲವಾಗುತ್ತಿರುವುದು ಬಿಜೆಪಿಗರ ನಿದ್ದೆಗೆಡಿಸಿದೆ..

ಅಷ್ಟಕ್ಕೂ ಈಗ ಯಾಕೆ ಆ ಸುದ್ದಿಯನ್ನು ಎನ್ನುತ್ತೀರಾ ಕೆಳಗಡೆ ಓದಿ ನಿಮಗೆ ತಿಳಿಯುತ್ತದೆ.

ಬಿಬಿಎಂಪಿ ಮೇಯರ್ ಚುನಾವಣೆ ನಡೆದು ಇನ್ನು ಕೆಲವೇ ಗಂಟೆಗಳು ಕಳೆದಿವೆ. ಬಿಜೆಪಿ ಪಕ್ಷವು ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಆರ್ ಅಶೋಕ್ ಊಹಿಸಿದ್ದರು. ಆದರೆ ಆಪರೇಷನ್ ಕಮಲ ಯಶಸ್ವಿಯಾಗದ ಕಾರಣ ಮತ್ತೊಮ್ಮೆ ಆರ್ ಅಶೋಕ್ ರವರಿಗೆ ಸೋಲಾಗಿ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಮೈತ್ರಿ ಸರ್ಕಾರಕ್ಕೆ ದೊರೆಯಿತು.

[do_widget id=et_ads-15]

ಬಿಬಿಎಂಪಿಯಲ್ಲಿ ಬಿಜೆಪಿಗೆ ಬಹುಮತ ವಿಲ್ಲದಿದ್ದರೂ ಅಶೋಕರವರು ಆಪರೇಷನ್ ಕಾರ್ಪೊರೇಟರ್ ಮಾಡಲು ಯತ್ನಿಸಿ ಸೋತದ್ದು ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರವನ್ನು ಉಂಟು ಮಾಡಿದ್ದು ಬಿಜೆಪಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.

ಇದೇ ಕಾರಣಕ್ಕಾಗಿಯೇ ಆರ್ ಅಶೋಕ್ ರವರ ತಲೆದಂಡ ವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ ಮತ್ತು ಆ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ತಂದು ಬೆಂಗಳೂರಿನ ಬಿಜೆಪಿ ಘಟಕದ ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ಕೆಲವು ಬಿಜೆಪಿ ಪಕ್ಷದ ಸಂಸದರು ಮತ್ತು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.