ಹಿಂದೂ ಧೋರಣೆ ವಿರುದ್ಧ ಸಿಡಿದೆದ್ದ ಬಿಜೆಪಿ ಸಂಸದ: ಕರಡಿ ಸಂಗಣ್ಣ

ಹಿಂದೂ ಧೋರಣೆ ವಿರುದ್ಧ ಸಿಡಿದೆದ್ದ ಬಿಜೆಪಿ ಸಂಸದ: ಕರಡಿ ಸಂಗಣ್ಣ

0

ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಮೇಲೆ ಹಲವು ಆರೋಪಗಳು ಕೇಳಿ ಬಂದಿವೆ ಅದರಲ್ಲಿಯೂ ಹಿಂದೂ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಈಗಾಗಲೇ ಮೈತ್ರಿ ಸರ್ಕಾರಕ್ಕೆ ದೊರಕಿದೆ.

ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಆದೇಶಗಳ ಮೇಲೆ ಆದೇಶಗಳನ್ನು ಮಾಡುತ್ತಾ ಹಿಂದೂ ಭಾವನೆಗಳನ್ನು ಕೆಣಕುತ್ತ ಬಂದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಇದಕ್ಕೆ ಒಳ್ಳೆಯ ನಿದರ್ಶನವೆಂಬಂತೆ, ಗಣೇಶ ಚತುರ್ಥಿಯ ಆಚರಣೆಯ ವೇಳೆಯಲ್ಲಿ ಹಲವು ಆದೇಶಗಳನ್ನು ಪಾಲಿಸುವಂತೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಮತ್ತು ಬಿಬಿಎಂಪಿ ಶರತ್ತುಗಳನ್ನು ವಿಧಿಸಿತ್ತು.

ಅದೇ ರೀತಿ ಗಣೇಶ ಚತುರ್ಥಿಯ ವೇಳೆಯಲ್ಲಿ ಡಿಜೆ ಹಾಕಿಸಬಾರದು ಎಂದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆದೇಶಿಸಿತ್ತು. ಇದನ್ನು ಕೊಪ್ಪಳ ಜಿಲ್ಲೆಯಲ್ಲಿ ಡಿಸಿ ರವರು ಪಾಲಿಸಲು ಹೋದಾಗ ಬಿಜೆಪಿ ಸಂಸದರಾದ ಕರಡಿ ಸಂಗಣ್ಣ ರವರು ಸಿಡಿದೆದ್ದಿದ್ದಾರೆ.

ಸಾಮಾನ್ಯವಾಗಿ ಶಾಂತಸ್ವರೂಪಿ ಗಳಾಗಿರುವ ಕರಡಿ ಸಂಗಣ್ಣನವರು ಡಿಜೆ ಹಾಕಿಸಿರುವುದು ಸರ್ಕಾರದ ದುಡ್ಡಿನಲ್ಲಿ ಅಲ್ಲ ನಮ್ಮ ದುಡ್ಡಿನಲ್ಲಿ ಮತ್ತು ನಮ್ಮ ಸ್ವಂತ ಖರ್ಚಿನಿಂದ ನಾವು ಆಚರಣೆ ಮಾಡುತ್ತಿದ್ದೇವೆ ಯಾರು ನಮಗೆ ಇಲ್ಲ ಅದನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.